ಕುಂದಾಪುರ, ಸೆ. 15; ಕುಂದಾಪುರ 19 ವರ್ಷ ವಯಸ್ಸಿನ ಯುವಕ ಶಾನ್ ಡಿ ಸೋಜಾ, ಯು.ಎ.ಇ ಯಲ್ಲಿನ ದುಬಾಯ್ ದಿಂದ ಸುಮಾರು 115 ಕಿ. ಮಿ. ದೂರದಲ್ಲಿರುವ ರಾಸ್ ಅಲ್ ಖೈಮಾದಲ್ಲಿ ಬಿಸಿಲಿನ ತಾಪಾಕ್ಕೆ ಗುರಿಯಾಗಿ, ಸಾವನ್ನಪ್ಪಿದ್ದಾನೆ, ಬಿಸಿಲಿನ ತಾಪದ ಹೊಡೆತಕ್ಕೆ ಬಲಿಯಾಗಿ, ಆರ್ಎ ಕೆ ಆಸ್ಪತ್ರೆಯಲ್ಲಿ ಚಿಕೆತ್ಸೆಗೆ ಒಳಗಾಗಿದ್ದ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತ್ಯುವಶನಾಗಿದ್ದಾನೆ. ಶಾನ್ ಡಿ ಸೋಜಾ, ಕುಂದಾಪುರದ ಎಲಿಯಾಸ್ ಸಿರಿಲ್ ಡಿ ಸೋಜಾ ಮತ್ತು ಪ್ರಮೀಳಾ ಡಿ ಸೋಜಾ ಇವರ ಪುತ್ರನಾಗಿದ್ದು, ಶಾನ್ ಡಿ ಸೋಜಾ ತಂದೆ ತಾಯಿ ಜೊತೆ ಯು.ಎ.ಇ ಯಲ್ಲಿ ವಾಸಿಸುತಿದ್ದ, ಇವನು ಶಾನನ್ ಮತ್ತು ಶೇನ್ ಡಿ ಸೋಜಾ ಸಹೋದರನ್ನು ಅಗಲಿದ್ದಾನೆ.
Month: September 2024
ಮುಳಬಾಗಿಲು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿನಾಯಿಗಳಿಂದ ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕು – ರೈತ ಸಂಘದಿಂದ ಒತ್ತಾಯ
ಮುಳಬಾಗಿಲು ಸೆ-13, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಜನಸಾಮಾನ್ಯರ ಪ್ರಾಣ ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಪುರಸಭೆ ಆಯುಕ್ತರಾದ ಶ್ರೀಧರ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಪ್ರತಿ ವರ್ಷ ಬೀದಿನಾಯಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಸಾಮ್ರಾಜ್ಯವನ್ನು ಹೆಚ್ಚಳ ಮಾಡಿಕೊಂಡು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಮಕ್ಕಳು, ಹಿರಿಯರು, ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ನೀಡುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ಹಾಗೂ ನಿರ್ಲಕ್ಷೆ ವಿರುದ್ದ ಅಸಮದಾನ ವ್ಯಕ್ತಪಡಿಸಿದರು.
ಮಕ್ಕಳು ಕೈಯಲ್ಲಿ ಬನ್ ಹಿಡಿಯಂಗಿಲ್ಲ ಹಿರಿಯರು ಮಹಿಳೆಯರು ಹಾಲು ಹಾಗೂ ತರಕಾರಿ ಬ್ಯಾಗ್ ಹಿಡಿದುಕೊಂಡು ಓಡಾಡುವಂತಿಲ್ಲ. ನೋಡಿದರೆ ಸಾಕು ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ಗಾಯಗಳು ಗಳಿಸುವಜೊತೆಗೆ ಪ್ರಾಣವನ್ನು ತೆಗೆಯುವ ಮಟ್ಟಕ್ಕೆ ನಾಯಿ ಹಾವಳಿಗಳು ಹೆಚ್ಚಾಗಿದ್ದರೂ ನಿರ್ಲಕ್ಷೆ ಮಾಡಿ ಜನ ಸಾಮಾನ್ಯರ ಪ್ರಾಣದ ಜೊತೆ ಅಧಿಕಾರಿಗಳು ಚಲ್ಲಾಟವಾಡುತ್ತಿದ್ದಾರೆಂದು ಆರೋಪ ಮಾಡಿದರು.
ಒಂದು ಕಡೆ ಮಕ್ಕಳ ಮೇಲೆ ದಾಳಿಯಾದರೆ ಮತ್ತೊಂದು ಕಡೆ ರಸ್ತೆಗಳಲ್ಲಿ ಓಡಾಡುವ ದ್ವಿಚಕ್ರ ವಾಹನಗಳಿಗೆ ಅಡ್ಡಾಬಂದು ಏಕಾಏಕಿ ಬ್ರೇಕ್ ಹಾಕಲಾಗದೆ ವಾಹನ ಸವಾರರು ನಾಯಿಮೇಲೆ ಹತ್ತಿಸಿ ಅಪಘಾತಗಳಾಗಿ ಪ್ರಾಣವನ್ನು ಕೈಕಾಲುಗಳನ್ನು ಕಳೆದುಕೊಂಡು ಆಸ್ಪತ್ರೆ ಸೇರುವ ಜೊತೆಗೆ ಕುಟುಂಬ ಜವಾಬ್ದಾರಿ ಹೊತ್ತಿರುವ ಯುವಕರ ಹಿರಿಯರ ಪ್ರಾಣ ಪಕ್ಷಿ ಹಾರಿ ಹೋಗುವ ಪರಿಸ್ತಿತಿ ಇದ್ದರೂ ಸಮಸ್ಯೆ ಕಡೆ ಗಮನಹರಿಸದ ಆಡಳಿತ ವರ್ಗದ ವಿರುದ್ದ ಕಿಡಿಕಾರಿದರು.
ರಾಜ್ಯ ಮುಖಂಡ ಪಾರುಕ್ಪಾಷ ಮಾತನಾಡಿ ನಗರಗಳಲ್ಲಿ ಸಂಜೆ ಆದರೆ ಹೊರಗಡೆ ಬರುವಂತಿಲ್ಲ. ಗುಂಪುಗುಂಪಾಗಿರುವ ಬೀದಿ ನಾಯಿಗಳು ಏಕಾಏಕಿ ಅಟ್ಟಾಡಿಸಿಕೊಂಡು ಬಂದು ಜನ ಸಾಮಾನ್ಯರ ಮೇಲೆ ತಮ್ಮ ಪ್ರತಾಪವನ್ನು ತೋರಿಸುತ್ತಿವೆ. ಕೈಯಲ್ಲಿ ಕೋಲು ಹಿಡಿದರೆ ಮತ್ತಷ್ಟು ಕೋಪಿತರಾಗಿ, ಗುಂಪು ಗುಂಪಾಗಿ ಬಂದು ದಾಳಿ ಮಾಡುತ್ತವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಂಸದ ಅಂಗಡಿ ಹಾಗೂ ಹೋಟೆಲ್ ಮಾಲೀಕರು ಹೊರ ಹಾಕುವ ತ್ಯಾಜ್ಯವೇ ಬೀದಿನಾಯಿಗಳ ಹಾವಳಿಗೆ ಕಾರಣವಾಗಿದೆ. ತಮಗೆ ಇಷ್ಟ ಬಂದ ರೀತಿ ರಸ್ತೆಗಳಲ್ಲಿ, ಚರಂಡಿಗಳಲ್ಲಿ ತ್ಯಾಜ್ಯವನ್ನು ಸುರಿದು ಹೋಗುತ್ತಾರೆ. ಇತ್ತ ನಾಯಿಗಳು, ಆಹಾರಕ್ಕಾಗಿ ಬಂದು ಆಹಾರ ಸಿಗದೆ ಇದ್ದರೆ, ಮಕ್ಕಳು ಮತ್ತು ಮಹಿಳೆಯರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳಿಗೆ ಹೋಟೆಲ್ ಮಾಂಸದ ಅಂಗಡಿ ಮಾಲೀಕರೇ ನೇರ ಕಾರಣವೆಂದು ಆರೋಪ ಮಾಡಿದರು.
ಬೀದಿ ನಾಯಿ ಹಾವಳಿಗೆ ಕಡಿವಾಣ ಹಾಕಲು ಪ್ರತಿ ಪಂಚಾಯಿತಿಗೊಂದು ಪಾರ್ಕ್ ವ್ಯವಸ್ಥೆ ಮಾಡಿ ಕಾನೂನಿನ ಪ್ರಕಾರ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ ಪ್ರಾಣವನ್ನು ರಕ್ಷಣೆ ಮಾಡುವ ಜೊತೆಗೆ ಜನ ಸಾಮಾನ್ಯರ ಆರೋಗ್ಯ ಜೀವವನ್ನು ಕಾಪಾಡಬೇಕು ಹಾಗೂ ನಾಯಿ ದಾಳಿಗೆ ತುತ್ತಾಗಿರುವ ಮಕ್ಕಳು ಮತ್ತು ಜನ ಸಾಮಾನ್ಯರಿಗೆ ತಾಲ್ಲೂಕು ಆಡಳಿತದಿಂದ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ಪರಿಹಾರ ನೀಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತರಾದ ಶ್ರೀಧರ್ ರವರು ಈಗಾಗಲೇ ಬೀದಿನಾಯಿಗಳ ಹಾವಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಸಂಬಂಧಪಟ್ಟಂತೆ ಸಮಸ್ಯೆ ಬಗೆ ಹರಿಸಲು ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಶೀಘ್ರದಲ್ಲಿಯೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಬಂಗಾರಿ ಮಂಜು, ರಾಜೇಶ್, ಸುನಿಲ್ಕುಮಾರ್, ಶ್ರೀನಿವಾಸ್, ಬಾಸ್ಕರ್, ಜುಬೇರ್ಪಾಷ, ವೇಣು, ಚಲಪತಿ, ಆನಂದರೆಡ್ಡಿ, ವಿಶ್ವ, ವಿಜಯ್ಪಾಲ್, ಮುಂತಾದವರು ಇದ್ದರು.
ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ ಕ್ಯಾನ್ಸರ್ ತಪಾಸಣಾ ಶಿಬಿರ
ಕುಂದಾಪುರ, ಸೆ.14; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ, ಇನ್ನರ್ ವಿಲ್ ತುಂದಾಪುರ ದಕ್ಷಿಣ. ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಗಂಗೊಳ್ಳಿ ಕಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಆರೋಗ್ಯ ಆಯೋಗ ತಲ್ಲೂರು ಚರ್ಚ್ ಇವರ ಅಶ್ರಯದಲ್ಲಿ, ಮಂಗಳೂರಿನ ಪ್ರಸಿದ್ಧ ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ತಲ್ಲೂರು ಇಗರ್ಜಿಯ ಸಭಾಂಗಣದಲ್ಲಿ ಸೆ.14ರಂದು ನಡೆಸಲಾಯಿತು.
ಚಿನ್ನಯಿ ಆಸ್ಪತ್ರೆಯ ವೈದ್ಯಾಧಿಕಾ ರೊ. ಡಾ. ಉಮೇಶ್ ಪುತ್ರನ್, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ “ಇಂದು ನಮ್ಮ ಭಾರತ 3 ವಿಷಯಗಳಲ್ಲಿ ನಂಬರ್ ಒಂದನೇ ಸ್ಥಾನ ಪಡೆದಿದೆ, ಇದು ಉತ್ತಮ ವಿಚಾರಗಳಲ್ಲಿ ಅಲ್ಲ, ಒಂದು ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ, ಇನ್ನೊಂದು ಮಧುಮೇಹ, ಮತ್ತೊಂದು ಕ್ಯಾನ್ಸ್ರ್ ಈ ವಿಷಯಗಳಿಗೆ ಭಾರತದ ರಾಜಾದಾನಿಗಳಾಗಿವೆ, ಇದೆಲ್ಲ ನಮ್ಮ ಉಪೇಕ್ಷೆಯ ಫಲ, ನಾವು ತಪಾಸಣೆಗೆ ಹಿಂಜರಿಯುತ್ತೇವೆ, ನಮಗೇನು ಇಲ್ಲಪ್ಪ ಅಂದು ಸುಮ್ಮನಾಗುತ್ತೇವೆ, ಕ್ಯಾನ್ಸರ್ ಕಾಯಿಲೆ ಮೊದಲೇ ಆರಂಭವಾಗಿದ್ದರೂ ನಮ್ಮ ಗೋಚರಕ್ಕೆ ಬರುವುದಿಲ್ಲ, ಅದು ನಮ್ಮ ದೇಹದಲ್ಲಿ ನಿಗೂಢವಾಗಿ ಬಹಳ ಹಿಂದಿನಿಂದಲೂ, ನಂತರ ಬಾಧಿಸಬಹುದು, ಈ ಗಡ್ಡೆಗಳು ಬೆಳೆಯಲು ಸಾಕಷ್ಟು ವರ್ಷಗಳು ತೆಗೆದುಕೊಳ್ಳುತ್ತವೆ, ಆದರಿಂದ ನಾವು ಮೊದಲೇ ತಪಾಸಣೆ ಮಾಡಿಕೊಂಡರೆ, ಹೆಚ್ಚಿನ ರೀತಿಯಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ, ಹೆಂಗಸರಿಗೆ ಸ್ಥನ ಜ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಗಂಡಸರಿಗೆ ಬಾಯಿ ಕ್ಯಾನ್ಸರ್ ಹೆಚ್ಚಾಗಿ ಭಾದಿಸುತ್ತದೆ ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ರೊ. ಡಾ. ಉತ್ತಮ್ ಕುಮಾರ್ ಶೆಟ್ಟಿ ಇವರು ಮಾತನಾಡಿ ‘ರೋಗ ಬಂದು ಚಿಕಿತ್ಸೆ ಮಾಡಿಕೊಳ್ಳುವುದಕಿಂತ ರೋಗ ಬರದ ರೀತಿ ಜೀವಿಸುವುದು ಉತ್ತಮ, ಕ್ಯಾನ್ಸರ್ ತಪಾಸಣಾ ಶಿಬಿರ ಒಂದು ಉತ್ತಮ ಕಾರ್ಯಕ್ರಮ ಒಂದು ವೇಳೆ ಕ್ಯಾನ್ಸರ್ ಬರುವ ಸಂದರ್ಭ ಹಾಗೂ ಕ್ಯಾನ್ಸರ್ ಆರಂಭ ಹಂತದಲ್ಲಿದೆ ಇದೆ ಎಂದು ತಿಳಿದರೆ ಅದನ್ನು ವಾಸಿ ಮಾಡಬಹುದು, ಅದಕ್ಕಾಗಿ ಇಂತಹ ಶಿಬಿರಗಳ ಅಗತ್ಯವಿದೆ’ ಎಂದು ತಿಳಿಸಿದರು.
ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್. ನಾಯಕ್ ‘ಇದೊಂದು ವೀಶೆಷ ಕಾರ್ಯಕ್ರಮ, ರಕ್ತದಾನ, ಅನ್ನದಾನ ಇಂತಹದೆಲ್ಲ ನಾವು ಮಾಡಬಹುದು, ಆದರೆ ಆರೋಗ್ಯ ದಾನ ಮಾಡಲಿಕ್ಕೆ ಆಗುವುದಿಲ್ಲ, ಆದರೆ ಆದರೆ ಆರೋಗ್ಯ ಸುಧಾರಿಸಿಕೊಳ್ಳಲು ಸಹಾಯ ಮಾಡಬಹುದು ಈ ಕಾರ್ಯಕ್ರಮ ಅಂತಹುದಾಗಿದೆ, ಇದನ್ನು ಹಮ್ಮಿಕೊಂಡ ರೋಟರಿ ಅಧ್ಯಕ್ಷರಿಗೆ ಮತ್ತು ಸಹಕಾರ ನೀಡಿದವರಿಗೆ ಶ್ಲಾಘಿಸಿದರು.
ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಸ್. ನೇಹ ಕಾರಂತ್ ಮಾತನಾಡಿದರು. ವೇದಿಕೆಯಲ್ಲಿ ಡಾ. ರಾಜೇಂದ್ರ ಶೆಟ್ಟಿ, ತಲ್ಲೂರು ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರಾದ ಕೆಲ್ವಿನ್ ಮೆಂಡೊನ್ಸಾ ಮತ್ತು ಇತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷೆ ರೊ. ಜೂಡಿತ್ ಮೆಂಡೊನ್ಸಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೊ. ಸುರೇಖ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದ ಲಾಭವನ್ನು ಎಲ್ಲಾ ಸಮಾಜದವರು ಪಡೆದುಕೊಂಡರು.
ಆಸ್ಕರ್ ಫೆರ್ನಾಂಡೀಸ್ ಓರ್ವ ಸರಳ ದೂರದೃಷ್ಟಿಯ ನಾಯಕ – ಜಯಕರ ಶೆಟ್ಟಿ
ಕುಂದಾಪುರ, ಸೆ. 13: ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಸ್ಕರ್ ಫೆರ್ನಾಂಡೀಸ್ ಮೂರನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಜಯಕರ ಶೆಟ್ಟಿಯವರು ಮಾತನಾಡಿ , ಆಸ್ಕರ್ ಫೆರ್ನಾಂಡೀಸ್ ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದರು ,ತಮ್ಮ ಸರಳ ವ್ಯಕ್ತಿತ್ವದಿಂದ ಜನಸಾಮಾನ್ಯರ ಅಗತ್ಯಗಳನ್ನು ಸ್ಪಂದಿಸುತ್ತಿದ್ದರು. ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದಲ್ಲಿ ಪ್ರಾರಂಭಿಸುವಾಗ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೀಡಿ ಪ್ರೋತ್ಸಾಹಿಸಿದ್ದು ಸ್ಮರಣೀಯವೆಂದರು.
ಅನೇಕ ಬಾರಿ ಮುಖ್ಯಮಂತ್ರಿ ಸ್ಥಾನ ದೊರಕುವ ಅವಕಾಶವಿದ್ದರೂ ನಿರಾಕರಿಸಿದ ಆಸ್ಕರಣ್ಣ, ಕರಾವಳಿ ಭಾಗದ ಅಭಿವೃದ್ಧಿಗೆ ಶ್ರಮಿಸಿದರು ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಕೆದೂರು ಸದಾನಂದ ಶೆಟ್ಟಿ ಹೇಳಿದರು.
ನಾಯಕರಾದ ದಿನೇಶ್ ಹೆಗ್ಡೆಯವರು, ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ , ವಿಕಾಸ್ ಹೆಗ್ಡೆ ಆಸ್ಕರ್ ಫೆರ್ನಾಂಡೀಸ್ ಅವರ ರಾಜಕೀಯ ಜೀವನ ನಮಗೆಲ್ಲ ಮಾರ್ಗದರ್ಶಿ ಎಂದು ನೆನಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಅಧ್ಯಕ್ಷರಾದ ದೇವಕಿ ಸಣ್ಣಯ್ಯ, ಪುರಸಭೆ ಸದಸ್ಯರಾದ ಶ್ರೀಧರ ಶೇರಿಗಾರ್ ,ಪಂಚಾಯತ್ ಸದಸ್ಯರಾದ ಜಾನಕಿ ಬಿಲ್ಲವ, ವಿಜಯದರ್ ಕೆ ವಿ , ಗಣಪತಿ ಶೆಟ್, ರೋಷನ್ ಬರೆಟ್ಟೊ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ ,ಇಂಟೆಕ್ ಅಧ್ಯಕ್ಷರಾದ ಚಂದ್ರ ಅಮೀನ್, ಗ್ಯಾರೆಂಟಿ ಅನುಷ್ಠಾನ ತಾಲೂಕು ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ , ಆಶಾ ಕರ್ವಾಲ್ಲೊ, ಮಾಜಿ ಜಿಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ರಾಜ್ಯ ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಸದಾನಂದ ಖಾರ್ವಿ, ಅಶೋಕ್ ಸುವರ್ಣ, ಕೇಶವ್ ಭಟ್, ರಕ್ಷಿತ್ ಶೆಟ್ಟಿ ,ಶೋಭಾ ಸಚ್ಚಿದಾನಂದ, ರಿಯಾಜ್ ಕೋಡಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು ,ಜೋಸೆಫ್ ರೆಬೆಲ್ಲೊ, ವೇಣುಗೋಪಾಲ, ಮೇಬಲ್ ಡಿಸೋಜಾ, ಶಶಿಧರ, ಕೆಎಸ್ ವಿಜಯ, ಪ್ರೀತಮ್ ಕರ್ವಾಲ್ಲೊ , ದಿನೇಶ್ ಮೊಗವೀರ, ಜೂಲಿಯೆಟ್ ಪಾಯ್ಸ್ ,ಸಂಗೀತ ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೆರೀಗಾರ್ ವಂದಿಸಿದರು.
ಮೂಡ್ಲಕಟ್ಟೆ ಎಂ ಸಿ ನ್ ನಲ್ಲಿ ಓಣಂ ಆಚರಣೆ
ಕುಂದಾಪುರ ; ಮೂಡ್ಲಕಟ್ಟೆ ಎಂ ಸಿ ನ್ ನಲ್ಲಿ ಓಣಂ ಆಚರಣೆ ಸೆಪ್ಟೆಂಬರ್ 13ರಂದು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಆವರಣದಲ್ಲಿ ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರು ದೀಪ ಬೆಳಗಿಸುವ ಮೂಲಕ ಓಣಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಓಣಂ ಹಬ್ಬದ ಸಾಂಪ್ರದಾಯಿಕ ನೃತ್ಯ, ಚಂಡೆ ವಾದ್ಯ,ಉಡುಗೆ ,ತೊಡುಗೆ ಹೂವಿನ ರಂಗೋಲಿ ಗಮನ ಸೆಳೆದಿದ್ದು ,ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆಯವರಾದ ಪ್ರೊ. ಜೆನ್ನಿಫರ್ ಫ್ರೀಡಾ ಮೆನೇಜಸ್, ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್, ಐ ಎಂಜೇ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ ಹಾಗೂ ಐಎಂಜಿಐಎಸ್ಸಿ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಪ್ರತಿಭಾ ಎಂ ಪಾಟೀಲ್, ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕುಮಾರಿ ಸಿನ್ಸಿ ಸ್ವಾಗತಿಸಿ, ಕು.ಆಸಿಫ್ ವಂದಿಸಿದರು. ಕು.ತೆಸ್ಕಾ ಮತ್ತು ಕು.ನಿತ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮಹತ್ವವನ್ನು ಶೆರಿಲ್ ಸಾರ, ಸೆಲಿನಾ ಹಾಗೂ ಗಾಯತ್ರಿ ವಿವಿಧ ಭಾಷೆಗಳಲ್ಲಿ ತಿಳಿಸಿದರು.
ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿ- ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಚಾಂಪಿಯನ್ / AICS football Tournament- Milagres Central School Champion
ಮಂಗಳೂರಿನ ಅಶೋಕನಗರದ ಎಸ್ಡಿಎಂ ಶಾಲೆಯಲ್ಲಿ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ದ.ಕ.ಜಿಲ್ಲೆಯಾದ್ಯಂತ ಸುಮಾರು 34 ಶಾಲಾ ತಂಡಗಳು ಭಾಗವಹಿಸಿದ್ದು, ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಅಂಡರ್-17 ಬಾಲಕರ ತಂಡವು ಅಂತಿಮವಾಗಿ ಕೆನರಾ ಸಿಬಿಎಸ್ಸಿ ಶಾಲಾ ಅಂಡರ್-17 ಬಾಲಕರ ತಂಡವನ್ನು ಸೊಲೀಸಿ ಎಐಸಿಎಸ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿ ಬಂತು.
ತಂಡದ ನಾಯಕ AL-HAN ಶಾಲೆಯ ಅಂಡರ್-17 ಬಾಲಕರ ತಂಡಗಳ ನೇತೃತ್ವದ, ದೈಹಿಕ ನಿರ್ದೇಶಕ ಕೇಶವನಾಯಕ್ ಅವರ ಅಸಾಧಾರಣ ಕೌಶಲ್ಯ ಮತ್ತು ತಂಡದ ಸಮನ್ವಯದಿಂದ ಹೊರಹೊಮ್ಮಲು ಸಾಧ್ಯವಾಯಿತು, ಎರಡೂ ತಂಡಗಳು ತಮ್ಮ ಅತ್ಯುತ್ತಮ ಸಮನ್ವಯವನ್ನು ಪ್ರದರ್ಶಿಸಿ ಎದುರಾಳಿ ತಂಡಕ್ಕೆ ಕಠಿಣ ಸ್ಪರ್ಧೆಯನ್ನು ನೀಡಿದ್ದರು.
AICS football Tournament- Milagres Central School Champion
An exhilarating football match was held AICS Football tournament, D.K in boys under-17 category atSDM School Ashoknagar, Mangalore.
Around 34 School Team had participated all over the district, Milagres Central School Under-17 boys’ teamsecured champion against CanaraCbsc School Under-17 boys team of AICS Football tournament.
The captain of the team was AL-HAN School Under-17 boys teams led, Physical Director Mr KeshavaNaik displayed exceptional skill and team work to emerge victories Both the teams were coordinating their best to give tough competition to the opponent team.
ಕುಂದ ಕನ್ನಡ ಅಧ್ಯಯನ ಪೀಠಕ್ಕೆ 50 ಲಕ್ಷ ರೂ. ಬಿಡುಗಡೆ
ಕುಂದಾಪುರ, ಸೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿನ ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗಾಗಿ ಸರ್ಕಾರದಿಂದ ಮಂಗಳೂರು ವಿಶ್ವವಿದ್ಯಾಲಯಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಜುಡಿತ್ ಮೆಂಡೊನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪನೆಗಾಗಿ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರು ಈ ಹಿಂದೆ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದಲ್ಲದೆ, ಅಧ್ಯಯನ ಪೀಠದ ಕಾರ್ಯಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವಂತೆ 1 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 50 ಲಕ್ಷ ರೂ. ಬಿಡುಗಡೆ ಮಾಡಲು ಆದೇಶಿಸಿದ್ದರು.
ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಮತ್ತು ಯೋಜನೆಯ ಉಪಕಾರ್ಯದರ್ಶಿ ಎನ್.ಕುಮಾರ ಅವರು ಸಹಿ ಮಾಡಿರುವ ಆದೇಶ ಪತ್ರದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಒಟ್ಟು 850 ಲಕ್ಷ ರೂ. ಬಿಡುಗಡೆಗೊಳಿಲಾಗಿದ್ದು, ಅದರಲ್ಲಿ 50 ಲಕ್ಷ ರೂ. ಗಳನ್ನು ಕುಂದ ಕನ್ನಡ ಅಧ್ಯಯನ ಪೀಠಕ್ಕೆ ಮೀಸಲಿರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷೇವಿಯರ್ ಐಟಿಐ ಅಸೈಗೋಳಿ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ರವರು ಆಯ್ಕೆ
ಕ್ಷೇವಿಯರ್ ಎಜುಕೇಶನ್ ಟ್ರಸ್ಟ್ (ರಿ.)1984 ರಲ್ಲಿ ಸಮಾಜದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಹಿಂದುಳಿದ ಮತ್ತು ಗ್ರಾಮಿಣ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಉದ್ದೇಶ ದಿಂದ ಜಾತಿ ಮತ ಧರ್ಮ ಲೆಕ್ಕಿಸದೆ ಸಮಾಜದ ಉದ್ಧಾರಕ್ಕಾಗಿ ಸ್ಥಾಪನೆಗೊಂಡಿತು.
ಕ್ಷೇವಿಯರ್ ಟ್ರಸ್ಟ್ ವತಿಯಿಂದ 1984 ರಲ್ಲಿ ಮುಕ್ಕದಲ್ಲಿ ಕ್ಷೇವಿಯರ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ( XITC )ಎಂದು ಸ್ಥಾಪನೆಗೊಂಡು. ತದನಂತರ 1992ರಲ್ಲಿ ಮುಕ್ಕದಿಂದ ಕೊಣಾಜೆ ಸಮೀಪದ ಅಸೈಗೋಳಿಗೆ ಸ್ಥಳಾಂತರಿಸಲಾಯಿತು. ಕ್ಸೇವಿಯರ್ ಐಟಿಐ ಸ್ಥಾಪನೆಯ.ಈ ಐಟಿಐ ಗೆ ಉದ್ಯೋಗ ಮತ್ತು ತರಬೇತಿ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಮತ್ತು ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶ ನಲ್ ಟ್ರೈನಿಂಗ್ NCVT ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಭಾರತ ಸರ್ಕಾರ ನವ ದೆಹಲಿಯಿಂದ ಗುರುತಿಸಲ್ಪಟ್ಟಿದ್ದ ಈ ಸಂಸ್ಥೆಗೆ 40 ವರ್ಷ ತುಂಬು ವ ಈ ಶುಭ ಸಂದರ್ಭದಲ್ಲಿ 2024 ಸಪ್ಟೆಂಬರ್ 9 ತಾರೀಕಿನಂದು ನಡೆದ ಕ್ಷೇವಿಯರ್ ಟ್ರಸ್ಟ್(ರಿ) ಇದರ ಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷರು, All India Christian union ಇದರ ರಾಜ್ಯಧ್ಯಕ್ಷರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮೈನೋರಿಟಿಯ ಅಧ್ಯಕ್ಷರಾಗಿ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತನ್ನನ್ನೆ ತಾನು ತೊಡಗಿಸಿಕೊಂಡವರಾಗಿದ್ದಾರೆ
ಶ್ರೀನಿವಾಸಪುರ ಜಿ.ಜಿ.ವೇಣು ಗ್ರೂಪ್ಸ್ ಇನ್ಸಿಟ್ಯೂಶನ್ ಶಾಲಾವರಣದಲ್ಲಿ ಪೈಲ್ಸ್ , ಫಿಷಲ್, ಫಿಸ್ತುಲಾ ಮೂಲ ವ್ಯಾಧಿಗೆ ಸಂಬಂದಿಸಿದ ಖಾಯಿಲೆಗಳಿಗಗಾಗಿ ಹೆಸರುವಾಸಿ ವೈದ್ಯರಿಂದ ಶಿಬಿರ
ಶ್ರೀನಿವಾಸಪುರ:ಪಟ್ಟಣದ ಜಿ.ಜಿ.ವೇಣು ಗ್ರೂಪ್ಸ್ ಇನ್ಸಿಟ್ಯೂಶನ್ ಶಾಲಾವರಣದಲ್ಲಿ ಇದೇ ತಿಂಗಳು 14 ರಂದು ಶನಿವಾರ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರ ವರೆಗೆ ಸ್ಮೈಲ್ಸ್ ಇನ್ಸಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರೊಲೊಜಿ ಮತ್ತಕರೆ ಇವರ ಸಹಯೋಗದೊಂದಿಗೆ ಪೈಲ್ಸ್( ಮೊಳೆರೋಗ) ಫಿಷಲ್, ಫಿಸ್ತುಲಾ ಮೂಲ ವ್ಯಾಧಿಗೆ ಸಂಬಂದಿಸಿದ ಖಾಯಿಲೆಗಳಿಗಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ ವೈದ್ಯರಾದ ಡಾ|| ಸಿ.ಎಂ.ಪರಮೇಶ್ವರ್ ರವರ ನೇತೃತ್ವದಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ.ಆದ್ದರಿಂದ ಈ ಕ್ಷೇತ್ರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೋಂಡು ಸದುಪಯೋಗಪಡಿಸಿಕೊಳ್ಳಬೇಕೆಂದು ಕೋರಿದರು.