ಕುಂದಾಪುರ: ಸಮಕಾಲೀನ, ಸಾಮಾಜಿಕ, ಸ್ಥಿತ್ಯಂತರ ಕಾಲಘಟ್ಟದಲ್ಲಿ ನಮ್ಮ ಮಕ್ಕಳಿಗೆ ಯಾವುದೇ ಮೌಲ್ಯಗಳನ್ನು ಕಲಿಸಲು, ಕಲಿಯಲು ಬರುವುದಿಲ್ಲ. ಆದರೆ ಅಕ್ಷರ ಕಲಿಸಬಹದು ಭಾಷೆ ಕಲಿಸಬಹುದು, ವಿಜ್ಞಾನ ಕಲಿಸಬಹುದು, ಗಣಿತ ಕಲಿಸಬಹುದು. ಆದರೆ ಜೀವನ ಮೌಲ್ಯವು ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಅದನ್ನು ವಿದ್ಯಾರ್ಥಿ ದೆಸೆಯಿಂದಲೇ ಅನುಷ್ಠಾನಗೊಳಿಸಿದಾಗ ಅವರಲ್ಲಿ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಾಗುತ್ತದೆ ಎಂದು ಶ್ರೀ ಅಶೋಕ್ ಭಂಡಾರಿ, ಅಧ್ಯಕ್ಷರು ಗ್ರಾಮ ಪಂಚಾಯತ್, ಕೋಣಿ ಇವರು ತಿಳಿಸಿದರು.
ಅವರು ದಿನಾಂಕ 13-07-2024 ಶನಿವಾರದಂದು ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ಗ್ರಾಮ ಪಂಚಾಯತ್ ಕೋಣಿ ಹಾಗೂ ಕೆ.ಜಿ. ಜಗನ್ನಾಥ ರಾವ್ ಸರಕಾರಿ ಪ್ರೌಢಶಾಲೆ, ಕೋಣಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜೀವನ ಮೌಲ್ಯಗಳು ಪ್ರತೀ ಹಂತದಲ್ಲೂ ಅಳವಡಿಸಿಕೊಳ್ಳಬೇಕು. ನಮ್ಮ ಮಾತು, ನಡೆ-ನುಡಿ, ಸಹಕಾರ, ಪರಸ್ಪರ ನಂಬಿಕೆ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಭಾಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಶ್ರೀಮತಿ ಭಾರತಿ ನಾಯಕ್ ನಿರ್ವಹಿಸಿ ನಮ್ಮ ನಿತ್ಯ ಅನುಕ್ರಮ, ಅನುಸಂಧಾನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ. ನಾವು ವ್ಯಕ್ತಿತ್ವವನ್ನು ಕೇವಲ ಪ್ರತಿಷ್ಠಿತ ವ್ಯಕ್ತಿಗಳಿಂದ ನಿರೀಕ್ಷಿಸುವುದಲ್ಲ ನಮ್ಮ ಸುತ್ತ-ಮುತ್ತಲಿನ ನೆರೆ-ಹೊರೆಯವರಲ್ಲಿ, ಪೋಷಕರಲ್ಲಿ ಗುರುತಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ವಿದ್ವಾನ್ ಶ್ರೀ ಮಾಧವ ಅಡಿಗ, ನಿವೃತ್ತ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಕೋಣಿ ಮಾತಾಡಿ ಪ್ರತಿ ಮಗು ಕೂಡಾ ಮೌಲ್ಯವಾಗಿರುತ್ತದೆ. ಮುಂದೆ ಮಗು ಬೆಳೆಯುತ್ತಾ ಬೆಳೆಯುತ್ತಾ ಅನೇಕ ಸಾಮಾಜಿಕ ಕಟ್ಟುಪಾಡುಗಳಿಂದ ನಿಗ್ರಹಿಸಿ ಮೌಲ್ಯಗಳನ್ನು ಅನುಷ್ಠಾನ ಮಾಡಬೇಕಾಗಿದೆ. ಪ್ರತೀ ಮಗು ಕೂಡಾ ನಿಷ್ಪ್ರಯೋಜಕ ಎಂದು ಪರಿಭಾವಿಸಬಾರದು.
ಸಭೆಯಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀ ನಾಗರಾಜ ಆಚಾರ್ ಕೋಣಿ, ಖ್ಯಾತ ಉದ್ಯಮಿ ಹಾಗೂ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ಅಧ್ಯಕ್ಷರಾದ ಶ್ರೀ ಚಂದ್ರಹಾಸ್ ಮೊಗವೀರ, ಅಭಿವೃದ್ಧಿ ಸಂಸ್ಥೆ (ರಿ. ) ಬಾಳ್ಕುದ್ರು ಹಂಗಾರಕಟ್ಟೆ ಇದರ ಕಾರ್ಯದರ್ಶಿ ಶ್ರೀ ರಮೇಶ್ ವಕ್ವಾಡಿ, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್, ಮುಖ್ಯಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕೆತ್ತೂರು (ಕುಂದಾಪುರ ವಲಯ) ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ಮಾತಾಡಿ ಮಕ್ಕಳಿಗೆ ನಮ್ಮ ಅನೇಕ ಪುರಾಣ ಕಥೆಗಳಲ್ಲಿ, ಜೀವನ ಮೌಲ್ಯಗಳು ಸಿಗುತ್ತದೆ. ಉದಾಹರಣೆಗೆ : ಮಹಾಭಾರತದ ಸುಯೋಧನನಿಗೆ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದು ತಿಳಿದು ಪಾಂಡವರನ್ನು ದ್ವೇಷಿಸುತ್ತಾ, ತನ್ನ ಅವಸಾನವನ್ನು ಕಂಡುಕೊಂಡ ಬಗ್ಗೆ ವಿವರಿಸಿ ನಾವು ಪ್ರತೀ ಹಂತದಲ್ಲೂ ಸಹಕಾರ ಮತ್ತು ಹೊಂದಾಣಿಕೆ ಮನೋಭಾವ ಇದ್ದಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯ ಎಂದರು. ಅಲ್ಲದೇ ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಶಾಲಾ ಪಠ್ಯದಿಂದ ಮಾತ್ರವಲ್ಲ ನಮ್ಮ ಸಾಮಾಜಿಕ ನಡವಳಿಕೆಯಿಂದ ಮೌಲ್ಯಗಳನ್ನು ಗುರುತಿಸಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಾಗಬೇಕೆಂದು ಮಾಹಿತಿ ನೀಡಿ ಸಂವಾದ ನಡೆಸಿದರು.
ಈ ಕಾರ್ಯಕ್ರಮವನ್ನು ಸುಧಾ ಭಟ್ ನಿರೂಪಿಸಿ, ರೂಪಶ್ರೀ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಾಸ್ತವನೆಗೈದು ವಂದಿಸಿದರು. ಸುಮಾರು 86 ವಿದ್ಯಾರ್ಥಿಗಳು ಸಹಶಿಕ್ಷಕರು, ಪೋಷಕರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು
Month: July 2024
YCS/YSM Exposure cum Orientation program held at Christ the King Church, Jogfalls, Diocese of Shimoga / ಶಿವಮೊಗ್ಗದ ಡಯಾಸಿಸ್ನ ಜೋಗ್ಫಾಲ್ಸ್ನ ಕ್ರೈಸ್ಟ್ ದಿ ಕಿಂಗ್ ಚರ್ಚ್ನಲ್ಲಿ YCS/YSM ಅನಾವರಣ ಮತ್ತು ದೃಷ್ಟಿಕೋನ ಕಾರ್ಯಕ್ರಮ
Shivamogga, July 15, 2024: On July 14, 2024, Christ the King Church in Jogfalls hosted the Vianney Deanery Teens Meet organized by the Youth Commission Diocese of Shimoga, gathering over 80 young students and 15 animators.
The Joga ICYM local committee ensured the event’s success. Fr Salvador Rodrigues, Parish Priest of Christ the King Church, Jogfalls, opened the event with a prayer. Fr Franklin D’Souza, the Shimoga Diocesan YCS/YSM Chaplain, delivered an inspiring keynote address, setting the tone for the day’s activities.
Ms. Jesvita D’Souza, the Karnataka Regional YCS/YSM President, shared her personal journey and the transformative impact of the YCS/YSM movement.
The day concluded with the Holy Eucharist, emphasizing YCS/YSM values. Participants were then treated to an excursion to Jogfalls, allowing them to experience the YCS/YSM methodology first hand. This exploration not only fostered camaraderie but also deepened their understanding of the movement’s values. The event provided an invaluable opportunity for all attendees to connect, learn, and grow within the YCS/YSM community.
YCS/YSM Lady Animator – Sr Treesa Lidiya, YCS /YSM vice-president Ms Anisha Rodrigues, YCS YSM Regional President Ms Jesvita D’Souza, YCS/YSM Regional Representative Mr Samson D’Souza, YCS/YSM Diocesan Secretary Ms Alvina Dias were part of the organising committee.
On behalf of Diocesan Team of Students (DTS) Ms. Jesvita D’Souza thanked Fr Salvador Rodrigues, Parish Priest for allowing us to organise the Teens Program. She also thanked ICYM President Noel and his team for their love and support.
Fr Franklin D’Souza, took over Diocesan Youth Ministry on June 15th. This is the first mega program organised by Yuvamitra – Shimoga Diocesan Youth Commission under his leadership. Young people felicitated Fr Franklin D’Souza as he celebrated his Sacerdotal Silver Jubilee celebration this year.
ಶಿವಮೊಗ್ಗದ ಡಯಾಸಿಸ್ನ ಜೋಗ್ಫಾಲ್ಸ್ನ ಕ್ರೈಸ್ಟ್ ದಿ ಕಿಂಗ್ ಚರ್ಚ್ನಲ್ಲಿ YCS/YSM ಅನಾವರಣ ಮತ್ತು ದೃಷ್ಟಿಕೋನ ಕಾರ್ಯಕ್ರಮ
ಶಿವಮೊಗ್ಗ, ಜುಲೈ 15, 2024: ಜುಲೈ 14, 2024 ರಂದು ಜೋಗ್ಫಾಲ್ಸ್ನಲ್ಲಿರುವ ಕ್ರೈಸ್ಟ್ ದಿ ಕಿಂಗ್ ಚರ್ಚ್ ಶಿವಮೊಗ್ಗದ ಯುವ ಆಯೋಗದ ಡಯಾಸಿಸ್ ಆಯೋಜಿಸಿದ್ದ ವಿಯಾನಿ ಡೀನರಿ ಟೀನ್ಸ್ ಮೀಟ್ ಅನ್ನು 80 ಕ್ಕೂ ಹೆಚ್ಚು ಯುವ ವಿದ್ಯಾರ್ಥಿಗಳು ಮತ್ತು 15 ಆನಿಮೇಟರ್ಗಳನ್ನು ಒಟ್ಟುಗೂಡಿಸಿತು.
ಜೋಗ ICYM ಸ್ಥಳೀಯ ಸಮಿತಿಯು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಜೋಗ್ಫಾಲ್ಸ್ನ ಕ್ರೈಸ್ಟ್ ಕಿಂಗ್ ಚರ್ಚ್ನ ಪ್ಯಾರಿಷ್ ಪ್ರೀಸ್ಟ್ ಫಾದರ್ ಸಾಲ್ವಡಾರ್ ರೋಡ್ರಿಗಸ್ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ YCS/YSM ಧರ್ಮಗುರುಗಳಾದ ಫ್ರಾಂಕ್ಲಿನ್ ಡಿಸೋಜ ಅವರು ಸ್ಪೂರ್ತಿದಾಯಕ ಮುಖ್ಯ ಭಾಷಣವನ್ನು ಮಾಡಿ ದಿನದ ಚಟುವಟಿಕೆಗಳಿಗೆ ಧ್ವನಿಯನ್ನು ನೀಡಿದರು.
ಕರ್ನಾಟಕ ಪ್ರಾದೇಶಿಕ YCS/YSM ಅಧ್ಯಕ್ಷರಾದ ಶ್ರೀಮತಿ ಜೆಸ್ವಿತಾ ಡಿಸೋಜಾ ಅವರು ತಮ್ಮ ವೈಯಕ್ತಿಕ ಪ್ರಯಾಣ ಮತ್ತು YCS/YSM ಆಂದೋಲನದ ಪರಿವರ್ತನಾ ಪ್ರಭಾವವನ್ನು ಹಂಚಿಕೊಂಡರು.
YCS/YSM ಮೌಲ್ಯಗಳಿಗೆ ಒತ್ತು ನೀಡುವ ಪವಿತ್ರ ಯೂಕರಿಸ್ಟ್ನೊಂದಿಗೆ ದಿನವು ಮುಕ್ತಾಯವಾಯಿತು. ಭಾಗವಹಿಸುವವರಿಗೆ ನಂತರ ಜೋಗ್ಫಾಲ್ಸ್ಗೆ ವಿಹಾರಕ್ಕೆ ಚಿಕಿತ್ಸೆ ನೀಡಲಾಯಿತು, ಇದು ಅವರಿಗೆ YCS/YSM ವಿಧಾನವನ್ನು ನೇರವಾಗಿ ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಪರಿಶೋಧನೆಯು ಸೌಹಾರ್ದತೆಯನ್ನು ಬೆಳೆಸಿತು ಆದರೆ ಚಳುವಳಿಯ ಮೌಲ್ಯಗಳ ಬಗ್ಗೆ ಅವರ ತಿಳುವಳಿಕೆಯನ್ನು ಆಳಗೊಳಿಸಿತು. ಈವೆಂಟ್ ಎಲ್ಲಾ ಪಾಲ್ಗೊಳ್ಳುವವರಿಗೆ YCS/YSM ಸಮುದಾಯದೊಳಗೆ ಸಂಪರ್ಕಿಸಲು, ಕಲಿಯಲು ಮತ್ತು ಬೆಳೆಯಲು ಅಮೂಲ್ಯವಾದ ಅವಕಾಶವನ್ನು ಒದಗಿಸಿದೆ.
YCS/YSM ಲೇಡಿ ಆನಿಮೇಟರ್ – Sr ಟ್ರೀಸಾ ಲಿಡಿಯಾ, YCS /YSM ಉಪಾಧ್ಯಕ್ಷೆ Ms ಅನಿಶಾ ರೋಡ್ರಿಗಸ್, YCS YSM ಪ್ರಾದೇಶಿಕ ಅಧ್ಯಕ್ಷೆ Ms ಜೆಸ್ವಿತಾ ಡಿ’ಸೋಜಾ, YCS/YSM ಪ್ರಾದೇಶಿಕ ಪ್ರತಿನಿಧಿ ಶ್ರೀ ಸ್ಯಾಮ್ಸನ್ ಡಿ’ಸೋಜಾ, YCS/YSM ಕಾರ್ಯದರ್ಶಿ Ms Diocesvi ಇದ್ದರು. ಸಂಘಟನಾ ಸಮಿತಿಯ ಭಾಗ.
ಡಯೋಸಿಸನ್ ಟೀಮ್ ಆಫ್ ಸ್ಟೂಡೆಂಟ್ಸ್ (ಡಿಟಿಎಸ್) ಪರವಾಗಿ ಶ್ರೀಮತಿ ಜೆಸ್ವಿತಾ ಡಿಸೋಜಾ ಅವರು ಹದಿಹರೆಯದವರ ಕಾರ್ಯಕ್ರಮವನ್ನು ಆಯೋಜಿಸಲು ನಮಗೆ ಅವಕಾಶ ಮಾಡಿಕೊಟ್ಟ ಪ್ಯಾರಿಷ್ ಅರ್ಚಕ ಫಾದರ್ ಸಾಲ್ವಡಾರ್ ರೋಡ್ರಿಗಸ್ ಅವರಿಗೆ ಧನ್ಯವಾದ ಅರ್ಪಿಸಿದರು. ಅವರು ICYM ಅಧ್ಯಕ್ಷ ನೋಯೆಲ್ ಮತ್ತು ಅವರ ತಂಡಕ್ಕೆ ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಿದರು.
ಫಾ| ಫ್ರಾಂಕ್ಲಿನ್ ಡಿಸೋಜಾ ಅವರು ಜೂನ್ 15 ರಂದು ಧರ್ಮಪ್ರಾಂತ್ಯದ ಯುವ ಸಚಿವಾಲಯವನ್ನು ವಹಿಸಿಕೊಂಡರು. ಇವರ ನೇತೃತ್ವದಲ್ಲಿ ಯುವಮಿತ್ರ – ಶಿವಮೊಗ್ಗ ಧರ್ಮಪ್ರಾಂತ್ಯದ ಯುವ ಆಯೋಗ ಆಯೋಜಿಸಿರುವ ಮೊದಲ ಮೆಗಾ ಕಾರ್ಯಕ್ರಮ ಇದಾಗಿದೆ. ಫಾ| ಫ್ರಾಂಕ್ಲಿನ್ ಡಿಸೋಜಾ ಅವರು ಈ ವರ್ಷ ತಮ್ಮ ಸಸರ್ಡೋಟಲ್ ರಜತ ಮಹೋತ್ಸವವನ್ನು ಆಚರಿಸಿದಾಗ ಯುವಕರು ಅವರನ್ನು ಅಭಿನಂದಿಸಿದರು.
ಜನನುಡಿ ಸುದ್ದಿ ಸಂಸ್ಥೆಯ “ಮುದ್ದು ಯೇಸು” 23-24 ರ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ / Prize distribution to the winners of “Muddu Yesu” 23-24 competition of Jananudi News Organization
ಕುಂದಾಪುರ,ಜು.15; ಜನನುಡಿ ಸುದ್ದಿ ಸಂಸ್ಥೆ ಆಶ್ರಯದಲ್ಲಿ ನಡೆದ 23-24 ರ ಮುದ್ದು ಯೇಸು ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣ ಕಾರ್ಯಕ್ರಮವನ್ನು ಎರಡು ಕಡೆಗಳಲ್ಲಿ ಮಾಡಲಾಯಿತು. ಮೊದಲು ಜು,11 ರಂದು ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ಮತ್ತು ಜು. 14 ರಂದು ರೋಜರಿ ಚರ್ಚ್ ಸಭಾಭವನದಲ್ಲಿ ನಡೆಯಿತು.
ಕಟ್ಕೆರೆ ಬಾಲ ಯೇಸು ಆಶ್ರಮದ ಪ್ರಾರ್ಥನ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಮತ್ತು ವಂ|ಧರ್ಮಗುರು ಜೊಸ್ವಿ ಸಿದ್ದಕಟ್ಟೆ ಬಹುಮಾನ ವಿತರಣೆಯನ್ನು ಮಾಡಿದರು.ಕುಂದಾಪುರ ರೋಜರಿ ಚರ್ಚ್ ಸಭಾಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ, ಕುಂದಾಪುರ ಚರ್ಚಿನ ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜುಲಿಯೆಟ್ ಪಾಯ್ಸ್ ಹಾಗೂ ಕುಂದಾಪುರ ರೋಜರಿ ಸೊಸೈಟಿಯ ನಿರ್ದೇಶಕಿ ಶಾಂತಿ ಕರ್ವಾಲ್ಲೊ ಇವರು ವಿತರಿಸಿದರು. ಜನನುಡಿ ಸುದ್ದಿ ಸಂಸ್ಥೆಯ ಸಂಸ್ಥಾಪಕ ಸಂಪಾದಕ ಬರ್ನಾಡ್ ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಸ್ಪರ್ಧೆಯ ಸಂಯೋಜಕಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿ, ಸ್ಪರ್ಧೆಯ ಪ್ರಾಯೋಜಕರಿಗೆ ಕ್ರತ್ಞತೆ ಸಲ್ಲಿಸಿ,ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಒಂದು ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ವಿಜೇತರು
ಗಂಗೊಳ್ಳಿಯ ಎಮಿಲಿಯಾ ರೂತ್ ಲೋಬೊ ಪ್ರಥಮ ಸ್ಥಾನ, ಕುಂದಾಪುರದ ವೈರಾ ರಿಯೊನಾ ರೊಡ್ರಿಗಸ್ ದ್ವಿತೀಯ ಸ್ಥಾನ, ಕುಂದಾಪುರ ಕೋಣಿಯ ಮಾನಸ ಡಾಗುರ್ ತ್ರತೀಯ ಸ್ಥಾನ ಹಾಗೇ ಕಾಪುವಿನ ಆಲೀಶಾ ವಾಜ್ ಮತ್ತು ಉಳ್ಳಾಲದ ಜೀತನ್ ಫೆರಾವೊ ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
2 ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ವಿಜೇತರು
ಬಸ್ರೂರಿನ ವೆನೋರಾ ಡಿಸೋಜಾ ಪ್ರಥಮ ಸ್ಥಾನ, ಹಾಸನದ ಜೆವಿನ್ ಮೆಂಡೊನ್ಸಾ ದ್ವಿತೀಯ ಸ್ಥಾನ, ಬಸ್ರೂರಿನ ಸೆಮೀನ್ ಮೆಂಡೊನ್ಸಾ ತ್ರತೀಯ ಹಾಗೇ ಕುಂದಾಪುರದ ಸಾನಿಯಾ ಡಿಮೆಲ್ಲೊ, ಮಂಗಳೂರು ಜಪ್ಪಿನಮೊಗರಿನ ವಿವಿಯನ್ ಜಸ್ಟಿನ್ ಪಿಂಟೊ, ಕುಂದಾಪುರದ ಅಲೈನಾ ಫೆನಾರ್ಂಡಿಸ್, ಬೈಂದೂರಿನ ಆಲೀಟಾ ಡಾಯಸ್ ಹಾಗೂ ಗಂಗೊಳ್ಳಿಯ ಒನೀಲ್ ಜೂಡ್ ರೆಬೆಲ್ಲೊ ಇವರು ಸಮಾಧಾನಕರ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
Prize distribution to the winners of “Muddu Yesu” 23-24 competition of Jananudi News Organization
Kundapur, June 15; The prize distribution program for the winners of Muddu Yesu competition held on 23-24 under the auspices of Jananudi news agency was done on two sides. First on June 11 in the chapel of Katkere Infant Jesus Ashram and On 14th Rosary was held in the Church Hall.
In a program held in the chapel of Katkere Infant Jesus Ashram, head of the ashram, Rev. Fr. Praveen Pinto and Rev. Fr. Josvi Siddakatte distributed the prizes. In the event held at the Kundapur Rosary Church hall, Rosary Church Fr. Very rev. Paul Rego, Kundapur Church Women’s Organization President Juliet Pais and Kundapur Rosary Society Director Shanthi Carvalho distributed it.
Bernard DCosta, founder editor of Jananudi News Organization, gave the introductory remarks and welcomed. Competition coordinator Vinaya DCosta presented the program, thanked the sponsors of the competition and thanked everyone.
Winners in the category of children under one year
Emilia Ruth Lobo of Gangolli won the first prize, Vaira Riona Rodriguez of Kundapur won the second prize, Manasa Dagur of Kundapur Koni won the third prize while Aleesha Vaz of Kapu and Jeethan Ferao of Ullal bagged the consolation prizes.
Winners in the 2 to 5 year old category
Venora D’Souza of Basrur got the first position, Jevin Mendonsa of Basrur second, Semin Mendonsa of Hassan third and Sania DiMello of Kundapur, Vivian Justin Pinto of Jappinamogar Mangalore, Alaina Fennardis of Kundapur, Aleeta Dias of Bynduri and Oneil Jude Rebello of Gangolli got the consolation prizes.
ಗುರುಗಳು ನೀಡುವ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನು ಸಾಧಿಸಿ – ಶಿಕ್ಷಕಿ ಲಲಿತಾ ಸಲಹೆ
ಶ್ರೀನಿವಾಸಪುರ : ಗುರಿವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಗುರುವಿನ ಗುಲಾಮನಾಗಿ, ಗುರುಗಳು ನೀಡುವ ಮಾರ್ಗದರ್ಶನವನ್ನು ಪಡೆದು ತಮ್ಮ ಜೀವನದ ಗುರಿಯನ್ನು ಸಾಧಿಸುವಂತಾಗಬೇಕು ಎಂದು ಶಿಕ್ಷಕಿ ಲಲಿತಾ ಸಲಹೆ ನೀಡಿದರು.
ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ 1999-2001 ರ ಬ್ಯಾಚ್ನ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾದ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಪನ್ಯಾಸಕಿ ಕೆ.ಜೆ.ರುಕ್ಮುಣಿ ಮತನಾಡಿ ಶಿಕ್ಷಕ ಸಮಾಜದ ಶಿಲ್ಪಿಯಾಗಿದ್ದು, ಯಾವುದೇ ಮೋಹ ಅಥವಾ ಬಂಧನಗಳಿಗೊಳಗಾಗದೇ ಸುಂದರ ಮತ್ತು ಸ್ವಸ್ಥ ಸಮಾಜ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತು ವಿದ್ಯಾರ್ಥಿಗಳಿಂದ ಯಾವುದೇ ಫಲಾಪೇಕ್ಷೆ ಬಯಸದೆ ಉತ್ತಮ ಶಿಕ್ಷಣವನ್ನು ನೀಡುವುದರೊಂದಿಗೆ ಸಮಾಜಕ್ಕೆ ಉತ್ತಮ ಸತ್ಪ್ರಜೆಗಳನ್ನು ಕೊಡಿಗೆಯಾಗಿ ನೀಡುತ್ತಿದ್ದಾನೆ . ವಿದ್ಯಾವಂತ ಯುವಕರು ಉನ್ನತ ವಿದ್ಯೆಯೊಂದಿಗೆ , ಉನ್ನತ ಪದವಿಯನ್ನು ಪಡೆದು ತಾವು ಓದಿದ ಶಾಲೆಗೆ ಹಾಗೂ ತಮ್ಮ ಸ್ವಂತ ಗ್ರಾಮದ ಉದ್ದಾರಕ್ಕಾಗಿ ಫಣತೊಡಬೇಕು ಎಂದರು.
ನಿವೃತ್ತ ಉಪನ್ಯಾಸಕ ಎಂ.ವಿ.ಬಷೀರ್ ಮಾತನಾಡಿ ವಿದ್ಯೆ ಅಕ್ಷರ ಜ್ಞಾನ ಮತ್ತು ಪ್ರಮಾಣಪತ್ರ ನೀಡಿದರೆ , ಬುದ್ದಿ ಜೀವನ ನಡೆಸುವುದುನ್ನು ಕಲಿಸುತ್ತದೆ. ಹೀಗಾಗಿ , ವಿದ್ಯಾರ್ಥಿಗಳಿಗೆ ವಿದ್ಯೆ ಮತ್ತು ಬುದ್ದಿ ಎರಡು ಮುಖ್ಯ ಎಂದರು.
ಪ್ರೌಡಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ನಿವೃತ್ತ ಪ್ರಾಂಶುಪಾಲ ಕೆ.ವಿ.ರೆಡ್ಡಪ್ಪ ಉಪನ್ಯಾಸಕರಾದ ಕೆ.ಎನ್.ಲಕ್ಷ್ಮಣರೆಡ್ಡಿ, ಆರ್.ಎಲ್.ಲೋಕೇಶ್ವರಪ್ಪ , ಉಪನ್ಯಾಸಕ ಜಿ.ನರಸಿಂಹರೆಡ್ಡಿ, ಕೆ.ಎನ್.ರಾಮಚಂದ್ರ, ದಿನ್ನೇ ಪಾಪಯ್ಯ ಶೆಟ್ಟಿ, ಲಲಿತಾ, ಅನಿಲ್ಕುಮಾರ್, ವೈ.ಆರ್.ನಾರಾಯಣಸ್ವಾಮಿ, ಹೇಮ, ಕಾಲೇಜಿನ ಸಿಡಿಸಿ ಸದಸ್ಯ ಸಿಮೆಂಟ್ನಾರಾಯಣಸ್ವಾಮಿ, ಪ್ರಾಂಶುಪಾಲೆ ಎಚ್.ಆಶಾ ಮಾತನಾಡಿದರು. ಉಪನ್ಯಾಸಕರಾದ ಎಂ.ಜಿ.ಗಿರೀಶ್, ಆಂಜಪ್ಪ,ಪ್ರೌಡಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಪಿ.ರೆಡ್ಡಪ್ಪ, ಮುಖ್ಯ ಶಿಕ್ಷಕ ಶ್ರೀಶೈಲ ಹಲವಾರ್, ಜಿ.ಎಸ್.ನಾರಾಯಣಸ್ವಾಮಿ, ಶಿವಮ್ಮ, ಸಂದ್ಯಾ, ಶಿಲ್ಪ , ಯುಂಗದರ್, ಹಳೇ ವಿದ್ಯಾರ್ಥಿಗಳು ರಘುನಾಥರೆಡ್ಡಿ, ಪ್ರಕಾಶ್, ಉಷಾ, ಎಂ.ಆರ್.ಮಂಜುಳ, ನಾಗರಾಜ್ರೆಡ್ಡಿ ಇತರರು ಇದ್ದರು.
ಉಡುಪಿ – ಮನೆಯಲ್ಲಿ ಅಗ್ನಿ ದುರಂತ ಉಡುಪಿ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಸಾವು – ಪತ್ನಿ ಗಂಭೀರ
ಉಡುಪಿ,ಜು.15 : ಉಡುಪಿಯ ಅಂಬಲಪಾಡಿಯ ಗಾಂಧಿನಗರ ಇಲ್ಲಿಯ ಮನೆಯೊಂದರಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ
ಗಂಭೀರವಾಗಿ ಗಾಯಗೊಂಡಿದ್ದ ಶೆಟ್ಟಿ ಬಾರ್ & ರೆಸ್ಟೋರೆಂಟ್ ಮಾಲೀಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು 3ಳದು ಬಂದಿದೆ.
ಅಂಬಲಪಾಡಿಯ ಶೆಟ್ಟಿ ಲಂಚ್ ಹೋಮ್ ಬಾರ್ ಅ್ಯಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ ಶೆಟ್ಟಿ (50) ಮೃತರು. ಘಟನೆಯಲ್ಲಿ ಗಾಯಗೊಂಡಿರುವ ಅವರ ಪತ್ನಿಗೆ ಖಾಸಗಿ ಅಸ್ಪತ್ರೆಯಲ್ಲಿ ಸದ್ಯ ಚಿಕಿತ್ಸ ನಿಂಡಲಾಗುತ್ತಿದೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ಅಭ್ಯವಾಗಿದೆ.
ಇವರ ಪುತ್ರ ಹಾಗೂ ಪುತ್ರಿ ಸ್ನಾನದ ಕೋಣೆಯಲ್ಲಿ ಅಶ್ರಯ ಪಡೆದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ 3ಳಸಿದ್ದಾರೆ.
ಮನೆಯೊಳಗಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಮೀಪ ನಿವಾಸಿಗಳು ಅಗ್ನಿ ಶಾಮಕ ದಳದವರಿಗೆ ಮಾಹಿತಿ ನೀಡಿದ್ದರು.
ಅಗ್ನಿ ಶಾಮಕ ದಳದ ಸಿಬ್ಬಂದಿ ಮನೆಯ ಬಾಗಿಲ ಮುರಿದು ಒಳಗಿದ್ದವರನ್ನು ಹೊರಗೆ ಕರೆತಂದಿದ್ದಾರೆ. ಈ ವೇಳೆ ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಅವರು.ಪ್ರಜ್ಞಾಹೀನ ಸ್ಥಿಯಲ್ಲಿದ್ದರು ಎಂದು ತಿಳಿದುಬಂದಿದೆ.
ಮೂರು ಅಂತಸ್ತಿನ ಮನೆಯೊಳಗಿನ ವಸ್ತುಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಬೆಳಗಿನ ಜಾವ 5.40ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಮನೆಯ ನೆಲಮಹಡಿ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಕೋಲಾರದಲ್ಲಿ ವಾಸವಿ ಮಹಿಳಾ ಮಂಡಳಿಯಿಂದ ಮೇಳಶ್ರಾವಣಕ್ಕೆ ಮುನ್ನಾಪೂಜಾ ಪರಿಕರಗಳ ಪ್ರದರ್ಶನ ಮಾರಾಟ
ಕೋಲಾರ:- ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಶ್ರೀವಾಸವಿ ಮಹಿಳಾ ಮಂಡಳಿಯು ಭಾನುವಾರ ವಾಸವಿ ಮಹಿಳಾ ಮೇಳವನ್ನು ಆಯೋಜಿಸಿದ್ದು, ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಪಾಲ್ಗೊಂಡಿದ್ದು, ಪೂಜಾ ಸಾಮಗ್ರಿಗಳ ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು.
ನಗರದಲ್ಲಿ ಆಶಾಢ ಮಾಸದಲ್ಲಿ ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಮೇಳವನ್ನು ಆಯೋಜಿಸುವುದು ವಾಡಿಕೆ. ಹಲವಾರು ವರ್ಷಗಳಿಂದ ಈ ಮೇಳ ನಡೆಸುತ್ತಿದ್ದು, ಈ ವರ್ಷವೂ ಉತ್ಸಾಹದಿಂದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಮೇಳವನ್ನು ಆಯೋಜಿಸಿ ನೂರಾರು ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿತ್ತು.
ಈಗ ಆಷಾಢ ಮಾಸ ಮುಗಿದ ನಂತರ ಬರುವ ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳನ್ನು ಆಚರಿಸುವುದರಿಂದ ಹಬ್ಬಕ್ಕೆ ಅಗತ್ಯವಿರುವ ಪೂಜಾ ಮತ್ತು ಅಲಂಕಾರಿಕ, ತಿಂಡಿ ತಿನಿಸುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶವಾಗಿದೆ.
ಆರ್ಯ ವೈಶ್ಯ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಮೇಳದಲ್ಲಿ ಮಳಿಗೆಗಳನ್ನಿಟ್ಟುಕೊಂಡು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. 2024ರ ಮಹಿಳಾ ಮೇಳದಲ್ಲಿ ಸುಮಾರು ನೂರು ವೈವಿಧ್ಯಮಯವಾದ ಮಳಿಗೆಗಳನ್ನು ಇಡಲಾಗಿತ್ತು. ಸಾರ್ವಜನಿಕರು ಮೇಳದಲ್ಲಿ ಪಾಲ್ಗೊಂಡು ತಮಗಿಷ್ಟವಾದ ಪೂಜಾ ಸಾಮಗ್ರಿಗಳನ್ನು ಖರೀದಿಸಿ, ತಿಂಡಿ ತಿನಿಸುಗಳನ್ನು ಸವಿದರು. ವ್ಯಾಪಾರಿಗಳಿಗೆಗ ವಾಸವಿ ಮಹಿಳಾ ಮಂಡಳಿಯಿಂದಲೇ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಾಸವಿ ಮಹಿಳಾ ಮಂಡಳಿಯು ಪ್ರತಿ ವರ್ಷ ಏರ್ಪಡಿಸುವ ಮೇಳದಿಂದಾಗಿ ಉತ್ಪನ್ನಗಳು ಒಂದೇ ದಿನದಲ್ಲಿ ಹೆಚ್ಚು ಮಾರಾಟ ಮಾಡಲು ಅವಕಾಶ ಸಿಕ್ಕಂತಾಗುತ್ತದೆ, ಈ ಬಾರಿಯೂ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆ ಮಾಡಲಾಗಿದೆಯೆಂದು ಮೇಳದಲ್ಲಿ ಮಳಿಗೆ ಇಟ್ಟಿರುವ ವಿನುತಾ ವಿವರಿಸಿದರು.
ಮೇಳದ ಉಸ್ತುವಾರಿಯನ್ನು ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಎ.ಜಿ.ಜಯಶ್ರೀ, ಉಪಾಧ್ಯಕ್ಷೆ ವಾಣಿ ಬಾಲಾಜಿ, ಕಾರ್ಯದರ್ಶಿ ಶೈಲಾ ಬದರಿನಾಥ್, ಖಜಾಂಚಿ ಪಿ.ವಿ.ಸತ್ಯಲಕ್ಷ್ಮಿ, ಸಹ ಕಾರ್ಯದರ್ಶಿ ನರ್ಮದಾ ಹೊತ್ತುಕೊಂಡಿದ್ದರು.
ಕೋಲಾರ ಬ್ರಾಹ್ಮಣ ಸಂಘದಿಂದ ಎಸ್ಸೆಸ್ಸೆಲ್ಸಿ ಪಿಯುಸಿ ಸಾಧಕರಿಗೆ ಪುರಸ್ಕಾರ – ಯಾವುದೇ ಹುದ್ದೇಗೇರಿದರೂ ಕಳಂಕರಹಿತರಾಗಿ ಮೊದಲು ಮಾನವರಾಗಿ-ಗಣೇಶ್
ಕೋಲಾರ:- ಗ್ರಾಪಂ ಸದಸ್ಯನಿಂದ ಸಚಿವರವರೆಗೂ, ಡಿಗ್ರೂಪ್ ನೌಕರನಿಂದ ಅಧಿಕಾರಿವರೆಗೂ ಇಂದು ಯಾವುದೇ ಹುದ್ದೆ ಕಳಂಕರಹಿತವಾಗಿಲ್ಲ ಎಂದು ವಿಷಾದಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಎಷ್ಟೇ ದೊಡ್ಡ ಸ್ಥಾನಮಾನ ಸಿಕ್ಕರೂ `ಮೊದಲು ಮಾನವನಾಗು’ ಎಂಬ ದಾಸರ ವಾಣಿ ನೆನಪಿನಲ್ಲಿಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭಾನುವಾರ ಕೋಲಾರ ಬ್ರಾಹ್ಮಣ ಸಂಘದಿಂದ ನಗರದ ಪಿಸಿ ಬಡಾವಣೆಯ ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಶಾಲಾ,ಕಾಲೇಜುಗಳ ತಲಾ ಇಬ್ಬರು ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರನ್ನು ಪುರಸ್ಕರಿಸಿದ ಅವರು ಕನಕದಾಸರು,ಪುರಂದರರ ದಾಸವಾಣಿಯಂತೆ ಹುದ್ದೆ,ಗೌರವ,ಸಂಪಾದನೆ ಎಲ್ಲವನ್ನೂ ಮೀರಿ ಮೊದಲು ಮಾನವರಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಯಲ್ಲಿ ಪ್ರತಿಭಾ ಪುರಸ್ಕಾರ ಎಂಬ ಪರಂಪರೆ ಆರಂಭಗೊಂಡಿದ್ದೇ ಬ್ರಾಹ್ಮಣ ಸಂಘದಿಂದ ಎಂಬುದು ಶ್ಲಾಘನೀಯ ವಿಷಯವಾಗಿದೆ ಜತೆಗೆ ಜಾತಿವಾರು ವಿದ್ಯಾರ್ಥಿಗಳನ್ನು ಕರೆಸಿ ಆಯಾ ಜಾತಿಯವರು ಪ್ರತಿಭಾ ಪುರಸ್ಕಾರ ಮಾಡುವುದನ್ನು ಪ್ರತಿ ವರ್ಷ ಗಮನಿಸುತ್ತಿದ್ದೇವೆ ಇದರಿಂದ ನಾವು ಮಕ್ಕಳಿಗೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬು ಆಲೋಚಿಸಬೇಕಾಗಿದೆ ಎಂದರು.
ಆದರೆ ಬ್ರಾಹ್ಮಣ ಸಂಘ ಜಾತಿ,ಧರ್ಮದ ಎಲ್ಲೆಯನ್ನು ಮೀರಿ ಯಾವುದೇ ಜಾತಿ,ಧರ್ಮವಿರಲಿ ಪ್ರತಿ ಶಾಲೆಯ ತಲಾ ಇಬ್ಬರು ಸಾಧಕರನ್ನು ಕರೆಸಿ ಪುರಸ್ಕರಿಸುತ್ತಿರುವುದು ಸಮಾಜಕ್ಕೆ ಆದರ್ಶವಾಗಿದೆ ಎಂದು ಅಭಿನಂದಿಸಿದರು.
ಜಾತಿವಾರು ಪ್ರತಿಭಾ ಪುರಸ್ಕಾರ ಮಾಡುವವರು ಕನಿಷ್ಟ ಜಿಲ್ಲೆಯಲ್ಲಿ ರ್ಯಾಂಕ್ ಪಡೆದ ಯಾವುದೇ ಸಮುದಾಯದ ಸಾಧಕರಾಗಿರಲಿ ಅಂತಹವರನ್ನು ಮಾತ್ರವಾದರೂ ತಮ್ಮ ಸಮುದಾಯದ ವಿದ್ಯಾರ್ಥಿಗಳ ಜತೆಗೆ ಕರೆಸಿ ಪುರಸ್ಕರಿಸಿ ಅವರಿಂದ ಪ್ರೇರಣೆಯ ಮಾತುಗಳನ್ನಾಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ನಿಮ್ಮ ಪರಿಶ್ರಮ,ಛಲ.ಶ್ರದ್ಧೆಯ ಪ್ರತಿಫಲವಾಗಿ ಸಿಗುವ ಹುದ್ದೆ ಕೇವಲ ಸಂಪಾದನೆಗೆ ಸೀಮಿತವಾಗದಿರಿಲಿ, ಸಂಪತ್ತು ಮಿತಿ ಮೀರಿದರೆ ಚಟಗಳಿಗೆ ದಾಸರಾಗುತ್ತೀರಿ, ಜತೆಗೆ ಸಮಾಜಕ್ಕೆ ಕಂಟಕರಾಗುತ್ತೀರಿ ಎಂದು ಎಚ್ಚರಿಸಿದ ಅವರು, ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು, ದೇಶಪ್ರೇಮ ರೂಢಿಸಿಕೊಂಡು ಮತ್ತೊಬ್ಬರಿಗೆ ನೆರವಾಗಬೇಕು ಎಂದರು.
ಹಣ,ಆರೋಗ್ಯಕ್ಕಿಂತ
ವ್ಯಕ್ತಿತ್ವ ಅತಿ ಮುಖ್ಯ
ಬೆಂಗಳೂರಿನ ಚಾರ್ಟರ್ಡ್ ಅಕೌಂಟೆಂಟ್ ವಿ.ಶ್ರೀಪತಿ ಮಾರ್ಗದರ್ಶನ ಭಾಷಣ ಮಾಡಿ, ಹಣ, ಆರೋಗ್ಯ ಏನೇ ಕಳೆದುಕೊಂಡರೂ ಸಂಪಾದಿಸಿ ಪಡೆಯಬಹುದು ಆದರೆ ವ್ಯಕ್ತಿತ್ವ,ನಡತೆ ಕಳೆದುಕೊಂಡರೆ ಖಂಡಿತಾ ಮತ್ತೆ ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಪೋಷಕರ ಒತ್ತಡ, ಹಿರಿಯರ ಸಲಹೆ ಎಲ್ಲದರ ನಡುವೆ ನೀವು ಯೋಚಿಸಿ ಉತ್ತಮವಾದುದುನ್ನು ಆಯ್ಕೆ ಮಾಡಿಕೊಂಡು ಶ್ರದ್ಧೆ,ಛಲದೊಂದಿಗೆ ಓದಿ, ಗುರಿ ಸಾಧನೆಗೆ ನಿಮ್ಮ ದಾರಿ ಅಚಲವಾಗಿರಬೇಕು ಎಂದ ಅವರು, ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವಾಗ ಸೋಲು ಎದುರಾದರೆ ವಿಚಲಿತರಾಗದೇ ಹಿರಿಯರೊಂದಿಗೆ ಚರ್ಚಿಸಿ, ಚರ್ಚೆಯಿಂದ ಜ್ಞಾನ ವೃದ್ದಿಯಾಗುತ್ತದೆ ಎಂದು ಸಲಹೆ ನೀಡಿದರು.
ಐದು ವರ್ಷಗಳ ನಿಮ್ಮ ಶ್ರದ್ದೆ,ಕಷ್ಟದ ಬದುಕು ನಿಮಗೆ 50 ವರ್ಷ ಸುಖಮಯ ಜೀವನ ನೀಡುತ್ತದೆ ಆದ್ದರಿಂದ ನೀವು ಓದುವ ಹಂತದಲ್ಲಿ ಕಷ್ಟವನ್ನು ಮೆಟ್ಟಿ ನಿಲ್ಲುವುದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು, ಯಾವುದೇ ಕೋರ್ಸ್ ಇರಲಿಬದ್ದತೆ, ಶ್ರದ್ಧೆ ಸಾಧನೆಗೆ ದಾರಿ ತೋರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಬ್ರಾಹ್ಮಣ ಸಂಘದ ಅಧ್ಯಕ್ಷ ಹೆಚ್.ಉದಯಕುಮಾರ್, ಈಗ ಶಾಲೆಗೆ ಮೊದಲಿಗರಾಗಿ ಸಾಧನೆ ಮಾಡಿದ್ದೀರಿ, ನಿಮ್ಮ ಮುಂದಿನ ಜೀವನದಲ್ಲಿ ಸಂಸ್ಕಾರದೊಂದಿಗೆ ಮತ್ತಷ್ಟು ಉನ್ನತ ಸ್ಥಾನಕ್ಕೆ ಹೋಗಿ, ನಿಮ್ಮ ಹಾದಿಯಲ್ಲಿ ಪ್ರಗತಿ ಸಾಧಿಸಿದ ನಂತರ ಕಷ್ಟದಲ್ಲಿರುವವರಿಗೂ ನೆರವಾಗಿ ಎಂದು ಕಿವಿಮಾತು ಹೇಳಿದರು.ಲ
ಪುರಸ್ಕಾರ ಸ್ವೀಕರಿಸಿದ ವಿದ್ಯಾರ್ಥಿಗಳಾದ ಮಹಮದ್ ಖಾನ್, ಹಿಲಿಯಾ ಮಾತನಾಡಿ,ಬ್ರಾಹ್ಮಣ ಸಂಘ ನಮಗೆ ಸಾಮಾಜಿಕ ಜವಾಬ್ದಾರಿ ನೆನಪಿಸಿದೆ, ನಮ್ಮ ಬದುಕಿನ ಹಾದಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ವೇದಿಕೆಯಲ್ಲಿನ ಗಣ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ನಿರೂಪಿಸಿದ ವೇದ ಸಂಸ್ಕøತ ಪಾಠಶಾಲೆ ಗುರುಗಳಾದ ರಾಮಕೃಷ್ಣಭಟ್ಟರು, ಅಹಂಕಾರ ತಲೆಗೆ ಹತ್ತಬಾರದು, ಶಿಕ್ಷಣದೊಂದಿಗೆ ವಿನಯ, ಸಂಸ್ಕಾರವಿರಲಿ, ಸಮಾಜಕ್ಕೆ ನೀವೂ ಕೊಡುಗೆ ನೀಡಿ, ಸಮಾಜ ಗುರುತಿಸುವಂತೆ ನಿಮ್ಮ ನಡತೆ ಇರಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಶಂಕರ್, ಬ್ರಾಹ್ಮಣ ಸಂಘ ನಡೆದು ಬಂದ ಹಾದಿಯನ್ನು ಪರಿಚಯಿಸಿ,45 ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರ ಮಾಡುತ್ತಿದ್ದು, ಸಾಮೂಹಿಕ ಉಪನಯನ, ರಕ್ತದಾನ ಶಿಬಿರ ಮತ್ತಿತರ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯ 67 ಹಾಗೂ ಪಿಯುಸಿಯ 36 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಕೀಲ ಸವಿನಯ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪಿ.ಚಂದ್ರಪ್ರಕಾಶ್, ಡಾ.ಕೃಷ್ಣಮೂರ್ತಿ, ಶಂಕರಮಠದ ಧರ್ಮಾಧಿಕಾರಿ ಜೆ.ಎನ್.ರಾಮಕೃಷ್ಣ,ರವಿಶಂಕರ್ ಅಯ್ಯರ್, ಕಂಪ್ಯೂಟರ್ ಅಮರ್, ಎಸ್.ಪ್ರವೀಣ್, ಲಕ್ಷ್ಮೀಪ್ರಸಾದ್,ವರುಣ್ ಕುಮಾರ್, ಕೃಷ್ಣ, ವಿನೋದ ಮಧುಕರ್ ಮತ್ತಿತರರು ಉಪಸ್ಥಿತರಿದ್ದು ಶ್ರೀನಿಧಿ ವಂದಿಸಿದರು.
ಕುಂದಾಪುರ ಸ್ಟ್ಯಾನಿ ಪಾಯ್ಸ್ (86) ನಿಧನ
ಕುಂದಾಪುರ, ಜು.13: ಹಿರಿಯ ತಾಮ್ರದ ವ್ಯಾಪರಿ ದಿ.ಆಲ್ಬರ್ಟ್ ಪಾಯ್ಸ್ ಇವರ ಹಿರಿಯ ಪುತ್ರ ಸ್ಟ್ಯಾನಿ ಪಾಯ್ಸ್ ಇವರ ಹಿರಿಯ ಪುತ್ರ (೮೬) ಅಲ್ಪ ಕಾಲದ ಅಸೌಖ್ಯದಿಂದ ಮಗಳ ಮನೆಯಲ್ಲಿ ಜುಲಾಯ್ 11 ರಂದು ನಿಧನರಾದರು.ಇವರು ಕುಂದಾಪುರ ಖಾರ್ವಿ ಕೇರಿ ನಿವಾಸಿಯಾಗಿದ್ದು, 48 ವರ್ಷಗಳ ಕಾಲ ಮುಂಬಯಲ್ಲಿ ನೆಲಸಿ, ಅಲ್ಲಿ ಪ್ರತಿಷ್ಟಿತ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿ ನಂತರ ಆಸ್ಟ್ರೆಲಿಯದಲ್ಲಿ ಮಗಳ ಮನೆಯಲ್ಲಿ ನಿವ್ರತ್ತಿ ಜೀವನ ನೆಡೆಸುತ್ತೀದ್ದರು, ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿ -ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ : ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಗ್ರಾಮಪಂಚಾಯಿತಿ ಕೈ ಜೋಡಿಸಿ ಗ್ರಾಮಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಧಿಕಾರಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸೂಚಿಸಿದರು.
ಪಟ್ಟಣದ ಹೊರವಲಯದ ಹೊಗಳಗೆರೆ ತೋಟಗಾರಿಕಾ ಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಕೆಡಿಪಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಅಲ್ಲದೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಇದ್ದಲ್ಲಿ ಸರಿಪಡಿಸುವಂತೆ ಪಿಡಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳ್ಳಿಗಳಲ್ಲಿನ ಸಶ್ಮಾನಗಳನ್ನು ಸರ್ವೆ ಮಾಡಿಸಿ ಬೌಂಡರಿ ಹಾಕಿಸುವಂತೆ ಪಿಡಿಒ ರವರಿಗೆ ಸೂಚಿಸಿದರು. ಆರೋಗ್ಯ ಇಲಾಖೆಯು ಡೆಂಘ್ಯು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ತುರ್ತಚಿಕಿತ್ಸೆಗೆ ಬೇಕಾದ ಸಿದ್ದತೆ ಮಾಡಿಕೊಳ್ಳಲು ದೂರವಾಣಿ ಮೂಲಕ ಸೂಚಿಸಿದರು.
ಜೆಜೆಎಂ ಗೆ ಸಂಬಂದಿಸಿದ ಕಾಮಗಾರಿಯು ಹಣದ ಕೊರತೆಯಿಂದ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿರುವದನ್ನ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸದ ಗುತ್ತಿಗೆದಾರರನ್ನ ಬದಲಾಯಿಸಲಾಗುವುದು ಎಂದು ಉತ್ತರಿಸಿದರು. ಕೇಂದ್ರ ಸರ್ಕಾರದ ಪಾಲಿನ ಹಣವನ್ನು ಬಳಿಸಿಕೊಂಡು ಜಲ ಜೀವನ್ ಮಿಷನ್ ಯೋಜನೆಗೆ ಸಂಬಂದಿಸಿದಂತೆ ಡಿಸಂಬರ್ 10 ತಾರೀಖು ಯೋಜನೆಯು ಮುಕ್ತಾಯವಾಗಲಿದ್ದು ಅದರ ಒಳಗೆ ಎಲ್ಲಾ ಕಾಮಾಗಾರಿಗಳು ಪೂರ್ಣಗೊಳಿಸಲಾಗುತ್ತದೆ.
ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ನಾವೆ ಸೃಷ್ಟಿಮಾಡಿಕೊಳ್ಳಬೇಕಾಗಿದೆ ಎಂದು ಮಾಹಿತಿ ನೀಡಿದರು. ಎಂಎಲ್ಸಿ ನಸೀರ್ ಅಹಮ್ಮದ್ರವರು ಗುತ್ತಿಗೆದಾರರ ಮೇಲೆ ಕೋಪಗೊಂಡು ಪಿಡಬ್ಲ್ಯುಡಿ ಇಲಾಖೆಗೆ ಸಂಬಂದಿಸಿದ ಎಲ್ಲಾ ರಸ್ತೆಗಳ ಕಾಮಗಾರಿ ನಿಲ್ಲಿಸಲಾಗಿದೆ.
ಮುಂದಿನ ದಿನಗಳಲ್ಲಿ ಬಂಗಾರುಪೇಟೆಯಿಂದ ಆಂದ್ರದ ಬಿ.ಕೊತ್ತಕೊಟಗೆ ಹಾಗು ಮದನಪಲ್ಲಿಗೆ ಹೋಗುವ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುವುದು. ಹಾಗೂ ಮುಳಬಾಗಿಲು ಹಾಗು ಮದನಪಲ್ಲಿಗೆ ಹೋಗುವ ರಸ್ತೆಗೆ ಸಂಬಂದಿಸಿದಂತೆ ಆರೇಳು ಎಕರೆ ಭೂಮಿ ಪ್ರದೇಶದಲ್ಲಿ ಕೈಗಾರಿಕಾ ವಲಯಗಳನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಪಟ್ಟಣವನ್ನು ಹಾಗೂ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎ.ಎನ್.ರವಿ, ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಶ್ರೀನಿವಾಸನ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಅಬಕಾರಿ ಇಲಾಖೆ ಇನ್ಸ್ಪೆಕ್ಟರ್ ಬಿ.ಎಸ್.ರೋಹಿತ್, ಪಿಡಬ್ಲ್ಯುಡಿ ಅಧಿಕಾರಿ ಎನ್.ನಾರಾಯಣಸ್ವಾಮಿ, ರೇಷ್ಮೆ ಇಲಾಖೆ ಕೃಷ್ಣಪ್ಪ, ವಾಟರ್ ಬೋರ್ಡ್ ಅಧಿಕಾರಿ ನಾರಾಯಣಸ್ವಾಮಿ, ತಾಲೂಕಿನ ಎಲ್ಲಾ ಪಿಡಿಒಗಳು, ಮುಖಂಡರಾದ ಬಂಡಪಲ್ಲಿ ಕೃಷ್ಣಾರೆಡ್ಡಿ, ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ರವಿಕುಮಾರ್ ಇತರರು ಇದ್ದರು.