
ಕುಂದಾಪುರ, ಮೇ.27; ಸಂತ ಮೇರಿ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಶಿಕ್ಷಕರಿಗೆ ಆಯೋಜಿಸಿರುವ ಪುನರ್ಶ್ಚೆತನ ಕಾರ್ಯಗಾರವು ಶಾಲಾ ಸಭಾಂಗಣದಲ್ಲಿ ದಿನಾಂಕ 27/05/2025 ರಂದು ಪ್ರಾರ್ಥನ ಗೀತೆ ಹಾಗೂ ದೀಪ ಬೆಳಗಿಸುವುದರೊಂದಿಗೆ ಆರಂಭಗೊಂಡಿತು ಈ ಕಾರ್ಯಗಾರದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರು ಸ್ಥಳೀಯ ಚರ್ಚಿನ ಪ್ರಧಾನ ಧರ್ಮಗುರುಗಳು ಅತೀ ವಂದನೀಯ ಗುರುಗಳಾದ ಪೌಲ್ ರೇಗೋ ವಹಿಸಿದ್ದರು.ಪುನರ್ಶ್ಚೆತನ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ರಾಯನ್ ಮಥಾಯಸ್ ಇವರು ಹಲವಾರು ಚಟುವಟಿಕೆಗಳ ಮೂಲಕ ಶಿಕ್ಷಕರನ್ನು […]

ಉಡುಪಿ; ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ ಉಡುಪಿ ಇದರ ಮಹಾಸಭೆಯು 27.05.2025 ರಂದು ಸಹಕಾರಿಯ ನೋಂದಾಯಿತ ಕಚೇರಿಯಲ್ಲಿ ಅಧ್ಯಕ್ಷರಾದ ಶ್ರೀಮತಿ. ಜೆಸಿಂತಾ ಡಿ ಸೋಜ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ದೇವರ ಸ್ತುತಿಯೊಂದಿಗೆ ಪ್ರಾರ್ಥನೆಯನ್ನು ಶಾಖಾ ಸಿಬ್ಬಂದಿಗಳು ನೆರವೇರಿಸಿದರು. ಕಾರ್ಯಕ್ರಮಕ್ಕೆ ಶ್ರೀ ಗುರುಚರಣ ಇವರು ಸ್ವಾಗತಿಸಿದರು, ಲೆಕ್ಕ ಪರಿಶೋಧನಾ ವರದಿ ವಾಚನೆ ಮತ್ತು ನಿರೂಪಣೆಯನ್ನು ಮುಖ್ಯಕಾರ್ಯನಿರ್ವಾಹಕರಾದ ಶ್ರೀ ಜೀವನ್ ಡಿ ಸೋಜ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಶೈಲೇಶ್ […]

ಕುಂದಾಪುರ: ಬದುಕಿನಲ್ಲಿ ಬರುವ ಸವಾಲುಗಳನ್ನು ಛಲದಿಂದ ಸ್ವೀಕರಿಸಿ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ ಎಸ್. ರಾಜಣ್ಣ ಅವರು ಹೇಳಿದರು.ಅವರು ಮೇಲೆ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ “ಪ್ರೇರಣಾ ಉಪನ್ಯಾಸ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಜೀವನದಲ್ಲಿ ಎದುರಿಸುವ ಅವಮಾನ ಕೀಳರಿಮೆ ಸೋಲುಗಳನ್ನು ಗೆಲುವಿನ ಸಾಧನೆಗೆ ಸೋಪಾನ ಮಾಡಿಕೊಳ್ಳಬೇಕು. ಈ ಜೀವನ ನನ್ನ ಸೌಭಾಗ್ಯ ವಾಗಿದೆ. ದೇವರು ನನಗೆ ಕೊಟ್ಟ ವರವಾಗಿದೆ. ಪ್ರಪಂಚ ಹೇಗೆ ನೋಡಲಿ ನಮ್ಮ ಸಾಧನೆಯ ಗುರಿ ನಿಚ್ಚಳವಾಗಿರಬೇಕು. ಕೇವಲ ಗುರಿಯನ್ನು ಮಾತ್ರ […]

ಬೈಂದೂರು: ಮನೆಯಲ್ಲಿ ಸಾಕು ನಾಯಿಯನ್ನೇ ವ್ಯಕ್ತಿಯೋರ್ವ ಬೈಕ್ನ ಹಿಂಬದಿಯ ಸರಪಳಿಯಿಂದ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋದ ಅಮಾನವೀಯ ಘಟನೆ ಬೈಂದೂರಿನಲ್ಲಿ ನಡೆದಿದೆ.ಶನಿವಾರ ಸಂಜೆ ಸಮಯದಲ್ಲಿ ಬೈಂದೂರು ಪೇಟೆಯಿಂದ ಹೆದ್ದಾರಿ 66ರಲ್ಲಿ ಬೈಂದೂರು ಪಡುವರಿ ನಿವಾಸಿ ತನ್ನ ಸಾಕು ನಾಯಿಯನ್ನು ಬೈಕ್ನ ಹಿಂಬದಿ ಸರಪಳಿಯಿಂದ ಕಟ್ಟಿ 2 ಕಿ.ಮೀ. ದೂರದವರೆಗೆ ಎಳೆದೊಯ್ದಿದ್ದಾನೆ. ಇದನ್ನು ನೋಡಿದ ಸಾರ್ವಜನಿಕರು ಬೈಕನ್ನು ನಿಲ್ಲಿಸಿ ವಿಚಾರಿಸಿದಾಗ ಇದು ನಾನು ಮನೆಯಲ್ಲಿ ಸಾಕಿದ ನಾಯಿ ನೀವ್ಯಾರು ಕೇಳುವುದಕ್ಕೆ ಎಂದು ಪ್ರಶ್ನಿಸಿದ್ದಾರೆ. ಆ ಬಳಿಕ ಸಾರ್ವಜನಿಕರು ಆಕ್ರೋಶ […]

ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಪಂಚಗಂಗಾವಳಿ ಶಾಶ್ವತ ಅಂಚೆ ಮೊಹರು ಮೇ 23 ರಂದು ಬಿಡುಗಡೆಗೊಂಡಿತು. ಉಡುಪಿ ವಿಭಾಗದ ಅಂಚೆ ಇಲಾಖೆಯ ಅಧೀಕ್ಷಕ ರಮೇಶ ಪ್ರಭು ಅಧಿಕೃತವಾಗಿ ಅತಿಥಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.“ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ‘ಪಂಚಗಂಗಾವಳಿ’ ಬಗ್ಗೆ ತುಂಬ ಕುತೂಹಲ ಹೊಂದಿದ್ದರು. ಕುಂದಾಪುರದ ಮಹತ್ವ ತಿಳಿಸುವ, ಮೊಹರು ಮಾಡಬೇಕೆಂಬ ಆಶಯ ನಮಗಿತ್ತು. ‘ಪಂಚಗಂಗಾವಳಿ’ ನದಿಗಳು ಕುಂದಾಪುರ ತಾಲೂಕಿನಲ್ಲಿ ಹರಿಯುತ್ತಿದ್ದು, ದೇಶದಲ್ಲೇ ವಿಶಿಷ್ಟ ಸ್ಥಾನ ಹೊಂದಿದೆ ಎಂದು […]

ಕುಂದಾಪುರ: ಅಂಗವಿಕಲರ ಕಲ್ಯಾಣಕ್ಕೆ ಬದ್ಧರಾಗಿರುವ ವಿಶೇಷಚೇತನ ಸಮಾಜ ಸೇವಕ ಪದ್ಮಶ್ರೀ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಮೇ 26ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರೇರಣಾ ಉಪನ್ಯಾಸವನ್ನು ನೀಡಲಿದ್ದಾರೆ.ರಾಜಣ್ಣ ಅವರು ಬಾಲ್ಯದಲ್ಲಿಯೇ ಕೈಕಾಲು ಕಳೆದುಕೊಂಡಿದ್ದರೂ ವಿವಿಧ ಕ್ಷೇತ್ರಗಳಲ್ಲಿ ಅದ್ಬುತ ಸಾಧನೆ ಮಾಡಿ, ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ನೀಡಿ ಸಾವಿರಾರು ಮಂದಿ ವಿಶೇಷಚೇತನರಿಗೆ ಸ್ವಾವಲಂಬಿಗಳಾಗುವಂತೆ ಮಾಡಿದ್ದಾರೆ.*ತಮ್ಮ ಅಂಗವೈಕಲ್ಯವನ್ನು ಗೆಲುವಾಗಿಸಿಕೊಂಡವರು ರಾಜಣ್ಣ *ಬಾಲ್ಯದಲ್ಲಿಯೇ ಪೋಲಿಯೋ ರೋಗಕ್ಕೆ ತುತ್ತಾಗಿ ಎರಡೂ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿದ್ದ ಡಾ. ಕೆ.ಎಸ್. ರಾಜಣ್ಣ ಅವರ […]

ಮಂಗಳೂರು, ಮೇ 2025: ಭಾರತದ ಪ್ರಮುಖ ಐಷಾರಾಮಿ ಪೀಠೋಪಕರಣಗಳು ಮತ್ತು ಗೃಹಾಲಂಕಾರ ಬ್ರಾಂಡ್ ಆದ ಸ್ಟಾನ್ಲಿ ಲೈಫ್ಸ್ಟೈಲ್ಸ್, ಮಂಗಳೂರಿನಲ್ಲಿ ತನ್ನ ಮೊದಲ ಅಂಗಡಿಯನ್ನು VK ಗ್ರೂಪ್ ಜೊತೆಗೆ ಪಾಲುದಾರಿಕೆಯಲ್ಲಿ ತೆರೆಯುವುದಾಗಿ ಘೋಷಿಸಲು ಉತ್ಸುಕವಾಗಿದೆ. ಈ ಹೈಬ್ರಿಡ್ ಅಂಗಡಿಯು ಡಿ.ನಂ. 3-9-51, ಶರ್ಬತ್ಕಟ್ಟೆ, ಯೆಯ್ಯಾಡಿ, ವಿಮಾನ ನಿಲ್ದಾಣ ರಸ್ತೆ, ಮಂಗಳೂರು ನಲ್ಲಿರುವ ಸ್ಟಾನ್ಲಿ ಬೂಟೀಕ್ ಮತ್ತು ಸೋಫಾಗಳು & ಇನ್ನಷ್ಟುಗಳ ಸಂಸ್ಕರಿಸಿದ ಸೊಬಗನ್ನು ಸಂಯೋಜಿಸುತ್ತದೆ. ಹೊಸ ಅಂಗಡಿಯು ಮಂಗಳೂರಿನ ವಿವೇಚನಾಶೀಲ ಮನೆಮಾಲೀಕರಿಗೆ ವಿಶಿಷ್ಟವಾದ, ಎಲ್ಲವನ್ನೂ ಒಳಗೊಳ್ಳುವ ಪೀಠೋಪಕರಣಗಳ ಶಾಪಿಂಗ್ […]

ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು,ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬೊಂಡಾಲ […]

ಕಲ್ಯಾಣಪುರ,ಮೇ 23, 2025 ರಂದು, ಮಿಲಾಗ್ರಿಸ್ ಕಾಲೇಜಿನ ಕಲ್ಲಿನ್ಪುರದ ವಾಣಿಜ್ಯ ವಿಭಾಗವು ಒಂದು ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಿತು, ಇದು ಇಲಾಖೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ಭೇಟಿ ವರದಿ ಬಿಡುಗಡೆ ಮತ್ತು “ಲೆಕ್ಕಪತ್ರ ನಿರ್ವಹಣೆಗೆ ಮೂಲಭೂತ ಅಂಶಗಳು” ಎಂಬ ಆಡ್-ಆನ್ ಕೋರ್ಸ್ಗಾಗಿ ಪ್ರಮಾಣಪತ್ರಗಳ ವಿತರಣೆ ನಡೆಯಿತು. ಏಪ್ರಿಲ್ 12, 2025 ರಂದು ನಡೆಸಲಾದ ಕೈಗಾರಿಕಾ ಭೇಟಿಯು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಗುರುಚರಣ್ ಇಂಡಸ್ಟ್ರೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ […]