ಕೋಲಾರ,ಏ.29: ನಗರದ ಬಂಗಾರಪೇಟೆ ಸರ್ಕಲ್ನಲ್ಲಿರುವ ಸಾಮ್ರಾಟ್ ಅಶೋಕ ಬಾರ್ನ ಕ್ಯಾಶಿಯರ್ ಶೇಷಗಿರಿ ನಾಯಕ್ ಹಾಗೂ ಸಿಬ್ಬಂದಿ ಮೇಲೆ ಹಣದ ವಿಚಾರಕ್ಕೆ ಕೊಲೆ ಮಾಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮದ್ಯದ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ರಕ್ಷಣೆ ನೀಡುವಂತೆ ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಎಸ್ಪಿ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಮದ್ಯ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಚಲಪತಿ, ಇತ್ತೀಚೆಗೆ ಕೋಲಾರ ನಗರದ ಮದ್ಯದ ಅಂಗಡಿಗಳಲ್ಲಿ ಪುಂಡಪೆÇೀಕರಿಗಳು, ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ನಗರದ ಟೇಕಲ್ ರಸ್ತೆಯಲ್ಲಿ ಬಾರ್ವೊಂದರ ಕಾರ್ಮಿಕನನ್ನು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ನಿನ್ನೆ ಸಂಜೆ ಸಾಮ್ರಾಟ್ ಅಶೋಕ ಬಾರ್ ಅಂಡ್ ರೆಸ್ಟೋರೆಂಟ್ನ ಕ್ಯಾಶಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೊಲೆಗೆ ಯತ್ನಿಸಿದ ಹಲ್ಲೆಕೋರರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ ವೇಳೆ ಹಲ್ಲೆಗೆ ಒಳಗಾದ ಮದ್ಯದ ಅಂಗಡಿಯ ಮಾಲೀಕ ಮತ್ತು ಕಾರ್ಮಿಕರಿಗೆ ಬೆದರಿಕೆ ಹಾಕಿ ಒಂದು ವೇಳೆ ತಮ್ಮ ವಿರುದ್ಧ ದೂರು ಕೊಟ್ಟರೆ ನಿಮ್ಮ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ಕೊಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.
ಈ ಘಟನೆಯಿಂದ ದೂರದ ಊರುಗಳಿಂದ ಮದ್ಯದ ಅಂಗಡಿಯಲ್ಲಿ ದುಡಿಯಲು ಬರುವ ಕಾರ್ಮಿಕರು ಭಯಭೀತಾರಾಗಿದ್ದಾರೆ. ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಕೊಡುವ ಅಬಕಾರಿ ಉದ್ಯಮಕ್ಕೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಕಂಠಪೂರ್ತಿ ಕುಡಿದು ಹಣ ನೀಡದೆ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಯ ಮಾಲೀಕರು ಮತ್ತು ಸಿಬ್ಬಂದಿಗೆ ಪೆÇಲೀಸರು ಮತ್ತು ಅಬಕಾರಿ ಇಲಾಖೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
Day: April 29, 2024
ಜನಮನ ಸೆಳೆದ ಕಾರಂಜಿಕಟ್ಟೆ ಹೂವಿನ ಕರಗ ಮಹೋತ್ಸವ ಸಂಪನ್ನ- ಮುಗಿಲು ಮುಟ್ಟಿದ ವೀರಕುಮಾರರ ಗೋವಿಂದಾ,ಗೋವಿಂದ ಜೈಕಾರ
ಕೋಲಾರ:- ನಗರದ ಕಾರಂಜಿಕಟ್ಟೆಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಕಳೆದ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ನೂರಾರು ವರ್ಷಗಳಿಂದ ಅಪಾರ ಜನಮನ್ನಣೆ ಗಳಿಸಿರುವ ಕಾರಂಜಿಕಟ್ಟೆಯ ಹೂವಿನ ಕರಗ ಮಹೋತ್ಸವದಲ್ಲಿ ಕಳೆದ ಹಲವಾರು ವರ್ಷಗಳಿಂದ ಕರಗ ಹೊರುತ್ತಿರುವ ಬೇತಮಂಗಲದ ಖ್ಯಾತ ಕರಗದ ಪೂಜಾರಿ ನಾಗರಾಜ್ರಿಗೆ ವಯಸ್ಸಾದ ಹಿನ್ನೆಲೆ ಅವರ ಪುತ್ರ ಮುನಿರಾಜು ಎರಡನೇ ಬಾರಿ ದೇವಾಲಯದ ಮುಂಭಾಗದ ಆವರಣದಲ್ಲಿ ನಿರ್ಮಿಸಿದ್ದ ಪುಷ್ಪಾಲಂಕೃತ ಸುಂದರ ವೇದಿಕೆಯಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ ಸೇರಿದ್ದ ಬೃಹತ್ ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು.
ವೀರ ಕುಮಾರರ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ಕರಗ ನೃತ್ಯಕ್ಕೆ ಜನರ ಶಿಳ್ಳೆ ಮತ್ತು ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು.
ಕರಗದ ಪೂಜಾರಿ ಮುನಿರಾಜು ತಮ್ಮ ಅನುಭವವನ್ನು ಕೃತಿಗಿಳಿಸಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ್ದ ಇಡೀ ಕಾರಂಜಿಕಟ್ಟೆ ಬಡಾವಣೆ ಅವಿಸ್ಮರಣೀಯ ಅನುಭವದಲ್ಲಿ ಮುಳುಗಿ ಹೋಯಿತು.
ಜಿಲ್ಲೆಯಲ್ಲೇ ಅತ್ಯಾಕರ್ಷಣೆಗೆ ಹೆಸರಾಗಿರುವ ಕಾರಂಜಿ ಕಟ್ಟೆಯ ಹೂವಿನ ಕರಗ ನಗರದ ನಾಗರೀಕರಿಗೆ ವಿವಿಧ ನೃತ್ಯ ಭಂಗಿಗಳ ರಸದೌತಣ ನೀಡುವಲ್ಲಿ ಸಫಲವಾಯಿತು.
ಕಾರಂಜಿ ಕಟ್ಟೆಯ ತಿಗಳ ಜನಾಂಗ ಕರಗವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ಇವರು ಮಾತ್ರವಲ್ಲದೇ ಸಮಾಜದ ಅನೇಕ ಮಂದಿ ಕರಗಕ್ಕೆ ಪೂಜೆ ಸಲ್ಲಿಸಿ ನಮಿಸಿ ಭಕ್ತಿ ಪ್ರದರ್ಶಿಸಿದರು.
ವೀರಕುಮಾರರ
ಸಾಹಸದ ಮೆರಗು
ಹೂವಿನ ಕರಗದೊಂದಿಗೆ ರಕ್ಷಕ ಭಟರಂತೆ ಕತ್ತಿ ಹಿಡಿದು ಸಂಚರಿಸುವ ವೀರಕುಮಾರರಿ ಕರಗ ನೃತ್ಯದ ವೇದಿಕೆಯ ಮೇಲೆ ಕತ್ತಿ ಝಳುಪಿಸುತ್ತಾ ನೀಡಿದ ಹಲಗು ಸೇವೆ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತಾಯಿತು.
ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು. ಇದಾದ ನಂತರ ಸೋಮವಾರ ಮಧ್ಯಾಹ್ನ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ದ್ರೌಪತಾಂಭ ದೇವಿ ಸೇರಿದಂತೆ ವಿವಿಧ ದೇವರುಗಳ ಪುಷ್ಪಪಲ್ಲಕ್ಕಿ ಉತ್ಸವವೂ ನಡೆಯಿತು. ದೇವಾಲಯ,ಆವರಣ ಸೇರಿದಂತೆ ಇಡೀ ಕಾರಂಜಿಕಟ್ಟೆ ಮುಖ್ಯರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಕರಗ ನೃತ್ಯಕ್ಕೆ ಜಾನಪದ ಕಲಾ ತಂಡಗಳು ಮೆರಗು ನೀಡಿದ್ದು, ನಗರ ಸೇರಿದಂತೆ ವಿವಿಧೆಡೆಗಳಿಂದ ಬಂದ ಸಹಸ್ರಾರು ಮಂದಿ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.
ಕರಗ ಮಹೋತ್ಸವಕ್ಕೆ ಮಾಜಿ ಸಚಿವ ವರ್ತೂರು ಪ್ರಕಾಶ್, ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್, ಸಹ್ಯಾದ್ರಿ ಉದಯಕುಮಾರ್, ಸಮುದಾಯದ ಮುಖಂಡ ಎಲ್.ಎ.ಮಂಜುನಾಥ್, ಪಾಲ್ಗುಣ ಸೇರಿದಂತೆ ನಗರಸಭಾ ಸದಸ್ಯರು, ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Passed Away : Stella Baretto (86) Kundapura – The funeral will be held on Tuesday evening
OBITUARY : Stella Baretto (86),Kundapura (St.Joseph vaz ward)
W/O. Late Philip Baretto
Mother of Helen/ Dominic Dsouza
Grand Mother of Late Steevan, Rosita / Edwin Rosario
Sis/O Jeffry Lawrence, John Felix. Fermine, Maria, Late Jacob, Justine and Jacintha
Funeral cortege leaves residence, Kundapura, (St.Joseph vaz ward) Tuesday 30 th April 2024 at 3:30 pm. followed by mass at 4:00 pm. Holy Rosary church, kundapua.
Contact: 9902433632, 9819481126
ಕುಂದಾಪುರ : ಬಟ್ಟೆ ಚೀಲ ಹೊಲಿದು ಕೊಡಲು ಬಯಸುವವರಿಗೆ ಹೊಲಿಗೆ ಯಂತ್ರ ನೆರವು ನೀಡಲಾಗುವುದು
ಕುಂದಾಪುರದ ಗೆಳೆಯರ ಬಳಗ ಸ್ವಾವಲಂಬನ ಕೇಂದ್ರಕ್ಕೆ ಬಟ್ಟೆ ಚೀಲ ಹೊಲಿದು ಕೊಡಲು ಬಯಸುವವರಿಗೆ ಹೊಲಿಗೆ ಯಂತ್ರ ಒದಗಿಸಿಕೊಟ್ಟು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿ ಕೊಡಲಾಗುತ್ತದೆ ಎಂದು ಕೇಂದ್ರದ ಸ್ಥಾಪಕರಾದ ವೆಂಕಟೇಶ ಪೈ ತಿಳಿಸಿದ್ದು, ಈಗ ಕೆಲವು ಹೊಲಿಗೆ ಯಂತ್ರಗಳು ಮಾತ್ರ ಇದ್ದು, ಆಸಕ್ತರಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ ಎಂದಿದ್ದಾರೆ. ಉಚಿತ ಪ್ರಾಥಮಿಕ ಹೊಲಿಗೆ ತರಬೇತಿ ನೀಡುತ್ತಾ ಬಂದಿರುವ ಕೇಂದ್ರದಲ್ಲಿ ಹಲವು ವಿನ್ಯಾಸಗಳ ಬಟ್ಟೆಯ ಚೀಲ ಹೊಲಿಯಲು ಅವಕಾಶವಿದೆ.
ಆಸಕ್ತರು ಕುಂದಾಪುರದ ಬಸ್ ಸ್ಟ್ಯಾಂಡ್ ಬಳಿ, ರಾಮ ಮಂದಿರ ರಸ್ತೆಯ ವಿಜಯ ಟೆಕ್ಸ್ಟೈಲ್ ಎದುರಿನ ರಮಾನಂದ ಭಟ್ ಕಂಪೌಂಡ್ಗೆ ಆಗಮಿಸಬಹುದು ಅಥವಾ ವೆಂಕಟೇಶ ಪೈ 9224102053 ಈ ಮೊಬೈಲ್ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಮೂಡ್ಲಕಟ್ಟೆ ಎಂ ಐ ಟಿ : ರಾಜ್ಯಮಟ್ಟದ ಸಾವಿಷ್ಕಾರ್ / Moodlakatte MIT : State Level Fest Savishkar
ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮೇ ತಿಂಗಳ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ಸಾವಿಷ್ಕಾರ್ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯಥೆಯನ್ನು ತೋರಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ.
ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ ಆಕರ್ಷಣೆಯಾಗಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಇಟ್ಟು ಕೊಳ್ಳಲಾಗಿದೆ. ಮೊದಲ ದಿನ ಸಂಜೆಗೆ ಕನ್ನಡ ಸಂಗೀತ ಕ್ಷೇತ್ರದಲ್ಲಿ ರಾಪ್ ಮಾದರಿಯ ಗೀತೆಗಳನ್ನು ಪರಿಚಯಿಸಿದ ಹೆಸರಾಂತ ರಾಪರ್ ಮತ್ತು ಬಿಗ್ ಬಾಸ್ ವಿಜೇತರಾದ ಚಂದನ್ ಶೆಟ್ಟಿ ಅವರು ಸಂಗೀತ ಕಾರ್ಯಕ್ರಮ ನೀಡಲು ಆಗಮಿಸಲಿದ್ದಾರೆ. ಹಾಗೆಯೇ ರಿಯಾಲಿಟಿ ಶೋ ನಲ್ಲಿ ಹೆಸರು ಗಳಿಸಿದ ಗಾಯಕಿ ಶಶಿಕಲಾ ಸುನಿಲ್ ಮತ್ತು ಗಾಯಕ ಧನುಷ್ ಅವರ ಸಂಗೀತಾ ಕಾರ್ಯಕ್ರಮ ನಡೆಯಲಿದೆ.
ಎರಡನೇ ದಿನದ ಪ್ರಮುಖ ಆಕರ್ಷಣೆಯಾಗಿ, ಸ್ಯಾಂಡಲ್ ವುಡ್ ನ ಮತ್ತೊಬ್ಬ ಪ್ರಸಿದ್ಧ ಗಾಯಕ, ತನ್ನ ಜಾನಪದ ಶೈಲಿಯಲ್ಲಿ ಹಾಡಿ ಪ್ರಸಿದ್ದಿ ಪಡೆದಿರುವ, ನವೀನ್ ಸಜ್ಜು ಅವರು ತಮ್ಮ ಬ್ಯಾಂಡ್ ನೊಂದಿಗೆ ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ.
ಚಂದನ್ ಶೆಟ್ಟಿ ಮತ್ತು ನವೀನ್ ಸಜ್ಜು ಅವರ ಕಾರ್ಯಕ್ರಮ ಉಡುಪಿಯಲ್ಲೇ ಮೊದಲ ಬಾರಿ ನಡೆಯಲಿದ್ದು, ಬಹು ದೊಡ್ಡ ಆಕರ್ಷಣೆಯಾಗಲಿದೆ.
ಹಾಗೆಯೇ ವಿದ್ಯಾರ್ಥಿಗಳು ಮತ್ತು ಯುವಜನರು ಇಷ್ಟ ಪಡುವ ಬೈಕ್ ಸ್ಟಂಟ್ ನ ಪ್ರದರ್ಶಿಸಲು ಅನುಭವಿ ಮತ್ತು ತರಬೇತಿ ಪಡೆದಿರುವ ಸ್ಟಂಟ್ ಮಾಸ್ಟರಗಳು ಬರಲಿದ್ದಾರೆ. ಡಾನ್ಸ್ ಕ್ಷೇತ್ರದಲ್ಲಿ ಹೆಸರು ಮಾಡಿದಂತ ಕೌಶಿಕ್ ಸುವರ್ಣ ಅವರ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ ಬೆಂಗಳೂರಿನ ದ್ವನಿವರ್ಧಕಗಳ ವ್ಯವಸ್ಥೆ ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಇಂತಹ ಒಂದು ಅದ್ದೂರಿ ಕಾರ್ಯಕ್ರಮಕ್ಕೆ ಎಲ್ಲಾ ಕಲಾಭಿಮಾನಿಗಳಿಗೆ ಕಾಲೇಜು ಆಡಳಿತ ಮಂಡಳಿ ಪ್ರೀತಿಯ ಆಮಂತ್ರಣ ನೀಡಿದೆ.
ಉಪಸ್ಥಿತಿ: ಪ್ರೊ ಮೆಲ್ವಿನ್ ಡಿ’ಸೋಜಾ, ಉಪಪ್ರಾಂಶುಪಾಲರು, ಎಂ ಐ ಟಿ, ಕುಂದಾಪುರ, ಡಾ. ರಾಮಕೃಷ್ಣ ಹೆಗಡೆ, ಡೈರೆಕ್ಟರ್ ಬ್ರಾಂಡ್ ಬಿಲ್ಡಿಂಗ್, ಪ್ರೊ. ವರುಣ್ ಕುಮಾರ್, ಕಾರ್ಯಕ್ರಮದ ಆಯೋಜಕರು.
Moodlakatte MIT : State Level Fest Savishkar
A two-day State-Level Cultural, Technical and Management Fest Savishkar will be held on May 1st and 2nd May at the prestigious Moodlakatte Institute of Technology Kundapur. More than 20 competitions will be held in this one program and students from around 30 colleges will participate and show their skills. The winners of all the competitions will get a certificate along with the cash prize.Various entertainment programs have been organized as main attractions on both the days to add color to the Fest. On the first day evening, Chandan Shetty, a renowned rapper who introduced rap style songs in the Kannada music industry and winner of Bigg Boss, will give a concert. Also, singer Sasikala Sunil and singer Dhanush, who gained fame in the reality shows, will give concerts. As the main attraction of the second day, another famous singer of Sandalwood, Naveen Sajju, who is famous for his folk style singing, will give a grand show with his band.
Chandan Shetty and Naveen Sajju’s show will be held for the first time in Udupi District and will be a huge attraction.
Also, experienced and trained stunt masters will come to perform bike stunts which are loved by students and youth.The program of Kaushik Suvarna, who has made a name for himself in the field of dance will also be held. Another special feature of this program is introducing Lightning and higher end Sound Systemsfrom Bangalore.
The college management has cordially invited all the art lovers for such a lavish event.
Appearance: Prof. Melwin D’Souza, Vice Principal, MIT, Kundapura, Dr. Ramakrishna Hegde, Director, Brand Building, Prof. Varun Kumar, Program Co-Ordinator.
ಲೈಂಗಿಕ ಹಗರಣದ ಆರೋಪಿ ಎನ್ ಡಿ ಎ ಅಭ್ಯರ್ಥಿ ಬಗ್ಗೆ ಬಿಜೆಪಿ ಏಕೆ ಮೌನ – ಅನಿತಾ ಡಿಸೋಜ, ಬೆಳ್ಮಣ್
ಉಡುಪಿ: ಮಾತೆತ್ತಿದರೆ ಮಾತೆಯರೇ ಎಂದು ಭಾಷಣ ಬಿಗಿಯುವ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈವ್ ಲೈಂಗಿಕ ಹಗರಣದ ಬಗ್ಗೆ ಗಾಢ ಮೌನಕ್ಕೆ ಜಾರಿದ್ದನ್ನು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ ಬೆಲ್ಮಣ್ ಪ್ರಶ್ನಿಸಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಿಗೆ ಆದ ಅನ್ಯಾಯ ಆಗಿರಬಹುದು, ಅಥವಾ ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿದ ಪ್ರಕರಣ ಆಗಿರಬಹುದು, ಈಗ ಸಹಸ್ರಾರು ಮಹಿಳೆಯರನ್ನು ಶೋಷಣೆಮಾಡಿ ತನ್ನ ಲೈಂಗಿಕ ತೃಷೆ ತೀರಿಸಿಕೊಂಡದ್ದಲ್ಲದೇ ಅವನ್ನೆಲ್ಲಾ ವೀಡಿಯೋ ಮಾಡಿದ ಆರೋಪ ಹೊತ್ತ ಎನ್ ಡಿ ಎ ವತಿಯಿಂದ ಹಾಸನ ಲೋಕಸಭೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿ ಪ್ರಜ್ವಲ್ ಬಗ್ಗೆ ಸನ್ಮಾನ್ಯ ಪ್ರಧಾನಿ ಆದಿಯಾಗಿ ಎಲ್ಲರೂ ಮೌನವಾಗಿರುವುದು ಮಹಿಳೆ ಅಂದರೆ ಬಿಜೆಪಿಗೆ ಅಸಡ್ಡೆ, ಮಹಿಳೆ ಕೇವಲ ಭೋಗಕ್ಕಾಗಿ ಇರುವ ವಸ್ತು ಎಂಬ ಕೀಳು ಭಾವನೆ ಇರುವುದು ಸಾಬೀತು ಪಡಿಸುತ್ತದೆ ಎಂದು ಅನಿತಾ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಏಕೆ ಓಡಿದರು, ತನ್ನ ಮೇಲಿನ ಆರೋಪಕ್ಕೆ ಸಾರ್ವಜನಿಕವಾಗಿ ಅವರು ಪ್ರತಿಕ್ರಿಯಿಸದೇ ವಿದೇಶಕ್ಕೆ ಪಲಾಯನ ಮಾಡುವುದೆಂದರೆ ಅವರು ಅಪರಾಧ ಮಾಡಿದ್ದಾರೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ. ಬಿಜೆಪಿ ಮಹಿಳಾ ನಾಯಕರುಗಳಾದರೂ ಈವಿಚಾರವನ್ನು ಮಾತಾಡಬೇಕು ಎಂದು ಅವರು ಆಗ್ರಹಿಸಿದರು.