
ಮಂಗಳೂರು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋ ಸಿಯೇ ಶನ್ ಮಂಗಳೂರು ವಲಯದ 2022-23ನೇ ಸಾಲಿನ 21 ನೇ ವಾರ್ಷಿ ಕಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ಕ್ರಮ ಮಂಗಳೂರಿನ ಸೈ ಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿನಡೆಯಿತು.ದೀ ಪಬೆಳಗಿಸಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇಶನ್ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾ ಳ್, ಮಂಗಳೂರು ವಲಯ ಅತ್ಯು ತ್ತಮ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಾ ಸುಭದ್ರಸಂಘಟನೆ ಎಂದೆನಿಸಿದೆ ಎಂದು ಶ್ಲಾಘಿಸಿದರು.2023-25ನೇ ಸಾಲಿನ ನೂತನ […]

ಬಸ್ರೂರು: ಬಸ್ರೂರು ಕೆಳಪೇಟೆಯ ಆಶುರ್ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ ನಡೆಯಿತು. ಮೊಹರಂ . ಚರಣೆ ಕಾರ್ಯಕ್ರಮದ ಅಧ್ಯಕ್ಷ ಫಾರೂಕ್ ಸಾಹೇಬ್ ನೀರೋಣಿ, ಉಪಾಧ್ಯಕ್ಷ ಇರ್ಷಾದ್ ಸಾಹೇಬ್ . ಪಾನಕದಕಟ್ಟೆ ಕಾರ್ಯದರ್ಶಿ ಶೇಖ್ ಇರ್ಫಾನ್, ದರ್ಗಾ ಕಮಿಟಿ. ಅಧ್ಯಕ್ಷ ಲಾಲಾಅನ್ವರ್, ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಅಜೀಜ್ ನೀರೋಣಿ ಮತ್ತುಜಮಾತಿನ ಬಾಂಧವರು ಉಪಸ್ಥಿತರಿದ್ದರು.

ಬೀಜಾಡಿ:ಪ್ರಾಣಿ,ಪಕ್ಷಿ,ಮಾನವ ಜೀವಿಸುವ ಈ ಭೂಮಿಯಲ್ಲಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಲ್ಲಿ ದೊಡ್ಡ ಸಮಸ್ಯೆ ಸೃಷ್ಠಿಯಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕರು ಜಲ ರಕ್ಷಣೆಗೆ ಬದ್ಧರಾಗಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್ ಮಾಜಿ ಅಧ್ಯಕ್ಷ ಮಂಜುನಾಥ ಕೆ.ಎಸ್ ಹೇಳಿದರು.ಅವರು ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ಮತ್ತು ಬೀಜಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ನಡೆದ ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಸಮಾರಂಭದ […]

ಉಡುಪಿ.ಜು.2: ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಮತ್ತು ಮಹಿಳೆಯರ ಮೇಲೆ ಅಮಾನವೀಯ ಲೈಗಿಂಕ ಹಲ್ಲೆ ಖಂಡಿಸಿ ಬ್ರಹತ್ ಜಾಥಾಕ್ಕೆ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು. ನಂತರ ಜಾಥಾ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಷ ನಡೆಯಿತು.ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಖ್ಯಾತ ಮಾಧ್ಯಮ ವಿಶ್ಲೇಷಕ ಶಿವಸುಂದರ್ ಅವರು, ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, […]

ಕುಂದಾಪುರ, 2 93 ದಿನಗಳ ಹಿಂದೆ ಮಣಿಪುರದಲ್ಲಿ ನಡೆದ ಬೆತ್ತಲೆ ಮೆರವಣಿಗೆ ಅತ್ಯಾಚಾರದ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ಮೌನವಾಗುವ ಮೂಲಕ ಇಡೀ ದೇಶವೇ ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ. ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ ‘ಮಣಿಪುರದ ಜನಾಂಗೀಯ ಕಲಹವನ್ನು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದ ಅವರು, ಸಂಸತ್ ಕಲಾಪದಲ್ಲಿ […]

ಮಂಗಳೂರು : ಸಮಕಾಲೀನ ಕಾಲದಲ್ಲಿ ಲಭ್ಯವಿರುವ ಹಲವಾರು ವೃತ್ತಿ ಆಯ್ಕೆಗಳೊಂದಿಗೆ, ವೃತ್ತಿ ಮಾರ್ಗದರ್ಶನ ಅಧಿವೇಶನದ ಪಾತ್ರವು ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ, ಜೀವಶಾಸ್ತ್ರ ವಿಭಾಗವು ಜುಲೈ 28 ರಂದು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಸೆಷನ್ ಅನ್ನು ಸಭಾಂಗಣದಲ್ಲಿ ಆಯೋಜಿಸಿದೆ.ವಿಜ್ಞಾನ ವಿಭಾಗದ ಮಾರ್ಚ್ 2023 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಪ್ರಶಸ್ತಿ ತಂದುಕೊಟ್ಟ ಸಾಧಕರನ್ನು ಸನ್ಮಾನಿಸಲಾಯಿತು. ಟಾಪರ್ಗಳಾದ ಸಮೃದ್ಧಿ ಡಿ, ಅನನ್ಯಾಮಧು, ವಂದನ್ರಸ್ಕಿನ್ಹಾ ಮತ್ತು ಜಿ ನಿಶಾಬಂಗೇರ ಹಾಗೂ […]

ಕುಂದಾಪುರ: ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೇಮಿಕ ಇವರು ದೀಪವನ್ನು ಬೆಳಗಿಸಿ ಮಾತನಾಡಿ ಕ್ಲಬ್ಬಿನ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೋ, ಜಗನ್ನಾಥ್ ಮೊಗೇರ ಪದ ಪ್ರದಾನ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಇತರರಿಗೆ ಸಹಾಯ ಮಾಡುವ, ಗೌರವವನ್ನು ನೀಡುವ ಹಾಗೂ ಅಂತರಾಷ್ಟ್ರೀಯ ಅರಿವು ಮೂಡಿಸುತ್ತದೆ ಎಂದರು. […]

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೇಜು ಆಡಳಿತ ಮಂಡಳಿಯು ಡಾ.ಶುಭಕರ ಆಚಾರಿ ಅವರನ್ನು 1ಆಗಸ್ಟ್ 2023ರಿಂದ ಪ್ರಾಂಶುಪಾಲರಾಗಿ ನೇಮಕ ಮಾಡಿದೆ.ಕಾಲೇಜಿನ ಜನಪ್ರಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ. ಡಾ.ಶುಭಕರಾಚಾರಿ ಅವರು ಮೂಲತಃ ತೀರ್ಥಹಳ್ಳಿಯ ಗಬಡಿ ಗ್ರಾಮದ ಸೀತಾರಾಮ ಆಚಾರ್ಯ ಮತ್ತು ಇಂದಿರಾ ಅವರ ಪುತ್ರ ಶುಭಕರಾಚಾರಿ ತೀರ್ಥಹಳ್ಳಿಯ ತುಂಗಭದ್ರಾ ಮಹಾವಿದ್ಯಾಲಯಲ್ಲಿ ಪದವಿ ಶಿಕ್ಷಣದ ನಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದು ಡಾಕ್ಟರೇಟ್ ನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು.ಸುಮಾರು 30 ವರ್ಷಗಳ ಸುದೀರ್ಘ […]

ಕುಂದಾಪುರ, ಜು.31: ‘ಆಟ ಪಾಠ ಊಟ ಇದು ಮನುಷ್ಯನಿಗೆ ಬೇಕಾಗಿರುವ ಅಗತ್ಯವಾದ ವಿಷಯಗಳು, ಅದರಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನದು ಆಟ, ನಮ್ಮ ಎಳೆಯವಲ್ಲಿ ಇದನ್ನೆ ಶಾಲೆಯಲ್ಲಿ ನಿರೀಕ್ಷಿಸುತ್ತಿದ್ದೆವು. ಆಟಗಳಿಂದ ನಮ್ಮ ಶರೀರ ಸುಧ್ರಡವಾಗುತ್ತದೆ. ಸೋಲು ಗೆಲುವು ಇದ್ದದೆ ಆದರೆ ಆಟದಲ್ಲಿ ನಮ್ಮನು ನಾವು ತೊಡಗಿಕೊಳ್ಳಬೇಕು, ನೀವು ಆಟದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು, ಈ ಆಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ, ತಾಲ್ಲೂಕಿನಿಂದ ಜಿಲ್ಲೆ, ಜಿಲ್ಲೆಯಿಂದ ರಾಜ್ಯ, ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ, ರಾಷ್ಟ್ರೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತಹ ಗುರಿಯನ್ನು […]