
JANANUDI.COM NETWORK ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ – ಗಾಂಧಿ ಜಯಂತಿ ಆಚರಣೆ ಸಂತ ಜೋಸೆಫರ ಪ್ರೌಢ ಶಾಲೆ, ಕುಂದಾಪುರ ಹಾಗೂ ರೋಟರಿ ಕ್ಲಬ್, ಕುಂದಾಪುರ ರಿವರ್ ಸೈಡ್ ಇದರ ಜಂಟಿ ಆಶ್ರಯದಲ್ಲಿ ಮಹಾತ್ಮಗಾಂಧಿಜೀಯವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥವಾಗಿ ಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ವಿಜೇತರಿಗೆ ರೋಟರಿ ಕ್ಲಬ್ನ ಅಧ್ಯಕ್ಷರಾದ ರೋ.ರಾಜು ಪೂಜಾರಿ ಬಹುಮಾನ ವಿತರಿಸಿ ಗಾಂಧಿಜೀಯವರ ಮೌಲ್ಯ ಆದರ್ಶಗಳನ್ನುಅಳವಡಿಸಿಕೊಳ್ಳಬೇಕು ಎಂದರು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವೈಲೆಟ್ ತಾವ್ರೊರವರು […]

ವರದಿ: ವಾಲ್ಟರ್ ಮೊಂತೇರೊ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಸ್ವಚ್ಛತಾ ಅಭಿಯಾನ ಸ್ವಚ್ಛತೆಯ ಮೂಲಕ ಗಾಂಧೀಜಿಗೆ ಶ್ರದ್ಧಾಂಜಲಿ ಸಲ್ಲಿಸೋಣ – ಸತೀಶ್ ಪೂಜಾರಿ ಸ್ವಚ್ಛತೆ ಎಂಬುದು ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆ, ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಸ್ವಚ್ಛತೆಯ ಪಾಠ ಹೇಳಿದ ಗಾಂಧೀಜಿಯವರ ತತ್ವಗಳಿಗೆ ನಮ್ಮ ಪರಿಸರವನ್ನು ಸ್ವಚ್ಛತೆಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಸಂಘದ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ ಹೇಳಿದರು. ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ […]

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ ಶ್ರೀನಿವಾಸಪುರದ ಪೊಲೀಸರು ಸೀಮೆ ಹಸು ಕಳ್ಳತನ ಮಾಡಿದ ಆರೋಪದ ಮೇಲೆ 4 ಮಂದಿಯನ್ನು ಬಂಧಿಸಿ ಟೆಂಪೋವೊಂದನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸಪುರ: ಇಲ್ಲಿನ ಪೊಲೀಸರು ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸೀಮೆ ಹಸುಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿ, ಅವರಿಂದ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಒಂದು ಬೊಲೆರೋ ವಾಹನ, ಒಂದು ಮೊಫೆಡ್ ಹಾಗೂ ರೂ.2.50 ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಶ್ರೀನಿವಾಸಪುರದ ಯೂಸೂಫ್, ಇರ್ಷಾದ್ ಖಾನ್, ಚಿಂತಾಮಣಿಯ ರಹಮತ್ ಉಲ್ಲಾ ಹಾಗೂ ಶಾಮೀರ್, ತಾಲ್ಲೂಕಿನ […]

JANANUDI.COM NETWORK ಕುಂದಾಪುರ ತಾಲೂಕು ಯುವ ಇಂಟಕ್ ಅಧ್ಯಕ್ಷರಾಗಿ ಶಶಿರಾಜ್ ಎಂ. ಪೂಜಾರಿ ನೇಮಕ. ಕುಂದಾಪುರದ ಶಶಿರಾಜ್ ಎಂ. ಪೂಜಾರಿಯವರನ್ನು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆದೇಶದ ಮೇರೆಗೆ ಕುಂದಾಪುರ ತಾಲೂಕು ಯುವ ಇಂಟಕ್ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಗಣೇಶ್ ಎನ್. ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

JANANUDI.COM NETWORK ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ “ಗಾಂಧೀಜಿಯ ತತ್ವಗಳನ್ನು ಪಾಲಿಸುವುದೆಂದರೆ ನಮ್ಮಲ್ಲಿರುವ ಮನಸಾಕ್ಷಿಯ ಪಿಸುಮಾತನ್ನು ಆಲಿಸಿದಂತೆ…ಗಾಂಧೀಜಿಯವರ ಧ್ಯೇಯ ಶತ್ರುವನ್ನು ನಾಶ ಮಾಡುವುದಲ್ಲ, ಬದಲಾಗಿ ಶತ್ರುತ್ವವನ್ನು ಕೊನೆಗಾಣಿಸುವುದಾಗಿತ್ತು. ಅಹಿಂಸೆಯಿಂದಾಗುವ ಪರಿಣಾಮವು ಹಿಂಸೆಯಿಂದಾಗುವ ಸೀಮಿತ ಪರಿಣಾಮಕ್ಕಿಂತ ವ್ಯಾಪಕ ಮತ್ತು ಸರ್ವಸಮ್ಮತವಾದುದು” ಎಂದು ಸಂಪನ್ಮೂಲ ವ್ಯಕ್ತಿ, ಉಡುಪಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ. ರಾಮದಾಸ ಪ್ರಭು ಇವರು ಕುಂದಾಪುರದ ಆರ್. ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸಮಾರಂಭದ ಅಧ್ಯಕ್ಷರಾದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ್ ಕುಮಾರ್ ಶೆಟ್ಟಿಯವರು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಸರಳತೆ ಮತ್ತು ಧೃಢತೆಯ ಮಹತ್ವವನ್ನು ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಿ.ಬಿ ಕೃಷ್ಣಮೂರ್ತಿ ಇವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರಿ ರವಿ ಉಪಾಧ್ಯ ಇವರು ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು.

JANANUDI.COM NETWORK ಬಸ್ರೂರು ಉದು೯ ಶಾಲೆ : ಗಾಂಧಿ ಜಯಂತಿ ಆಚರಣೆ ಮತ್ತು ಗುರುತಿನ ಚೀಟಿ ವಿತರಣೆ ಸ. ಹಿ. ಪ್ರಾ. ಶಾಲೆ. ಬಸ್ರೂರು (ಉದು೯) ಇಲ್ಲಿ ಮಹತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಸಂಭ್ರಮಿಸಲಾಯಿತು. ದೇಶದ ರಾಷ್ಟ್ರಪಿತ ಗಾಂಧೀಜಿಯವರ ಜೀವನವೇ ಒಂದು ಆದಶ೯ .ಆಗಭ೯ ಶ್ರೀಮಂತರಾಗೀದ್ದರು ಅತ್ಯಂತ ಸರಳ ಜೀವನ ನಡೆಸಿದ ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕವೆ ಸ್ವಾತಂತ್ರ್ಯ ಹೋರಾಟವನ್ನು ಸಂಘಟಿಸಿದರು… ಈ ಎಳೆಯ ವಯಸ್ಸಿನಲ್ಲಿ ಮಕ್ಕಳು ಅವರವರ ಜೀವನದ ಪಾಠವನ್ನು ಕರಗತ ಮಾಡಿ […]

ವರದಿ: ವಿಲ್ಪ್ರೆಡ್ ಮಿನೇಜೆಸ್ ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಳೂರು ಘಟಕದಿಂದ ಗಾಂಧಿ ಜಯಂತಿಯಂದು ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನ ಕುಂದಾಪುರ,ಒ.೪. ಕಥೋಲಿಕ್ ಸಭಾ ಪಿಯುಸ್ ನಗರ್, ಹಂಗ್ಲೂರು, ಕುಂದಾಪುರದವರು ಇಂದು ಸ್ವಚ್ಛ ಹಾಗೂ ನಿರ್ಮಲ ಪರಿಸರ ಅಭಿಯಾನವನ್ನು ಕುಂದಾಪುರ ಕೊಡಿ ಸಮುದ್ರ ತೀರವನ್ನು ಸ್ವಚ್ಛ ಗೋಳಿಸುವ ಮೂಲಕ ನೇರವೇರಿಸಿದರು. ನಿರ್ಮಲ ಪರಿಸರ ನಮ್ಮ ಕರ್ತವ್ಯವೆನ್ನುವ ಧೇಯವನ್ನು ಪರಿಸರ ನಿವಾಸಿಗರಿಗೆ ನೀಡಿದರು. ಕಥೋಲಿಕ್ ಸಭಾ ಪಿಯುಸ್ ನಗರದ ಅಧ್ಯಕ್ಷರಾದ ವಿಲ್ಫ್ರೆಡ್ ಮಿನೇಜಸ್ ರ ಸಮಾಕ್ಷದಲ್ಲಿ ಅಭಿಯಾನ ನಡೆಯಿತು. […]

JANANUDI.COM NETWORK ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್ ಕಬ್ಬಡಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ ಶಿರೂರಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ. ಪದವಿಪೂರ್ವಕಾಲೇಜಿನ ದ್ವಿತೀಯ ಪಿ.ಯು.ಸಿ. ಯ ವಿದ್ಯಾರ್ಥಿ ಆರ್. ಸೂರಜ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

JANANUDI.COM NETWORK ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ 19 ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ ೧೯ ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಶ ಎಸ್. ಶೆಟ್ಟಿ, ಸುಮಂತ್ ಉಡುಪ ಮತ್ತು ಕಿಶನ್ ಎಂ. ರಾವ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.