
ಶ್ರೀನಿವಾಸಪುರ 1 : ತಾಲೂಕಿನ ರೋಣೂರು ಕ್ರಾಸ್ನ ವಿಐಪಿ ಕಾಲೇಜಿನಲ್ಲಿ ಬುಧವಾರ ಪಿಯುಸಿ ಫಲಿತಾಂಶದ ಅಂಗವಾಗಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.ನಮ್ಮ ಶಾಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೂ ಇದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗುಣಮಟ್ಟದ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳು ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್.ವೇಣುಗೋಪಾಲ್ರೆಡ್ಡಿ ತಿಳಿಸಿದರು.ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಟ್ಟಣದಲ್ಲಿ ನಮ್ಮ ಬ್ರಾಂಚ್ಗೆ ಸಂಬಂದಿಸಿದಂತೆ ಪಿಯುಸಿ ಕಾಲೇಜು ಪಟ್ಟಣದಲ್ಲಿನ ಹಾಗು ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಯುಸಿ ಕಾಲೇಜನ್ನು […]

ಬೆಂಗಳೂರು, ಏಪ್ರಿಲ್ 8: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2024-25ನೇ ಸಾಲಿನ ರಾಜ್ಯವಲಯ ಮತ್ತು ಜಿಲ್ಲಾವಲಯ ಕಾರ್ಯಕ್ರಮಗಳಲ್ಲಿ ಸಾಧಿಸಿರುವ ಪ್ರಗತಿ ಹಾಗೂ ಮುಂದಿನ 2025-26ನೇ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಇಂದು (ಮಂಗಳವಾರ) ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆಯುಕ್ತ ಅಕ್ರಂ ಪಾಷಾ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಮಾಲೋಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಇಲಾಖೆಯ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು, ಯೋಜನಾ ನಿರ್ವಾಹಕರು, ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ, ಪ್ರಸ್ತುತ ಯೋಜನೆಗಳ ಪರಿಣಾಮಕಾರಿತ್ವದ […]

ಶ್ರೀನಿವಾಸಪುರ : ಈ ಸಮಾಜದಲ್ಲಿ ತುಂಬಾ ಬಡ ಕುಟುಂಬಗಳು ಹೆಚ್ಚಾಗಿದ್ದು, ಅವರ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಸಮತಾ ಸೈನಿಕ ದಳದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಾನು ಶೇಕಡ 95 ರಷ್ಟು ನಿಮ್ಮ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ ಆಶ್ವಾಸನೆ ವ್ಯಕ್ತಪಡಿಸಿದರು. 5 ಬಾರಿ ಶಾಸಕರನ್ನಾಗಿ ಮಾಡಿದ್ದೀರಿ, ತಾಲೂಕಿನ ಅಭಿವೃದ್ಧಿಗಾಗಿ ಕೈಗಾರಿಕಾ ವಲಯವನ್ನು ಸ್ಥಾಪಿಸಿ, ಯುವ ಜನಾಂಗ ಹಾಗು ರೈತರ ಅಭಿವೃದ್ಧಿಗಾಗಿ ಹಗಲಿರಲು ಶ್ರಮಿಸುತ್ತಿದ್ದೇನೆ. ಮುಳಬಾಗಿಲು ಮತ್ತು […]

ಶ್ರೀನಿವಾಸಪುರ : ತಾಲೂಕಿನ ಕೇತುಗಾನಹಳ್ಳಿ ಗ್ರಾಮದ ಬಳಿ ಮತ್ತೆ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ತಳ್ಳಾಟ, ತೊರಾಟಗಳ ನಡುವೆ ಸಂಘರ್ಷ ನಡೆಯಿತು. ಶನಿವಾರ ಬೆಳ್ಳಂಬೆಳಗ್ಗೆ ಏಕಾಏಕಿ ತೆರವು ಮಾಡಿದ್ದ ಪ್ರದೇಶದಲ್ಲಿ ಟ್ರಾಕ್ಟರ್ನಲ್ಲಿ ಉಳುಮೆ ಮಾಡಲು ಮುಂದಾಗಿದ ಸ್ಥಳೀಯ ರೈತರು. ಕೋರ್ಟ್ ಅನುಮತಿ ಪಡೆದು ಉಳುಮೆ ಮಾಡಲು ಮುಂದಾಗಿರುವುದಾಗಿ ರೈತರು ವಾದ. ಉಳಿಮೆ ಮಾಡಲು ಪ್ರಾರಂಭಿಸಿದ್ದ ರೈತರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು. ಮೂಕ ಪ್ರೇಕ್ಷಕರಂತಾಗಿರುವ ಅರಣ್ಯ ಸಿಬ್ಬಂದಿ. ನಾಲ್ಕೈದು ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿದ […]

ಶ್ರೀನಿವಾಸಪುರ : ಹನ್ನೊಂದನೆಯ ಶತಮಾನದ ಆದಿಕವಿ. ಪ್ರಥಮ ವಚನಕಾರ , ಬಸವಪೂರ್ವ ಯುಗದ ಶಿವಶರಣ, ಸಾಮಾಜಿಕ ನ್ಯಾಯದ ಆದಿ ಸಿದ್ದಾಂತಿ, ಹೆಣ್ಣು-ಗಂಡು ಮೇಲು-ಕೀಳು, ಜಾತಿ-ಪಂಥ ಆಚರಣೆಗಳ ಭೇದಗಳನ್ನು ಗುರುರ್ತಿಸಿ, ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ , ಎಳೆಎಳೆಯಾಗಿ ಬಿಡಿಸಿ ತೋರಿಸಿದ ವಚನಕಾರ ಇಂತಹ ಮಾಹಾ ಪುರಷರು ಸಮಾಜದ ಉದ್ದಾರಕ್ಕಾಗಿ ಅನೇಕ ರೀತಿಯಾದ ವಚನಗಳ ಮೂಲಕ ತಿಳಿ ಹೇಳಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದು, ಎಲ್ಲರೂ ಸಹ ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು […]

ಶ್ರೀನಿವಾಸಪುರ : ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ರವರು ಈ ದೇಶದಲ್ಲಿ ಅತಿ ಹೆಚ್ಚು ವಿದ್ಯಾವಂತರಾಗಿ, ಪದವಿಧರರಾಗಿ, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯು ಮುನ್ನೆಡೆಯಲು ಸಂವಿಧಾನವನ್ನು ರಚಿಸಿ, ಮಹನೀಯ , ಮಹಾನುಭಾವನಿಗೆ ಶತಕೋಟಿ ನಮನಗಳು ತಿಳಿಸುತ್ತಾ, ಅವರ ಜಯಂತಿಯನ್ನು ಅದ್ದೂರಿಯಾಗಿ ನಾವೆಲ್ಲರೂ ಆಚರಣೆ ಮಾಡಬೇಕು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ರಾಷ್ಷ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಬಾಬು ಜಗಜೀವನ್ರಾಮ್ ಹಾಗು ಡಾ|| ಬಿ.ಆರ್.ಅಂಬೇಡ್ಕರ್ರವರ ಜಯಂತಿಗಳನ್ನು ಆಚರಣೆಯ ಬಗ್ಗೆ ಪೂರ್ವಬಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಸಧ್ಯ ಇರುವ […]

ಶ್ರೀನಿವಾಸಪುರ: ಪಟ್ಟಣದಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಮರು ಪಾದಯಾತ್ರೆಯ ಮೂಲಕ ಈದ್ಗಾ ಮೈದಾನವನ್ನು ತಲುಪಿದರು ಮತ್ತು ಬೆಳಿಗ್ಗೆ 9:45ಕ್ಕೆ ಸಾಮೂಹಿಕ ನಮಾಜ್ ಸಲ್ಲಿಸಿದರು.ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಮುಹಮ್ಮದ್ ಆಸಿಫ್ ಅವರು ಧಾರ್ಮಿಕ ಪ್ರವಚನ ನೀಡುತ್ತಾ, ಈದ್-ಉಲ್-ಫಿತರ್ನ ಮಹತ್ವ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶಗಳನ್ನು ವಿವರಿಸಿದರು. ಇಸ್ಲಾಮ್ ಧರ್ಮ ಶಾಂತಿ ಮತ್ತು ಸಹೋದರತ್ವದ ಸಂದೇಶ ಸಾರುತ್ತದೆಯೆಂದು ಹೇಳಿದರು. ಅವರು ರೋಜಾ (ಉಪವಾಸ) ಮತ್ತು ಜಕಾತ್ […]

(ಲೇಖನ 🖋️ ಶಬ್ಬೀರ್ ಅಹ್ಮದ್ ಪತ್ರಕರ್ತ ಶ್ರೀನಿವಾಸಪುರ) ಗ್ರಾಮೀಣ ಭಾರತದ ಹೃದಯವೆಂದೇ ಗ್ರಾಮ ಪಂಚಾಯತಿಗಳನ್ನು ಪರಿಗಣಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿವೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಮೇಲಿದೆ. ಒಬ್ಬ ಸಮರ್ಪಿತ ಮತ್ತು ದೃಢನಿಶ್ಚಯ ಹೊಂದಿರುವ ಪಿಡಿಓ ತನ್ನ ಗ್ರಾಮವನ್ನು ಮಾದರಿ ಗ್ರಾಮ ಪಂಚಾಯತಿಯಾಗಿ ರೂಪಿಸಬಲ್ಲನು. ಮಾದರಿ ಗ್ರಾಮ ಪಂಚಾಯತಿ ಎಂದರೇನು? ಮಾದರಿ ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿರುವ, ಸಮಗ್ರ […]

ಕೋಲಾರ : ಜಿಲ್ಲೆಯಾದಾದ್ಯಂತ ಸುಮಾರು 10ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ, ಒತ್ತುವರಿ ತೆರವು ಕಾರ್ಯ ಮುಂದುವರೆಸಲಾಗಿದೆ ಮತ್ತು ತೇರಹಳ್ಳಿ ಬೆಟ್ಟ ಹಾಗೂ ಅಂತರಗಂಗೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಕ್ರಮವಹಿಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ತಿಳಿಸಿದರು. ಕೋಲಾರ ನಗರ ಹೊರವಲಯದ ಉಪ ಅರಣ್ಯ ಸಂರಕ್ಷಣಾ ಇಲಾಖೆ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರಹಳ್ಳಿ ಬೆಟ್ಟದಲ್ಲಿ ಅರಣ್ಯ ಒತ್ತುವರಿಯಾಗಿದ್ದರೆ ಅಲ್ಲಿಯೂ ತೆರವುಗೊಳಿಸಲು ಬದ್ದವಾಗಿರುವುದಾಗಿ ತಿಳಿಸಿದರು. […]