ನರಸಾಪುರ,ಮಾ.18: ಮಹೇಂದ್ರ ಏರೋ ಸ್ಟೈಸ್ ಕಂಪನಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಖಾಸಗಿ ವ್ಯಕ್ತಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವ ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಕಾರ್ಮಿಕ ಸಚಿವರು ಹಾಗೂ ಜಿಲ್ಲಾಡಳಿತವನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯ ಮಾಡಿದ್ದಾರೆ.
ರೈತರ ಕೃಷಿ ಭೂಮಿ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಸ್ಥಳಿಯ ಕಾರ್ಮಿಕರಿಗೆ ಉದ್ಯೋಗ ನೀಡದೆ ಹೊರ ರಾಜ್ಯದ ಕಾರ್ಮಿಕರಿಗೆ ಲಕ್ಷ ಲಕ್ಷ ಉದ್ಯೋಗವನ್ನು ಮಾರಾಟ ಮಾಡಿ ನ್ಯಾಯಯುತ ಕಾರ್ಮಿಕರ ಬೆವರಹನಿಗೆ ತಕ್ಕ ವೇತನ ಮೂಲಭೂತ ಸೌಕರ್ಯ ಕೇಳುವ ಕಾರ್ಮಿಕರ ಮೇಲೆ ಕಂಪನಿ ಆಡಳಿತ ಮಂಡಳಿಯೇ ಖಾಸಗಿ ರೌಡಿಗಳಿಂದ ಹಲ್ಲೆ ಮಾಡಿದರೆ ಇನ್ನೂ ಪ್ರಜಾಪ್ರಭುತ್ವದಲ್ಲಿ ಸಂವಿಧಾನದಲ್ಲಿರುವ ನಾವುಗಳು ನಮ್ಮ ಹಕ್ಕನ್ನು ಕೇಳಿದರೆ ಕಾರ್ಮಿಕ ವಿರೋದಿ ನೀತಿಯೇ ಜೊತೆಗೆ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಜೀವಂತವಾಗಿದ್ದಾರೆಯೇ ಇಲ್ಲವೇ? ಕಂಪನಿಗಳ ಗುಲಾಮರಾಗಿ ಕಾರ್ಮಿಕರ ಶೋಷಣೆ ಮಾಡುತ್ತಿದ್ದಾರೆಯೇ ಎಂದು ನಾಪತ್ತೆ ಆಗಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳ ವಿರುದ್ದ ಅಸಮಾದಾನ ವ್ಯಕ್ತಪಡಿಸಿದರು.
ನ್ಯಾಯಯುತ ಬೇಡಿಕೆ ಈಡೇರಿಸಬೇಕಾದ ಜವಬ್ದಾರಿ ಕಂಪನಿಯ ಮಾಲೀಕರ ಹಾಗೂ ಆಡಳಿತ ಮಂಡಳಿಯ ಜವಬ್ದಾರಿ ಕಾರ್ಮಿಕ ಹಗಲು ರಾತ್ರಿ ಬೆವರು ಸುರಿಸಿ ಕಷ್ಟಪಟ್ಟರೆ ಮಾತ್ರ ಮಾಲೀಕನು ಎ.ಸಿ ಕಾರಿನಲ್ಲಿ ಭವ್ಯ ಬಂಗಲೆಯಲ್ಲಿ ಶ್ರೀಮಂತ ಜೀವನ ಸಾಗಿಸಲು ಕಾರ್ಮಿಕರ ಪರಿಶ್ರಮವೇ ಹೊರತು ಗುಂಡಾಗಳ ದೌರ್ಜನ್ಯವಲ್ಲ ಜೊತೆಗೆ ಹಲ್ಲೆ ನಡೆದ ದಿನ ಸಿ.ಸಿ ಕ್ಯಾಮಾರ ಕೆಲಸ ಮಾಡದಂತೆ ಸ್ಥಗಿತ ಮಾಡಿರುವ ಉದ್ದೇಶ ಏನೂ? ಕಾರ್ಮಿಕರ ಮೇಲೆ ಹಲ್ಲೇ ಮಾಡಬೇಕೆಂಬ ಉದ್ದೇಶದಿಂದಲೇ ಎಲ್ಲಾ ವ್ಯವಸ್ಥಿತ ಪಿತೂರಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಮೂಲಕ ಕಾರ್ಮಿಕ ವಿರೋದಿ ನೀತಿ ಅನುಸರಿಸುತ್ತಿರುವ ಹಾಗೂ ಹಲ್ಲೇ ಪ್ರಕರಣವನ್ನು ಗಂಬೀರವಾಗಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಪರಿಗಣಿಸದೇ ಇದ್ದರೆ ಕಾರ್ಮಿಕರ ನ್ಯಾಯಕ್ಕಾಗಿ ಕಂಪನಿ ಮುಂದೆ ಕಾರ್ಮಿಕರ ಜೊತೆ ಅಹೋರಾತ್ರಿ ದರಣಿ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳುವ ಎಚ್ಚರಿಕೆಯನ್ನು ಸಂಬಂದಪಟ್ಟ ಇಲಾಖೆಗಳಿಗೆ ಪತ್ರಿಕಾ ಹೇಳಿಕೆ ಮುಖಾಂತರ ಎಚ್ಚರಿಸಿದರು.
Month: March 2024
ಗಂಗೊಳ್ಳಿ : ಸಾಹಿತಿ, ರಂಗ ಕಲಾವಿದ, ಯು. ವಸಂತ ಕುಮಾರ್ ಶೆಣೈ ನಿಧನ
“ಇ.ಎಸ್.ಐ. ಕೊರ್ಪರೇಷನ್” ನ ನಿವೃತ್ತ ಹಿರಿಯ ಅಧಿಕಾರಿ, ಸಾಹಿತಿ, ನಾಟಕಗಾರ, ರಂಗ ಕಲಾವಿದ ಯು. ವಸಂತ ಕುಮಾರ್ ಶೆಣೈ, ಗಂಗೊಳ್ಳಿ (75) ಮಾ.18 ರಂದು ಸೋಮವಾರ ಕೋಟೇಶ್ವರದಲ್ಲಿ ನಿಧನರಾದರು.
ಗಂಗೊಳ್ಳಿಯ ಹೋಟೆಲ್ ಉದ್ಯಮಿ ಯು. ಶೇಷಗಿರಿ ಶೆಣೈಯವರ ಹಿರಿಯ ಪುತ್ರರಾದ ಇವರು ಬೆಂಗಳೂರು ವಿ.ವಿ.ದಲ್ಲಿ ಸಂಗೀತ, ರಂಗಕಲೆಯಲ್ಲಿ ಶಿಕ್ಷಣ ಪಡೆದಿದ್ದಲ್ಲದೇ ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಇ.ಎಸ್.ಐ.ಸಿ. ವೇದಿಕೆಗಳಲ್ಲದೇ ಬೆಂಗಳೂರಿನ ರಂಗ ಸಂಪದ ಸೇರಿದಂತೆ ಹವ್ಯಾಸಿ ನಾಟಕ ಸಂಸ್ಥೆಗಳಲ್ಲಿ ಕಲಾವಿದರಾಗಿ, ಮೇಕಪ್ ತಜ್ಞರಾಗಿ “ಮೈಮ್” ಕಲಾವಿದರಾಗಿ ಹೆಸರು ಗಳಿಸಿದವರು. ಸ್ವತ: ಹಲವು ನಾಟಕಗಳನ್ನು ಬರೆದವರು. ಕವಿ, ಲೇಖಕರಾಗಿ ಗುರುತಿಸಲ್ಪಟ್ಟವರು. ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಉಡುಪಿ ರಂಗ ಭೂಮಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ರೇಡಿಯೋ, ನಾಟಕಗಳಲ್ಲಿ ವಿಶಿಷ್ಟ ಪಾತ್ರ ವಹಿಸಿದವರು.
ಇವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪುನೀತ್ ರಾಜಕುಮಾರ್ ರವರ 49 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಿಹಿ ಹಂಚಿ, ಅನ್ನ ಸಂತರ್ಪಣೆ
ತಲ್ಲೂರಿನಲ್ಲಿ ಕುಂದಾಪುರ ವಲಯ ಮಟ್ಟದ ‘ವೈವಾಹಿಕ ಫಲಪ್ರದಾಯಕ ಜೀವನ’ ಶಿಬಿರ / Matrimonial Enrichment Camp at Kundapur Deanery Level in Tallur
ತಲ್ಲೂರು,ಮಾ.18: ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗ ನೀಡಿರುವ ಮಾರ್ಗಸೂಚಿಗಳು ಮತ್ತು ಕಾರ್ಯಸೂಚಿಗೆ ಅನುಸಾರವಾಗಿ, ಕುಂದಾಪುರ ವಲಯದ ವಿವಾಹಿತ ದಂಪತಿಗಳ ಅನುಕೂಲಕ್ಕಾಗಿ ವೀಶೆಷವಾಗಿ ಮದುವೆಯಾಗಿ ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷ ಪೂರೈಸಿದ ವಿವಾಹಿತರಿಗಾಗಿ ‘ವೈವಾಹಿಕ ಫಲಪ್ರದಾಯಕ ಜೀವನ’ ಎಂಬ ಶಿಬಿರ ತಲ್ಲೂರು ಘಟಕದ ಕುಟುಂಬ ಆಯೋಗವು ಮಾರ್ಚ್ 17, 2024 ರಂದು ಭಾನುವಾರ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಹಾಲ್ನಲ್ಲಿ ಆಯೋಜಿಸಿತ್ತು.
ಬೆಳಗ್ಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲ ಭಾಗವಾಗಿ ಕಲ್ಯಾಣಪುರದ ಸೇಂಟ್ ಮಿಲಾಗ್ರೆಸ್ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕಿ ಹಿಲ್ಡಾ ಡಿಸಿಲ್ವಾ ನಡೆಸಿಕೊಟ್ಟರು, ಅವರು ಯಶಸ್ವಿ ಕುಟುಂಬ ಜೀವನದ ಅಗತ್ಯ ಅಂಶಗಳು ಮತ್ತು ಪರಸ್ಪರ ಗೌರವವನ್ನು ಪೋಷಿಸುವ ಮಹತ್ವದ ಕುರಿತು ಮಾತನಾಡಿದರು.
ಎರಡನೇ ಭಾಗದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಆಯೋಗದ ನಿರ್ದೇಶಕರಾದ ಲೆಸ್ಲಿ ಅರೋಜಾ ಅವರು ನಡೆಸಿಕೊಟ್ಟರು. ‘ನಮ್ಮ ಕುಟುಂಬ, ನಮ್ಮ ಜವಾಬ್ದಾರಿ’ ವಿಷಯದ ಕುರಿತು ಮಾತನಾಡಿದರು. ದಂಪತಿಗಳಿಗೆ ಸಾಮಾನ್ಯವಾಗಿ ಎದುರಾಗುವ ವಿವಿಧ ಕಹಿ ಅನುಭವಗಳನ್ನು ಅವರು ವಿವರಿಸಿದರು.
ತಲ್ಲೂರು ಚರ್ಚಿನ ಧರ್ಮಗುರು ವಂ.ಎಡ್ವಿನ್ ಡಿಸೋಜಾ ಸಮಾರೋಪದ ಅಂತ್ಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
Matrimonial Enrichment Camp at Kundapur Deanery Level in Tallur
Talluru, March 18: In accordance with the guidelines and agenda given by the Central Family Commission of Udupi Diocese, the seminar on “Marriage Enrichment Programme” exclusively for the benefit of married couples of Kundapura Deanery, who had completed minimum of 10 years to a maximum of 20 years of married life, was organised by the Family Commission of Tallur unit on Sunday, 17th of March 2024 at St. Francis of Assisi Church Hall.
The programme commenced at 9:30 a.m. with a prayer. The first session was conducted by Mrs. Hilda D’silva, retired Economics Lecturer at St. Milagres College, Kallianpur, who spoke on the essential aspects of a successful Family Life and the importance of nurturing mutual respect.
The second session was conducted by Mr. Leslie Arouza, Director of the Family Commission of Udupi Diocese. He spoke on the topic ‘Our Family, Our Responsibility’. He narrated various bitter experiences commonly encountered by the couples.
The day’s proceedings culminated with the Holy Mass celebrated by Rev. Fr. Edwin D’Souza. At the conclusion of the sessions, Rev. Fr. Edwin D’Souza expressed his gratitude to the resource persons as well as those who took part in the programme.
ಅಡ್ಡಗಲ್ ಗ್ರಾಮದಲ್ಲಿ ಸ್ಥಳೀಯ ಗ್ರಾ,ಪಂ. ನೀತಿ ಸಂಹಿತೆ : ಮನೆಗಳ ಮೇಲೆ ಕಟ್ಟಲಾಗಿದ್ದ ಕೇಸರಿ ಧ್ವಜ ಹಾಗೂ ಶ್ರೀರಾಮನ ಕಟೌಟ್ಗಳ ತೆರವು – ಆಕ್ರೋಶ
ಶ್ರೀನಿವಾಸಪುರ : ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸ್ಥಳೀಯ ಗ್ರಾ,ಪಂ. ನೀತಿ ಸಂಹಿತೆ ಹೆಸರಿನಲ್ಲಿ ಮನೆಗಳ ಮೇಲೆ ಕಟ್ಟಲಾಗಿದ್ದ ಕೇಸರಿ ಧ್ವಜ ಹಾಗೂ ಶ್ರೀರಾಮನ ಕಟೌಟ್ಗಳನ್ನು ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಗ್ರಾಮದ ಕೂರೀಗೆಪಲ್ಲಿ ರಸ್ತೆಯ ತಿಪ್ಪೆಯಲ್ಲಿ, ಸ್ಮಶಾನದ ಬಳಿ ಬಿಸಾಡಿದ್ದಕ್ಕೆ ಗ್ರಾ.ಪಂ ಸದಸ್ಯ ವೇಂಪಲ್ಲಿ ವೆಂಕಟರಮಣ, ಮೊಟಮಾಕಲ ರಘು, ರೆಡ್ಡಪ್ಪ, ಯಡಗಾನಪಲ್ಲಿ ಶಿವಣ್ಣ, ವೆಂಕಟರಮಣ, ಮಲ್ಲಿಮೋರಪಲ್ಲಿ ಮದನಮೋಹನರೆಡ್ಡಿ, ಚಿಂತಪಲ್ಲಿ ಗ್ರಾಮದ ಗೋವಿಂದು, ಮಂಜುನಾಥ್, ವೆಂಕಟೇಶ್, ದಿಗವ ಚಿಂತಪಲ್ಲಿ ಬಾಲಾಜಿರೆಡ್ಡಿ ರವರು ಗ್ರಾ,ಪಂ ಸಿಬ್ಬಂದಿ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಕೂರಿಗೇಪಲ್ಲಿ – ಅಡ್ಡಗಲ್ ರಸ್ತೆಯಲ್ಲಿ ರಸ್ತೆ ತಡೆಮಾಡಿ ಪಿಡಿಒ ಏಜಾಜ್ಪಾಷ ವಿರುದ್ಧ ದಿಕ್ಕಾರಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಗೌನಿಪಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಪ್ರತಿಭಟನಕಾರರನ್ನು ಸಮಾದಾನಪಡಿಸಿದ ನಂತರ ರಸ್ತೆ ತಡೆಯ ಪ್ರತಿಭಟನಕಾರರನ್ನು ತೆರವುಗೊಳಿಸಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಡಿ.ವಿ.ಗುಂಡಪ್ಪ ಜನ್ಮ ದಿನ ಅಚರಣೆ
ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಪತ್ರಕರ್ತರ ಭವನದಲ್ಲಿ ಡಿವಿಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಡಿ.ವಿ.ಗುಂಡಪ್ಪ ಅವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಡಿವಿಜಿ ಪತ್ರಕರ್ತರ ಸಂಘ ಹುಟ್ಟು ಹಾಕಿದ್ದು ಮಾತ್ರವಲ್ಲ; ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ. ಹೊಟ್ಟೆಪಾಡಿಗಾಗಿ ಪತ್ರಕರ್ತ ಆದೆ ಎಂದಿದ್ದರು. ಆದರೆ, ಎಲ್ಲೂ ಕೈಚಾಚಲಿಲ್ಲ. ನೈತಿಕತೆ ಕಳೆದುಕೊಳ್ಳಲಿಲ್ಲ. ಯಾರ ಹಂಗಿಗೂ ಒಳಗಾಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದರು, ಡಿವಿಜಿ ಬರೆದೊರುವ ವೃತ್ತ ಪತ್ರಿಕೆ ಎಂಬ ಕೃತಿ ಈಗಲೂ ಪ್ರಸ್ತುತ. ತಂತ್ರಜ್ಞಾನ ಬೆಳೆದಿದ್ದರೂ ಪತ್ರಿಕೋದ್ಯಮ ಹಾಗೂ ಪತ್ರಕರ್ತರ ಮೂಲ ಸಿದ್ಧಾಂತ ಬದಲಾಗಿಲ್ಲ, ಪತ್ರಕರ್ತರನ್ನು ಡಿವಿಜಿ ಯೋಧರಿಗೆ ಹೋಲಿಸಿದ್ದಾರೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಸಂಘದಿಂದ ಪ್ರತಿ ವರ್ಷ ಡಿ.ವಿ.ಗುಂಡಪ್ಪ ಜಯಂತಿ ಆಚರಣೆ ಮಾಡಲಾಗುತ್ತಿದೆ. ಅವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರು ಕೂಡ. ಪತ್ರಕರ್ತರಿಗೆ ಮೌಲ್ಯಯುತ ಹಾದಿ ಕಟ್ಟಿಕೊಟ್ಟವರು. ದುರದೃಷ್ಟಕರವೆಂದರೆ ಈಗ ಪತ್ರಿಕೋದ್ಯಮದಲ್ಲಿ ಆದರ್ಶ ಇಲ್ಲವಾಗಿದೆ. ವೃತ್ತಿ ಧರ್ಮ ಕೈಬಿಟ್ಟರೆ ಆ ವೃತ್ತಿಗೆ ಗೌರವ ಇರುವುದಿಲ್ಲ. ಡಿವಿಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಉತ್ತಮ ಎಂದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯವಿ.ಮುನಿರಾಜು ಮಾತನಾಡಿ, ಸಂಘ ಡಿ.ವಿ. ಗುಂಡಪ್ಪ ಹಾದಿಯಲ್ಲಿ ನಡೆಯಬೇಕು. ಅವರಂತೆ ನಾವು ಆಗಲು ಅಸಾಧ್ಯ. ಆದರೆ, ಶೇ ೬೦ ರಷ್ಟಾದರೂ ಅವರ ಮೌಲ್ಯ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು ಎಂದರು.
ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್ ಮಾತನಾಡಿ, ಕರ್ನಾಟಕಕ್ಕೆ ಹೆಸರಾದವರು ಡಿವಿಜಿ. ಸಂಘ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ. ಕೋಲಾರ ಜಿಲ್ಲೆಯವರು ಎಂಬುದು ನಮ್ಮ ಹೆಮ್ಮೆ. ಅವರ ಮೌಲ್ಯ ಅಳವಡಿಸಿಕೊಳ್ಳಬೇಕು. ಆದರೆ, ಆ ಪ್ರಯತ್ನ ನಡೆಯುತ್ತಿಲ್ಲ. ಪತ್ರಿಕೋದ್ಯಮ ಕ್ಷೀಣಿಸಿದರೆ ಲಕ್ಷಾಂತರ ಕುಟುಂಬಗಳಿಗೆ ತೊಂದರೆ ಆಗಲಿದೆ. ಒಗ್ಗಟ್ಟಾಗಿ ಇರಬೇಕು ಎಂದರು.
ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ್ ಮಾತನಾಡಿ, ಸ್ವಾತಂತ್ರ್ಯಪೂರ್ವದಲ್ಲೇ ಅವರು ಸಂಘದ ಕನಸು ಕಂಡವರು, ಆದರ್ಶದ ಮಾರ್ಗ ಹಾಕಿ ಕೊಟ್ಟವರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ. ಸಾವದಾನವಾಗಿ ವಿಚಾರ ತಿಳಿದುಕೊಳ್ಳಬೇಕು. ಸಲುಗೆ ಕೊಡದೆ ವೃತ್ತಿ ಜೀವನ ನಡೆಸಬೇಕು. ಅದೇ ಗುಂಡಪ್ಪ ಅವರಿಗೆ ಸಲ್ಲಿಸುವ ಗೌರವ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎಸ್.ಸಚ್ಚಿದಾನಂದ, ಓಂಕಾರಮೂರ್ತಿ, ಕೆ.ಬಿ.ಜಗದೀಶ್, ಚಾಂದ್ ಪಾಷ, ಕೆ.ಎಸ್.ಸುದರ್ಶನ್, ಕೋಲಾರನ್ಯೂಸ್ ಚಂದ್ರು, ಪುರುಷೋತ್ತಮ, ಸತೀಶ್ ಎನ್, ಸಿ.ಅಮರೇಶ, ಶ್ರೀನಿವಾಸ್ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ
ಲೋಕಸಭಾ ಚುನಾವಣೆ ಘೋಷಣೆ:ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ
ಕೋಲಾರ : ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಹೇಳಿದರು.
ಇಂದು ತಮ್ಮ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕೋಲಾರ ಕ್ಷೇತ್ರಕ್ಕೆ ಮಾರ್ಚ್ 28 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಏಪ್ರಿಲ್ 04 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಏಪ್ರಿಲ್ 05ಕ್ಕೆ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 08 ಕೊನೆಯ ದಿನವಾಗಿದೆ.
ಏಪ್ರಿಲ್ 26ಕ್ಕೆ ದಕ್ಷಿಣ ಕರ್ನಾಟಕದ ಭಾಗಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ್ಯಂತ 2100 ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, 816475 ಪುರುಷರು ಮತ್ತು 812149 ಮಹಿಳೆಯರು ಇತರರು 158 ಸೇರಿ 1628782 ಮತದಾರರು ಮತ ಚಲಾಯಿಸಲು ಅರ್ಹರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ, ಹಿರಿಯರು ಮತ್ತು ವಿಕಲಚೇತನರಿಗೆ ಯಾರ್ಂಪ್ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಮತದಾನ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಅಥವಾ ಬುರ್ಖಾ ಧರಿಸುವಂತಿಲ್ಲ ಎಂದು ಡಿ.ಸಿ.ಅಕ್ರಂ ಪಾಷ ಸ್ಪಷ್ಟನೆ ನೀಡಿದರು.
ಮಾದರಿ ನೀತಿ ಸಂಹಿತೆ ತಕ್ಷಣದಿಂದಲೆ ಜಾರಿಯಾಗಿರುವುದರಿಂದ ರಾಜಕೀಯ ಸಭೆ, ಸಮಾರಂಭಕ್ಕೆ ಪರವಾನಿಗೆ ಕಡ್ಡಾಯವಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಡೆಯುವ ಜಯಂತಿಗಳು ಪೂಜೆಗೆ ಸೀಮಿತವಾಗಿ ಸರಳಾಚರಣೆ ಮಾಡಲಾಗುತ್ತದೆ. ನಿಗಮ-ಮಂಡಳಿಗಳ ಅಧ್ಯಕ್ಷರಿಗೆ ಸರ್ಕಾರದಿಂದ ನೀಡಲಾದ ಎಲ್ಲಾ ಸೌಲಭ್ಯಗಳನ್ನು ವಾಪಸ್ ಪಡೆಯಲಾಗುತ್ತದೆ.
ಸರ್ಕಾರಿ ಅಧಿಕಾರಿಗಳು, ನೌಕರರಿಗೆ ರಜೆ ನಿಬರ್ಂಧಿಸಿದ್ದು, ಕೇಂದ್ರಸ್ಥಾನ ಬಿಡುವಂತಿಲ್ಲ. ಜಿಲ್ಲೆಯಿಂದ ವರ್ಗಾವಣೆ ಮಾಡುವಂತಿಲ್ಲ. ಅತಿಥಿಗೃಹಗಳು ಜಿಲ್ಲಾ ಚುನಾವಣಾಧಿಕಾರಿಗಳ ಅಧಿಗ್ರಹಣದಲ್ಲಿರುವುದರಿಂದ ರಾಜಕೀಯ ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ಸಾರ್ವಜನಿಕರಿಗೆ ಪ್ರವಾಸಿ ಮಂದಿರದಲ್ಲಿ ನಿಷೇಧಿಸಲಾಗಿದೆ ಎಂದರು.
ಚುನಾವಣೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯಲು ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
2024ರ ಚುನಾವಣೆ ವಿಶೇಷ:
80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದಿದ್ದಲ್ಲಿ ಅಂತವರಿಗೆ ಮನೆಯಿಂದಲೇ ಮತದಾನ ಮಾಡಲು ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಶೇ.50ರಷ್ಟು ಮತಗಟ್ಟೆಯಲ್ಲಿ ಸಿ.ಸಿ.ಟಿ.ವಿ. ಕಣ್ಣಾವಲು ಇರಲಿದೆ. ಮಹಿಳಾ ಸ್ನೇಹಿಯಾಗಿ 30ಸಖಿ ಪಿಂಕ್ ಬೂತ್ ಇರಲಿವೆ.
ಇದಲ್ಲದೆ ವಿಲಚೇತನರೇ ಕಾರ್ಯನಿರ್ವಹಿಸುವ 9 ಮತಗಟ್ಟೆಗಳು ಮತ್ತು 20ರ ಆಸುಪಾಸು ಯುವಕ-ಯುವತಿ ಸಿಬ್ಬಂದಿಯಿಂದ ಕೂಡಿದ 6 ಮತಗಟ್ಟೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.
90 ಲಕ್ಷ ಖರ್ಚು ಮಿತಿ:
ಲೋಕಸಭಾ ಕ್ಷೇತ್ರದ ಪ್ರತಿ ಅಭ್ಯರ್ಥಿಗೆ 90 ಲಕ್ಷ ರೂ. ಖರ್ಚಿನ ಮಿತಿ ನಿಗದಿಪಡಿಸಿದ್ದು, ಪಕ್ಷಕ್ಕೆ ಮಿತಿ ಇರುವುದಿಲ್ಲ. ಇದು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಕತಾಣಗಳ ಮೂಲಕ ಮಾಡುವ ಜಾಹೀರಾತನ್ನು ಸಹ ಒಳಗೊಂಡಿದೆ ಎಂದು ಡಿ.ಸಿ. ತಿಳಿಸಿದರು.
ಕಾಸಿಗಾಗಿ ಸುದ್ದಿ ಮೇಲೆ ತೀವ್ರ ನಿಗಾ:
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿ, ಪಕ್ಷದ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಸುದ್ದಿ ಪ್ರಕಟಣೆ, ಬಿತ್ತರಣೆ ಮಾಡುವ ಮಾಧ್ಯಮ ಸಂಸ್ಥೆಗಳ ಮೇಲೆ ನಿಗಾ ವಹಿಸಲು ಎಂ.ಸಿ.ಎಂ.ಸಿ. ಸಮಿತಿ ರಚಿಸಿಲಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಸೆಲ್ ಸಹ ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಹೋಡಿರ್ಂಗ್ಸ್, ಬಂಟಿಂಗ್ಸ್ ತೆರವಿಗೆ ಸೂಚನೆ:
ಚುನಾವಣೆ ಘೋಷಣೆಯಾಗಿರುವುದರಿಂದ ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಮತ್ತು ಖಾಸಗಿ ಹೆದ್ದಾರಿ ಫಲಕಗಳು ಮೇಲಿನ ಸರ್ಕಾರಿ ಯೋಜನೆಗಳ ಪ್ರಚಾರದ ಬಂಟಿಂಗ್ಸ್, ಬ್ಯಾನರ್ಸ್, ಭಿತ್ತಿಪತ್ರ, ಕಟೌಟ್ಗಳನ್ನು ಕೂಡಲೆ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದೆ ಎಂದರು.
28 ಚೆಕ್ ಪೋಸ್ಟ್ ಸ್ಥಾಪನೆ:
ಜಿಲ್ಲೆಯಾದ್ಯಂತ 28 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಇದರಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಗೆ 10 ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್ ಮತ್ತು ಕೋಲಾರ ಪೊಲೀಸ್ ವ್ಯಾಪ್ತಿಯಲ್ಲಿ 18ಚೆಕ್ ಪೋಸ್ಟ್ಗಳಿವೆ. ಇದಲ್ಲದೆ ಜಿಲ್ಲೆಯಲ್ಲಿ ಸೆಕ್ಟರ್ ಅಧಿಕಾರಿಗಳು, 108ಸ್ಟಾಟಿಕ್ ಸರ್ವೆಲೆನ್ಸ್ ತಂಡ, 57 ಫೈಯಿಂಗ್ ಸ್ವಾಡ್ ತಂಡ, 22ವಿ.ಎಸ್.ಟಿ. ತಂಡ, 8ವಿ.ವಿ.ಟಿ. ತಂಡ, 8ಅಕೌಂಟ್ ತಂಡ ರಚಿಸಲಾಗಿದೆ.75 ವಲನರೇಬಲ್ ಮತಗಟ್ಟೆ ಎಂದು ಗುರುತಿಸಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಲಾರ ಎಸ್.ಪಿ.ಎಂ ನಾರಾಯಣ, ಕೆ.ಜಿ.ಎಫ್ ಎಸ್.ಪಿ ಶಾಂತಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಾಣಿಕ್ಯಾಳ್ ಇದ್ದರು.
ಕುಂದಾಪುರದ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ 12 ನೇ ಶಾಖೆ ಕಾರ್ಕಳದಲ್ಲಿ ಶುಭಾರಂಭ
ಕಾರ್ಕಳ, ಮಾ. 17: 32 ವರ್ಷಗಳ ಇತಿಹಾಸ , 155 ಕೋಟಿಗೂ ಮಿಕ್ಕಿ ಠೇವಣಿ, 130 ಕೋಟಿ ಸಾಲ, 186 ಕೋಟಿಗೂ ಮಿಕ್ಕಿ ದುಡಿಯುವ ಬಂಡವಾಳ ಹೊಂದಿ ಸ್ಥಾಪನೆಯದ ವರ್ಷದಿಂದ ನಿರಂತರ ಡಿವಿಡೆಂಡ್ ನೀಡುತ್ತಿರುವ ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಕುಂದಾಪುರ ಇದರ 12ನೇ ಶಾಖೆಯು ಕಾರ್ಕಳದಲ್ಲಿ ದಿನಾಂಕ 17.3.2024 ರಂದು ಕಾರ್ಕಳದ ಮಿನಿವಿಧಾನಸೌಧ ರಸ್ತೆ ತಾಲೂಕು ಆಫೀಸ್ ಹತ್ತಿರ, ವಿಶಾಲ ಕಟ್ಟಡದ ನೆಲಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಕಾರ್ಕಳ ಅತ್ತೂರು, ಸಂತ ಲಾರೆನ್ಸ್ ಬಸಿಲಿಕಾ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜರವರು ಉದ್ಘಾಟಿಸಿ ’ರೋಜರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 12ನೇ ಶಾಖೆಯ ಉದ್ಘಾಟನೆಯ ಸಮಾರಂಭಕ್ಕೆ ನಾವು ಸೇರಿಕೊಂಡಿದ್ದೇವೆ ಈ ಶುಭ ಕಾರ್ಯವನ್ನು ದೇವರಿಗೆ ಅರ್ಪಿಸಿ, ಶಾಖೆಯನ್ನು ಲೋಕಾರ್ಪಣೆ ಮಾಡುತ್ತ ಸದಾ ಈ ಶಾಖೆಗೆ ಈ ಬ್ಯಾಂಕಿಗೆ ನಮ್ಮ ಕಾಯಕ ಸಂತ ಲಾರೆನ್ಸ್ ರ ಅನುಗ್ರಹ ಮತ್ತು ಕೃಪೆ ಇರಲಿ ಎಂದು ಈ ಸಂಸ್ಥೆಗೆ ಕೋರುತ್ತಾ, ಈ ಸಂಸ್ಥೆ ಎತ್ತರನೋತ್ತರವಾಗಿ ಬೆಳಗಲಿ ಎಂದು ನಾನು ಹರಸುತ್ತೇನೆ. ಅತ್ಯುನ್ನತ ಕಾರ್ಯಕ್ರಮಗಳು ಈ ಶಾಖೆಯ ಮೂಲಕ ಆಗುತ್ತಾ ಇದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರ, ವ್ಯವಹಾರ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅತ್ಯುನ್ನತ ಪರಿಭಾಷೆ, ಅತ್ಯುನ್ನತ ಅಭಿವೃದ್ಧಿ, ವೈಯಕ್ತಿಕ ಅಭಿವೃದ್ಧಿ, ಕುಟುಂಬದ ಅಭಿವೃದ್ಧಿ, ಪ್ರಾಂತ್ಯ ದೇಶದ ಅಭಿವೃದ್ಧಿ, ಈ ಬ್ಯಾಂಕಿಂಗ್ ಮೂಲಕ ಉದ್ಯಮದ ಮೂಲಕ ಆಗುತ್ತಾ ಇದೆ. ಹಣ ಇದ್ದವರು ಇಲ್ಲದವರಿಗೆ ಕೊಟ್ಟು ಸಹಕಾರ ಮಾಡುವುದು ಅಂದರೆ ಇದ್ದವರು ಡೆಪೋಜಿಟ್ ಮಾಡಿ, ಇಲ್ಲದವರು ಇಲ್ಲಿಂದ ಅದನ್ನು ಸಾಲದ ರೂಪದಲ್ಲಿ ಪಡೆದು ವ್ಯವಹಾರ ನಡೆಸಿ ನೀವು ಅಭಿವ್ರದ್ದಿ ಹೊಂದಬೇಕು. ಈ ಸಂಸ್ಥೆಯು ತವರಿತ ವೇಗದಲ್ಲಿ ದಾಪುಗಾಲು ಹಾಕುತ್ತ ಇದ್ದು, ಇಂದು ಕಾರ್ಕಳದ ಜನತೆಗೆ ಲೋಕಾರ್ಪಣೆ ಮಾಡಿದೆ, ಈ ಸಂಸ್ಥೆಗೆ ಉಜ್ವಲ ಭವಿಷ್ಯವನ್ನು ಕೋರುತ್ತಾ ರೋಜರಿ ಮಾತೆಯ ಕೃಪೆ ಸದಾ ಈ ಸಂಸ್ಥೆಯ ಮೇಲೆ ಇರಲಿ ಎಂದು ಶುಭ ಹಾರೈಸಿದರು.
ಕ್ರೈಸ್ಟ್ ದಿ ಕಿಂಗ್ ಚರ್ಚ್ ಕಾರ್ಕಳದ ವಂದನೀಯ ಕ್ಲೈಮೆಂಟ್ ಮಸ್ಕರೇನ್ಹಸ್ ಇವರು ಶಾಖೆಯನ್ನು ಆಶೀರ್ವದಿಸಿ ’ಧನ ಇರುವುದು, ಅದು ಉಪಯೋಗಕ್ಕಾಗಿ, ಕೂಡಿಸಿಟ್ಟು ಒಳಗಿಟ್ಟರೆ ಅದು ನಡೆಯುವುದಿಲ್ಲ ಚಲಾವಣೆ ಆಗಬೇಕು ಧನವನ್ನು ಹಂಚಿ ಎಲ್ಲರಿಗೂ ಉಪಕಾರ ಆದರೆ ಅದಕ್ಕೆ ಹಣ ಎಂದು ಹೆಸರು ಕೊಡಬಹುದು ಇಲ್ಲದಿದ್ದರೆ ಹಣಕ್ಕೆ ಏನು ಬೆಲೆಯೂ ಇಲ್ಲ ಅದಕ್ಕೆ ಬೆಲೆ ಕೊಡುಬೆಕು, ನೀವು, ಸಮಾಜದ ಪರಿವರ್ತನೆಗಾಗಿ, ಒಳಿತಿಗಾಗಿ ಇದು ಸದಾ ನೀವು ವ್ಯಯಿಸಿ ಅಂತ ಹಾರೈಸಿ ಭಗವಂತನ ಆಶೀರ್ವಾದ ಸದಾ ನಿಮ್ಮೆಲ್ಲರಲ್ಲಿ ಇರಲಿ ಎಲ್ಲರಿಗೂ ಒಳಿತನ್ನು ಕೋರುತ್ತೇನೆ’ ಎಂದು ಶುಭ ಹಾರೈಸಿದರು.
ಶಾಖೆಯ ಭದ್ರತಾ ಕೊಠಡಿಯನ್ನು ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಯುತ ಥಾಮಸ್ ಮಸ್ಕರೇನಸ್ ಉದ್ಘಾಟಿಸಿದರು. ಗಣಕಯಂತ್ರವನ್ನು ಕ್ರೈಸ್ಟ್ ದ ಕಿಂಗ್ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ನೇವಿಲ್ ಡಿಸಿಲ್ವರವರು ಉದ್ಘಾಟಿಸಿ,
ಈ ಪರಿಸರದಲ್ಲಿ ರೋಜರಿ ಸೊಸೈಟಿಯ 12 ನೇಯ ಶಾಖೆಯಾಗಿದೆ ಇದು ನಮಗೆ ಬಹಳ ಹೆಮ್ಮೆಯ ವಿಷಯ ಇದನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ನಾವೆಲ್ಲರೂ ಸೇರಿ ಈ ಸಂಸ್ಥೆಗೆ ಉತ್ತಮ ವ್ಯವಹಾರವನ್ನು ನೀಡಿ ಉನ್ನತ ಮಟ್ಟಕ್ಕೆ ಏರಲು ಕೈ ಜೋಡಿಸೋಣ’ ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಸಂಘದ ಅಧ್ಯಕ್ಷರಾದ ಶ್ರೀಯುತ ಜೋನ್ಸನ್ ಡಿ ‘ ಅಲ್ಮೇಡಾ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀ ಕಿರಣ್ ಮೇಲ್ವಿನ್ ಲೋಬೋ ಅತಿಥಿಗಳನ್ನು ಗೌರವಿಸಿದರು.ಸಂಘದ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಮೇಬಲ್ ಡಿಆಲ್ಮೇಡಾ, ನಿರ್ದೇಶಕರಾದ ಶ್ರೀ ಫಿಲಿಪ್ ಡಿ’ಕೋಸ್ತಾ , ಶ್ರೀ ವಿಲ್ಸನ್ ಡಿ’ ಸೋಜಾ, ಶ್ರೀ ಪ್ರಕಾಶ್ ಲೋಬೋ, ಶ್ರೀ ಒಜ್ಲಿನ್ ರೆಬೆಲ್ಲೊ, ಶ್ರೀ ಟೆರೆನ್ಸ್ ಸುವಾರಿಸ್, ಶ್ರೀ ಮೈಕಲ್ ಪಿಂಟೋ, ಶ್ರೀಮತಿ ಡಯಾನ ಅಲ್ಮೇಡಾ, ಶ್ರೀಮತಿ ಶಾಂತಿ ಡಾಯಸ್ ಉಪಸ್ಥಿತರಿದ್ದರು. ಶಾಖಾ ಸಭಾಪತಿ ಶ್ರೀ ಓಜ್ವಾಲ್ಡ್ ಸಂತೋಷ್ ಡಿ’ಸಿಲ್ವ ವಂದಿಸಿದರು. ಶ್ರೀ ಸ್ಟೀವನ್ ಕುಲಾಸೋ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯ ಸರ್ಜನ್ ಆಗಿ ಡಾ. ಅಶೋಕ್ ಹೆಚ್. ಅಧಿಕಾರ ಸ್ವೀಕಾರ
ಡಾ. ಅಶೋಕ್ ಹೆಚ್. ಎಂ.ಬಿ.ಬಿ.ಎಸ್, ಡಿ.ಪಿ.ಎಚ್ ಇವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಸರ್ಜನ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.ಇವರೊಬ್ಬ ಅನುಭವಿ ವೈದ್ಯರಾಗಿ ಸೇವೆ ಸಲ್ಲಿಸಿದವರು.ಅಲ್ಲದೆ 2012ರ ಅತ್ಯುತ್ತಮ DAPCO ಅಧಿಕಾರಿಯಾಗಿ, 2013ರಲ್ಲಿ ಉಡುಪಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ, 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿ, ಜನ ಮೆಚ್ಚುಗೆ ಪಡೆದವರು.ಉಡುಪಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಜವಾಬ್ದಾರಿ ಸ್ವೀಕರಿಸಿದ ಅಲ್ಪಾವಧಿಯಲ್ಲಿಯೇ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿ, ಆರೋಗ್ಯ ಇಲಾಖೆಯ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಆ ಹುದ್ದೆಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿ ವೈದ್ಯಕೀಯ ಕ್ಷೇತ್ರಕ್ಕೆ ಗೌರವ ತಂದಿರುವ ಅಶೋಕ್ ರವರು ವಿಶೇಷ ಅನುಭವ ಹೊಂದಿದ್ದು ಇದೀಗ ಉಡುಪಿ ಜಿಲ್ಲಾ ಸರ್ಜನ್ ಆಗಿ ನೇಮಕಗೊಂಡ ಡಾ. ಎಚ್. ಅಶೋಕ್ ಅವರನ್ನು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಲಯನ್ಸ್ ಉಡುಪಿ ಚೇತನಾ ಇದರ ಪದಾಧಿಕಾರಿಗಳು ಭೇಟಿಯಾಗಿ ಶುಭಕೋರಿದರು.
ಈ ಸಂದರ್ಭದಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಮಣಿಪಾಲ್, ಕಾರ್ಯದರ್ಶಿ ದಿನೇಶ್ ಹೆಗ್ಡೆ ಆತ್ರಾಡಿ, ಡಾ. ಬಳ್ಕೂರು ಗೋಪಾಲ ಆಚಾರ್ಯ, ರತ್ನಾಕರ್ ಶೆಟ್ಟಿ ಮಾಜಿ ಅಧ್ಯಕ್ಷರು ಆತ್ರಾಡಿ ಗ್ರಾಮ ಪಂಚಾಯತ್. ಲಯನ್ಸ್ ಪುಷ್ಪಾರಾಜ್ ಆಚಾರ್ಯ, ಲಯನ್ಸ್ ಅಭಿಜಿತ್ ಸುವರ್ಣ, ಅಶೋಕ್ ಕುಮಾರ್ , ಪಚ್ವಿ ಮಣಿಪಾಲ್ ಉಪಸ್ಥಿತರಿದ್ದರು.