
ಬಸ್ರೂರು, ಇಲ್ಲಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪಿಠೋಪಕರಣಗಳ ಕೊಡುಗೆಯನ್ನು ದಿ.ನಾರಯಣ ಶೆಟ್ಟಿ ಕೊಳ್ಕೆಬೈಲ್ ಸ್ಮರ್ಣಾರ್ಥ ಅವರ ಪುತ್ರರಾದ ಅನಿಲ್ ಪ್ರಸಾದ್ ಶೆಟ್ಟಿ ಮತ್ತು ಶಿವ ಪ್ರಸಾದ್ ಶೆಟ್ಟಿ ಇವರುಗಳು ನೀಡಿದ 80 ಸಾವಿರ ರೂ. ಮೌಲ್ಯದ ಪಿಠೋಪಕರಣಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿಯವರು ಶಾಲೆಗೆ ಹಸ್ತಾಂತರಿಸಿದರು.ದಾನಿಗಳಾದ ಅನಿಲ್ ಪ್ರಸಾದ್ ಶೆಟ್ಟಿಯವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ರಾಮ್ ಕಿಶನ್ ಹೆಗ್ಡೆ, ಗ್ರಾ.ಪಂ. ಸದಸ್ಯೆಯರಾದ ಇಂದಿರಾ ಪೂಜಾರಿ, ಮಾಲತಿ […]
ಶ್ರೀನಿವಾಸಪುರ : ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆಗಳಲ್ಲಿ ಶುದ್ಧವಾದ ಕುಡಿಯುವ ನೀರನ್ನು ಪಡೆಯುವುದಕ್ಕೆ ಪರದಾಡುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲೂಕಿನ ಉಪ್ಪರಪಲ್ಲಿ ಗ್ರಾಮದಲ್ಲಿ ಗುರುವಾರ 87.50 ಲಕ್ಷ ವೆಚ್ಚದಲ್ಲಿನ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಗ್ರಾಮದಲ್ಲಿ ಕೊಳವೆಬಾವಿ […]

ಕುಂದಾಪುರ: ನವೆಂಬರ್ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಆಯೋಜಿಸಿದ್ದ “ಬದುಕಿಗಾಗಿ ಇಂಧನ” ಎಂಬ ಕಾರ್ಯಕ್ರಮ ನಡೆಯಿತು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಉದ್ಘಾಟಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಪರಿಸರವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಂಚಬೇಕಾಗಿದೆ. ಇಂತಹ ಜಾಗೃತಿ ಕಾರ್ಯಕ್ರಮ ವಿದ್ಯಾರ್ಥಿಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಂತಾಗಲಿ ಎಂದು ಹೇಳಿದರು.ಕಾಲೇಜಿನ ವಿಶ್ವಸ್ಥರಾದ ಶ್ರೀ ಯು.ಎಸ್.ಶೆಣೈ ಮಾತನಾಡಿ ಇಂತಹ ಕಾರ್ಯಾಗಾರಗಳು ಇಲ್ಲಿಯೇ ನಿಲ್ಲಬಾರದು. ಇದು ಸಮಾಜದ ಎಲ್ಲಾ ನೆಲೆಗಳಿಗೆ ತಲುಪಬೇಕು ಎಂದು ಹೇಳಿದರು.ಈ […]

ಅಥೇನಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ ತನ್ನ ಹೊಸ ಶೈಕ್ಷಣಿಕ ವರ್ಷದ ಅಲೈಡ್ ಹೆಲ್ತ್ ಸೈನ್ಸಸ್ನ 7ನೇ ಬ್ಯಾಚ್, 20ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್, 14ನೇ ಬ್ಯಾಚ್ ಪಿಬಿಬಿಎಸ್ಸಿ, 12ನೇ ಬ್ಯಾಚ್ ಎಂಎಸ್ಸಿ ಮತ್ತು 21ನೇ ಬ್ಯಾಚ್ ಜನರಲ್ ನರ್ಸಿಂಗ್ ಕೋರ್ಸ್ಗಳ ಉದ್ಘಾಟನೆಯನ್ನು ಘೋಷಿಸಲು ಹೆಮ್ಮೆಪಡುತ್ತದೆ. 4ನೇ ನವೆಂಬರ್ ಮತ್ತು 8ನೇ ನವೆಂಬರ್ 2023 ರಂದು ಕಾಲೇಜು ಸಭಾಂಗಣದಲ್ಲಿ ಅನುಕ್ರಮವಾಗಿ, ಮತ್ತು ಮುಂದಿನ ಪೀಳಿಗೆಯ ಸಹಾನುಭೂತಿ ಮತ್ತು ನುರಿತ ಆರೋಗ್ಯ ವೃತ್ತಿಪರರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದೆ.ಸಮಾರಂಭದ ಅಧ್ಯಕ್ಷತೆಯನ್ನು […]

ಕುಂದಾಪುರ; ಟಿ.ಸಿ.ಎ ಉಡುಪಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶಾಲಾ ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾಟದ 2 ದಿನವಾದ ಮಂಗಳವಾರ ನಡೆದ ಹೈಸ್ಕೂಲ್ ವಿಭಾಗದ ಪಂದ್ಯಾಟದಲ್ಲಿ ಟಿ.ಎ ಪೈ ಪ್ರೌಢಶಾಲೆ ಉಡುಪಿ ಜಯ ಸಾಧಿಸಿತು. ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಟಿ.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ “ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ,ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೆ,ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ” ಎಂದರು. ಹೈಸ್ಕೂಲ್ ವಿಭಾಗದಲ್ಲಿ ಒಟ್ಟು ಎಂಟು ತಂಡಗಳ ನಡುವೆ ಲೀಗ್ ಹಂತದಲ್ಲಿ ರೋಚಕ […]

ಕುಂದಾಪುರ : ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಎಸ್.ಜಿ.ಜಿ.ಜಿ.ಡಿ ಚಾರಿಟೆಬಲ್ ಟ್ರಸ್ಟ್ ಕೋಟೇಶ್ವರ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಅಂಗವಾಗಿ ನ.12 ರಂದು ರವಿವಾರ ಮುಂಜಾನೆ 6:30 ರಿಂದ ಭಕ್ತಿ ಸಂಗೀತ ಲಹರಿ ಕಾರ್ಯಕ್ರಮ ಕುಂದಾಪುರದಲ್ಲಿ ಏರ್ಪಡಿಸಲಾಗಿದೆ.ಕುಂದಾಪುರ ವಿಠಲವಾಡಿಯ ಗೋವಿಂದ ನಗರದ ಡೌನ್ ಟೌನ್ ರೆಸಿಡೆನ್ಸಿಯಲ್ ಲೇಔಟ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಹಾಡಲಿದ್ದು, ತಬಲಾದಲ್ಲಿ ವಿಘ್ನೇಶ್ ಕಾಮತ್ ಕೋಟೇಶ್ವರ, ಹಾರ್ಮೋನಿಯಂನಲ್ಲಿ ಪ್ರಸಾದ ಕಾಮತ್ ಸಹಕರಿಸಲಿದ್ದಾರೆ. ನಿರಂತರ ಎರಡೂ ಗಂಟೆಗೂ ಹೆಚ್ಚು ಕಾಲ ಶಾಸ್ತ್ರೀಯ […]

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ನೂತನ ಕಾರ್ಯಾಲಯ /ಬಿಷಪ್ ಹೌಸ್ನ ಆಶೀರ್ವಾದ ಮತ್ತು ಶಿಲಾನ್ಯಾಸವು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ನ ಏವ್ ಮರಿಯಾ ಹಾಲ್ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಿತು.ವೇದಿಕೆಯಲ್ಲಿ ಉಡುಪಿಯ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೋ, ವಿಕಾರ್ ಜನರಲ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶ್ರೀ ಮತ್ತು ಶ್ರೀಮತಿ ಮೈಕೆಲ್ ಮತ್ತು ಫ್ಲಾವಿಯಾ ಡಿಸೋಜಾ ಮತ್ತು ಡಾ ಜೆರಿ ವಿನ್ಸೆಂಟ್ ಡಯಾಸ್ ಉಪಸ್ಥಿತರಿದ್ದರು.ಉಡುಪಿ ಧರ್ಮಪ್ರಾಂತ್ಯದ ಐದು ವಲಯ ಪ್ರಧಾನರಾದ, ಕಲ್ಯಾಣಪುರ ವಲಯದ ಅ|ವಂ| ಫಾದರ್ ವಲೇರಿಯನ್ ಮೆಂಡೋನ್ಕಾ, […]

ದೇರಳಕಟ್ಟೆ : ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ 26 ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನವನ್ನು 2023 ರ ನವೆಂಬರ್ 5 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಸಭಾಂಗಣದಲ್ಲಿ ನಡೆಯಿತು. ಡಾ.ಶ್ರೀಕರ್ ಮನು, ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಡಾ ಮನುಸ್ ಹೋಮಿಯೋಪತಿ ಸಂಸ್ಥಾಪಕರು ಮತ್ತು ಕಲ್ಕತ್ತಾ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ ಡಾ.ರಾಜತ್ ಚಟ್ಟೋಪಾಧ್ಯಾಯ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಸಮ್ಮೇಳನದಲ್ಲಿ ಸುಮಾರು 720 ಪ್ರತಿನಿಧಿಗಳು ಭಾಗವಹಿಸಿದ್ದರು. ಡಾ.ಶ್ರೀಕರ್ ಮನುಸ್ಪೋಕ್ […]

ಉಡುಪಿ, ತಾ.05,11.2023 ರಂದು ತೊಟ್ಟಂ ಸಂತಾ ಅನ್ನಮ್ಮ ಸಭಾಂಗಣದಲ್ಲಿ ಚರ್ಚಿನ ಅಂತರ್ ಧರ್ಮಿಯ ಆಯೋಗ ಹಾಗು ಸರ್ವ ಧರ್ಮ ಸೌಹಾರ್ದ ಸಮಿತಿಯ ಸಹಯೋಗದೊಂದಿಗೆ ಸರ್ವಧರ್ಮ ದೀಪಾವಳಿ ಹಬ್ಬವನ್ನು, ದೀಪದಿಂದ ದೀಪವ ಹಚ್ಚೋಣ ಪ್ರೀತಿಯಿಂದ ಪ್ರೀತಿಯ ಹಂಚೋಣ ಎಂಬ ಧ್ಯೇಯ ವಾಕ್ಯದೊಂದಿಗೆ ತುಂಬಾ ಸಡಗರದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊರವರು ವಹಿಸಿದ್ದರು. ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಶ್ರೀ ಪಾಂಡುರಂಗ ರಾವ್ ಪ್ರಧಾನ ಅರ್ಚಕರು […]