
ಕುಂದಾಪುರ: ಅ.31: ಇಂದು ಪ್ರಪಂಚದಲ್ಲಿ ಭಾರತ ಮಂಚೂಣಿ ಸ್ಥಾನ ಪಡೆಯಲು ಮತ್ತು ಇಡೀ ಪ್ರಪಂಚದ ನೋಟ ಭಾರತದತ್ತ ಬೀರಲು ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ನೆಹರು ಸಂಪುಟದಲ್ಲಿದ್ದ ದೇಶದ ಪ್ರಥಮ ಸಮರ್ಥ ಗ್ರಹ ಸಚಿವ ಸರ್ದಾರ್ ವಲ್ಲಭಾಯಿ ಪಟೇಲ್ ದೃಢ ನಿಲವು ದೂರ ದೃಷ್ಟಿ ಮತ್ತು ಸಮರ್ಥ ಆಡಳಿತ ಕಾರಣ. ದೇಶಕ್ಕೆ ಇಬ್ಬರು ನಾಯಕರು ಕಾಂಗ್ರೆಸ್ ಪಕ್ಷದ ಅಪೂರ್ವ ಕೊಡುಗೆಯಾಗಿದೆ ಎಂದು ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ […]

ಮೂಡ್ಲಕಟ್ಟೆ ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಭಾರತೀಯ ರೆಡ್ ಕ್ರಾಸ್ ಘಟಕ ಕುಂದಾಪುರ ಇದರ ಅಧ್ಯಕ್ಷರಾದ ಜಯಕರ ಶೆಟ್ಟಿ ಅವರು ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷರಾದ, ಐ ಎಂ ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೇಯವರಾದ ಡಾII ಪ್ರತಿಭಾ ಎಂ ಪಟೇಲ್ ಅವರು […]

ಕುಂದಾಪುರ : ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಸ್ಥಾಪಕರಾದ ಜೀನ್ ಹೆನ್ರಿ ಡುನಂಟ್ ಇವರ ಪುಣ್ಯ ತಿಥಿ ಯಾದ ಈ ದಿನ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ದ ಎದುರು ಆರೋಗ್ಯ ತಪಾಸಣೆ ಶಿಭಿರ ವನ್ನು ಆಯೋಜಿಸಲಾಯಿತು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ಗಾಟಿಸಿ ಪುಷ್ಪಾರ್ಚನೆ ಗೈದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಮತ್ತು […]

29 ಅಕ್ತೋಬರ್ (ಮಂಗ್ಳುರ್): ಆಶಾವಾದಿ ಪ್ರಕಾಶನಾನ್ ಸಾಂ ಜುಜೆ ಸೆಮಿನರಿಚ್ಯಾ ಸಭಾಸಾಲಾಂತ್ ’ಕೊಂಕಣಿ ರಂಗ್ಮಂಚ್ ಆನಿ ನಾಟಕಾಂಚೆರ್’ ಮಾಂಡುನ್ ಹಾಡ್ಲ್ಲೆಂ ಆದೇಸಾಚೆಂ ಪರಿಸಂವಾದ್ ಕಾರ್ಯೆಂ 29 ಅಕ್ತೋಬರ್ ತಾರಿಕೆರ್ (ಆಯ್ತಾರಾ) ಸಕಾಳಿಂ 10 ಥಾವ್ನ್ 1 ಪರ್ಯಾಂತ್ ಚಲ್ಲೆಂ. ಆಶಾವಾದಿ ಪ್ರಕಾಶನಾನ್ ಮಾ ದೊ ರೊನಾಲ್ಡ್ ಸೆರಾವೊಚ್ಯಾ ’ದಾನಿಯೆಲ್ ಆನಿ ಎಸ್ತೆರ್ ರಾಣಿ’ ನಾಂವಾಚಿಂ ದೋನ್ ಲಿಪಿಂನಿ ಪರ್ಗಟ್ಲೆಲಿಂ ದೋನ್ ನಾಟಕಾಂಚಿಂ ಪುಸ್ತಕಾಂ ತಶೆಂಚ್ ಪಯ್ಣಾರಿ ಡಿಜಿಟಲ್ ಕೊಂಕಣಿ ಸಾಹಿತಿಕ್ ಜರ್ನಲಾಚೆಂ ಉಗ್ತಾವಣ್ ಕಾರ್ಯೆಂ ಚಲವ್ನ್ ವ್ಹೆಲೆಂ. […]

ಕೊಲ್ಲೂರು: ತಾಯಿ ಮೃತಪಟ್ಟ ಶೋಕದಿಂದ ಪುತ್ರ ಮಾನಸಿಕವಾಗಿ ನೊಂದು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಪುತ್ರ ವಿಶ್ವನಾಥ (37) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ತಾಯಿ ಗಿರಿಜಮ್ಮ (63) ಅವರು ಅ. 26ರಂದು ಜೀವನದಲ್ಲಿ ಜುಗುಪ್ಸೆಗೊಂಡು ಕೀಟನಾಶಕ ಸೇವಿಸಿದ್ದರು. ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ಮಧ್ಯರಾರಿಯಲ್ಲಿ ಮೃತಪಟ್ಟಿದ್ದರು. ಮೃತರ ಅಂತ್ಯಸಂಸ್ಕಾರ ಮುಗಿಸಿದ ಬಳಿಕ ಮನೆಯಲ್ಲಿ ಪತಿ ಮತ್ತು ಪುತ್ರ ಮಲಗಿದ್ದರು. ಬೆಳಗ್ಗೆ ಪುತ್ರನ ಬಾಯಿಯಲ್ಲಿ ನೊರೆ ಬರುತ್ತಿರುವುದನ್ನು ಗಮನಿಸಿದ ಮನೆಯವರು ಸಂಶಯದಿಂದ ಆಸ್ಪತ್ರೆಗೆ ಕೊಂಡೊಯ್ದು […]

ಕುಂದಾಪುರ: ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಕುಂದಾಪುರ ಪರಿಸರ ಭಾಗದಲ್ಲಿ ಹಲವರು ಕಲೆಗಳಿವೆ ಅವುಗಳಿಗೆ ಇದರ ಉಪಯೋಗವಾಗಲಿ ಇವತ್ತಿನ ವರೆಗಿನ ಹಾದಿಯ ನನ್ನ ದುಡಿಮೆಯ 20ಶೇಕಡಾ ಮಾತ್ರ ನನಗಾಗಿ ಉಳಿದ 80ಶೇಕಡಾ ಸಮಾಜಕ್ಕಾಗಿ ಎಂಬ ಪಾಲಿಸಿ ಹಾಕಿಕೊಂಡು ಬರುತ್ತಿದ್ದೇನೆ. ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ಇದರ ಹಿಂದಿನ ಕೆಲಸಗಳು ಶ್ಲಾಘನೀಯ ಎಂದು ಹೇಳಿದರು.ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೇಡಿಯೋ ಕುಂದಾಪ್ರ […]

ಕುಂದಾಪುರ, ಅ.27: ಸ್ಥಳೀಯ ಹೋಲಿ ರೋಜರಿ ಇಂಗ್ಲಿಷ್ ಮಾಧ್ಯಮಾ ಶಾಲೆಯ ವಿದ್ಯಾರ್ಥಿಗಳಿಂದ “ರೋಸಾರಿಯನ್ ಕಲೆ ಕರಕುಶಲ ವಿಜ್ಞಾನ ವಸ್ತು ಪ್ರದರ್ಶನ” ಏರ್ಪಡಿಸಲಾಗಿತ್ತು.ಅ.27 ರಂದು ಇದರ ಉದ್ಘಾಟನೆಯನ್ನು ಶಾಲೆಯ ಜಂಟಿಕಾರ್ಯದರ್ಶಿಯಾಗಿರುವ ಅ.ವಂ. ಧರ್ಮಗುರು ಸ್ಟ್ಯಾನಿ ತಾವ್ರೊ ಕರಕುಶಲತೆಯಿಂದ ತಯಾರಿಸಲ್ಪಟ್ಟ ಚಿಟ್ಟೆಯ, ರೆಕ್ಕೆಗಳನ್ನು ತೆರೆದು ವಿಭಿನ್ನ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಶಾಲೆಯ ಹಳೆ ವಿದ್ಯಾರ್ಥಿ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಜತೆ ನೀಡಿದರು.“ನಾನು ಇಂದು ವಸ್ತುಪ್ರದರ್ಶನ ಸಭಾ ಭವನದಲ್ಲಿ ಪ್ರವೇಶಗೊಂಡಾಗ,ವಿದ್ಯಾರ್ಥಿಗಳು ತಮ್ಮ ಸ್ವಂತ ಕೈಗಳಿಂದ ನಿರ್ಮಿಸಲ್ಪಟ್ಟ ವಸ್ತು ಪ್ರದರ್ಶವನ್ನು ನೋಡಿ ನಾನು […]

ನಾಸ್ಕಾಮ್, ಭಾರತದಲ್ಲಿನ ತಾಂತ್ರಿಕ ಉದ್ಯಮದ ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಯಾಗಿದ್ದು ಭಾರತ ಮತ್ತು ವಿದೇಶ ಸೇರಿ 3000ಕ್ಕೂ ಅಧಿಕ ಕಂಪನಿಗಳು ಒಳಗೊಂಡಿದೆ ನಾಸ್ಕಂ ಫ್ಯೂಚರ್ಸ್ ಸ್ಕಿಲ್ಸ್ ಕೌಶಲ್ಯಗಳನ್ನು ಬೆಳೆಸುವಲ್ಲಿ ಭಾರತದ ವೇಗ ಹೆಚ್ಚಿಸಲು ಮತ್ತು ಉದಯೋನ್ಮುಖ ಹೊಸ ತಂತ್ರಜ್ಞಾನದಲ್ಲಿ ಪ್ರತಿಭಟಗಳಿಗೆ ಜಾಗತಿಕ ಕೇಂದ್ರವಾಗಲು ಉದ್ಯಮ ಚಾಲಿತ ಪರಿಸರ ಕಲಿಕಾ ವ್ಯವಸ್ಥೆ. ಈ ಸಂಸ್ಥೆಯೊಂದಿಗೆ ಎಂಐಟಿ ಕುಂದಾಪುರ ಒಡಂಬಡಿಕೆ ಮಾಡಿಕೊಂಡಿರುವುದು ವಿದ್ಯಾರ್ಥಿಗಳಿಗೆ ಅಭಿವೃದ್ದಿ ಹೊಂದಲು ಒಂದು ಸದಾವಕಾಶವಾಗಿದೆ. ಹಲವಾರು ಉದ್ಯೋಗಗಳಿಗೆ ಹಲವು ತಂತ್ರಜ್ಞಾನ ಕೌಶಲ್ಯಗಳಿಂದ ವಿದ್ಯಾರ್ಥಿಗಳನ್ನು ಭವಿಷ್ಯದ […]

ಅವಿಭಜಿತ ದ.ಕ. ಜಿಲ್ಲೆಯ ಏಕೈಕ ಸಹಕಾರಿ ಸಕ್ಕರೆ ಕಾರ್ಖಾನೆಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗುಜರಿ ಮಾರಾಟದಲ್ಲಿ 14 ಕೋಟಿಗೂ ಮಿಕ್ಕಿ ಭಾರೀ ವಂಚನೆ ಮಾಡಿರುವ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ವಿರುದ್ಧ ತನಿಖೆ ನೆಡೆಸುವಂತೆ ಉಡುಪಿ ಜಿಲ್ಲಾ ರೈತ ಸಂಘ ಖಾಸಗಿ ದೂರನ್ನು ಆಡಿಷಲ್ ಸಿವಿಲ್ ಜಡ್ಜ್ ಉಡುಪಿಯಲ್ಲಿ ದಾಖಲು ಮಾಡಿದ್ದು, ಇದೀಗ ಈ ದೂರನ್ನು ವಿಚಾರಣೆ ನಡೆಸಿದ ನ್ಯಾಯಧೀಶರು ಬೃಹತ್ ವಂಚನೆ ಕುರಿತು ಸೂಕ್ತ ತನಿಖೆ ಮಾಡಿ 12/12/2023ರ ಒಳಗೆ ನ್ಯಾಯಾಲಯಕ್ಕೆ ವರದಿ […]