ಉದ್ಯಮಿ ಕೃಷ್ಣ ಖಾರ್ವಿ ನಿಧನ


ಕುಂದಾಪುರದ ಖ್ಯಾತ ಕೃಷ್ಣ ಕೋಲ್ಡ್ ಡ್ರಿಂಕ್ಸ್ ಮಾಲಕ, ಮತ್ಸ್ಯೋದ್ಯಮಿ ಕೃಷ್ಣ ಖಾರ್ವಿ (73) ಜ. 10 ರಂದು ನಿಧನರಾದರು.
ಕುಂದಾಪುರದ ಇಂದಿರಾ ಮಹಲ್ ಕಟ್ಟಡದಲ್ಲಿ ಹಲವು ದಶಕಗಳಿಂದ ಕೂಲ್ ಡ್ರಿಂಕ್ಸ್ ವ್ಯವಹಾರ ನಡೆಸುತ್ತಿದ್ದ ಇವರು ಮೀನುಗಾರಿಕಾ ಬೋಟ್ ಮಾಲಕರಾಗಿಯೂ ಮತ್ಸ್ಯೋದ್ಯಮಿ ನಡೆಸುತ್ತಿದ್ದರು. ತಮ್ಮ ಶ್ರಮ, ಲವಲವಿಕೆ, ಸಾತ್ವಿಕ ಗುಣ, ಸಮಾಜ ಸೇವೆಯಿಂದ ಜನ ಮನ್ನಣೆ ಪಡೆದಿದ್ದರು.
ಇವರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.