
ಮಂಗಳೂರು: ರಾಜಕೀಯ ಪಕ್ಷಗಳ ನಾಯಕರು ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ರಾಜಕಾರಣ ಮಾಡಬೇಕು. ಇಂದು ಮಕ್ಕಳಲ್ಲಿ ಕಾಣುತ್ತಿರುವ ರಾಜಕೀಯ ಹಾಗೂ ಸಿದ್ಧಾಂತ ದ್ವೇಷಕ್ಕೆ ಬದಲಾಗಿ ಶಾಂತಿ, ಸಮಾಧಾನ, ಪ್ರೀತಿಯ ರಾಜಕಾರಣ ಭವಿಷ್ಯವನ್ನು ರೂಪಿಸಬೇಕು ಎಂದು ದ.ಕ. ಜಿಲ್ಲಾ ಮಾಜಿ ಜಿಲ್ಲಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂತಿಲ್ ಸಲಹೆ ನೀಡಿದ್ದಾರೆ. ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮತ್ತು ಸಾಮರಸ್ಯ ಮಂಗಳೂರು ಇವರ ಆಶ್ರಯದಲ್ಲಿ ಮಂಗಳವಾರ ನಗರದ ಪುರಭವನದಲ್ಲಿ ಸಂತ ಮದರ್ […]

ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ. ಎ. ವಿ. ಹೆಬ್ಬಾರ್ ಹಾಗೂ ದಿ. ಅವಿನಾಶ್ ಹೆಬ್ಬಾರ್ ಸಂಸ್ಮರಣೆ ಅಂಗವಾಗಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಕುಂದಾಪುರ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು.ಖ್ಯಾತ ವಿದ್ವಾನ್ ಭಾರ್ಗವ ಹೆಗಡೆ ಅವರಿಂದ ಸೀತಾರ್ ವಾದನ ಕಾರ್ಯಕ್ರಮ ನಡೆಯಿತು. ವಿಘ್ನೇಶ್ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಿದರು.ಕು. ನಿಹಾರಿಕಾ ದೇರಾಜೆ ಅವರಿಂದ ಹಿಂದುಸ್ತಾನಿ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ, ಹಾರ್ಮೋನಿಯಂನಲ್ಲಿ ಶಶಿಕಿರಣ್ ಮಣಿಪಾಲ ಮತ್ತು […]

ಉಡುಪಿ – ಚಿಕ್ಕ ಮಂಗಳೂರು ಸಂಸದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಕೊಂಕಣ ರೈಲ್ವೆ ಮಡಗಾವ್- ವೆಲಂಕಣಿ ಗೆ ಕುಂದಾಪುರ -ಉಡುಪಿ – ಮಂಗಳೂರು ಮಾರ್ಗ ವಾಗಿ ವಿಶೇಷ ರೈಲಿಗೆ ಆದೇಶ ಹೊರಡಿಸಿದೆ.ದಿನಾಂಕ 6/09/2024 ರಂದು ಮದ್ಯಾಹ್ನ 12.30 ಕ್ಕೆ ಮಡಗಾವ ದಿಂದ ಹೊರಟು ಸಂಜೆ 4.18 ಕ್ಕೆ ಕುಂದಾಪುರ 5.55 ಕ್ಕೆ ಮಂಗಳೂರು ತಲುಪಿ ಮರುದಿನ ಮದ್ಯಾಹ್ನ 12.25 ಕ್ಕೆ ವೆಲಂಕಣಿ ತಲುಪಲಿದೆ.ಅದೇ ರೀತಿ 7/09/2024 ರಾತ್ರಿ 11.55 ಕ್ಕೆ […]

ಕುಂದಾಪುರ : ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಆರಾಧನಾ ಮಹೋತ್ಸವದ ಅಂಗವಾಗಿ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಅವರ ಮನೆಯಲ್ಲಿ ಘರ್ ಘರ್ ಭಜನ್ ಕಾರ್ಯಕ್ರಮ ನಡೆಯಿತು. ದೇವಳದ ಜೊತೆ ಮೊಕ್ತೇಸರರು, ಸಲಹಾ ಸಮಿತಿಯ ಸದಸ್ಯರು ಹಾಗೂ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ಗ್ರಾಮದಲ್ಲಿ ಅಂಚೆ ಕಛೇರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ ಹರೀಶ್ ಆರ್, ಮತ್ತು ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ಸಂದೀಪ ಕುರಾಣಿ, ರಾಜು ನಾಯ್ಕ, ನಾಗರಾಜ ಹಾಗೂ ದಿನೇಶ್ ರವರ ತಂಡ ಸಿ.ಸಿ ಕ್ಯಾಮರಾದ ಪೂಟೇಜ್ ನ ಆಧಾರದ ಮೇಲೆ ಆರೋಪಿಯ ಪತ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡು ದಿನಾಂಕ 03.09.2024 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು […]

ಮಂಗಳೂರು, ದಿನಾಂಕ 03-09-2024ರಂದು ಶಾಂತಿಕಿರಣ್ ಸಭಾಭವನ ಬಜ್ಜೋಡಿ ಮಂಗಳೂರು ಇಲ್ಲಿ 2024ನೇ ವರ್ಷದಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಕಥೊಲಿಕ್ ಶಿಕ್ಷಣ ಮಂಡಳಿ(ರಿ) ಮಂಗಳೂರು ಇದರ ಅಧೀನದಪ್ರಾಥಮಿಕ, ಪೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸೇವೆ ನೀಡಿ ನಿವೃತ್ತಿ ಹೊಂದಿದಶಿಕ್ಷಕ/ಶಿಕ್ಷಕೇತರರನ್ನು, 2023-2024ರ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ./ಪಿಯುಸಿ/ ಪದವಿ ಹಾಗೂಸ್ನಾತ್ತಕೋತ್ತರ ಪರೀಕ್ಷೆಗಳಲ್ಲಿ ಅಧಿಕ ಅಂಕ/ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಮತ್ತು ಶೇಕಡಾ ನೂರು ಫಲಿತಾಂಶಗಳಿಸಿದ ಸಂಸ್ಥೆಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಮಂಗಳೂರು ಕಥೊಲಿಕ್ ಧರ್ಮ ಧರ್ಮಪ್ರಾಂತ್ಯದಧರ್ಮಾಧ್ಯಕ್ಷರೂ ಹಾಗೂ ಕಥೊಲಿಕ್ ಶಿಕ್ಷಣ ಮಂಡಳಿ ಅಧ್ಯಕ್ಷರೂ ಆದ […]

ಕುಂದಾಪುರ: ಪದವಿ ಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತದೆ. ರಾಜ್ಯಮಟ್ಟಕ್ಕೆ ಆಯ್ಕೆಯಾದ ಟೇಬಲ್ ಟೆನಿಸ್ ತಂಡದ ವಿದ್ಯಾರ್ಥಿನಿಯರಾದ ವಿಜ್ಞಾನ ವಿಭಾಗದ ಕ್ಷಮಾ ಗೌತಮ್, ಅಂಕಿತಾ ಹಾಗೂ ವಾಣಿಜ್ಯ ವಿಭಾಗದ ದೀಪ್ತಿಯವರಿಗೆ ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಬೋಧಕ ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.

To encourage leadership qualities, drive away stage fear and develop communication skills, the Catholic Sabha conducts annual Elocution Competitions at three levels – Parish, Varado and Diocese.On Sunday, 1st September, 2024 at 2.30 pm, Catholic Sabha Mount Rosary Parish organised parish level competitions in Konkani and Kannada streams in 4 and 3 age and class […]

ಕುಂದಾಪುರ (ಸೆ.2) : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ ಕೆ ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಇಂದು ವಿದ್ಯಾರ್ಥಿಗಳಿಗಾಗಿ ” ಮಕ್ಕಳು ಮತ್ತು ಕಾನೂನಿನ ಅರಿವು ” ಎಂಬ ವಿಷಯದ ಆಧಾರದ ಮೇಲೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ವಕೀಲೆ, ಲೇಖಕಿ, ಅಂಕಣಗಾರ್ತಿ, ಜೀವನ ಕೌಶಲ್ಯ ತರಬೇತುದಾರೆ ಹಾಗೂ ಬೆಂಗಳೂರಿನ ಅಸ್ಥಿತ್ವ ಲೀಗಲ್ ಟ್ರಸ್ಟ್ ನ […]