‘Eureka’ – talent show by students of St Agnes PU College

Mangalore : Cultural activities that enhance quest for knowledge and understanding play a crucial role in enriching students’ lives, such activities foster personal growth and promote deeper insight to the happening around us.

St Agnes PU College known for its value based education organized ‘EUREKA’– A torrent of talents for students of II PUC on 18 July, 2023. The students showcased their innate talents through the following competitions.

Science drama: SC  – Enact – Dramatic performance- to ignite the spark within the budding scientists

Sale-add: Pitch Perfect – Effective and persuasive advertisements- to promote products

Street plays – Alleyway theatre – awareness on social issues- to convey message on promoting social transformation.

The students enjoyed all the activities as talent combined the art of theatre with wonders of science, digital marketing and social issues, allowing performers to entertain and educate in a unique and engaging way.

‘EUREKA’ – 2K23 was inaugurated by Sr Norine DSouza the Principal, Sr Janet Sequeira the Vice- Principal and Mrs Joanne Sheethal the Convenor. Inauguration idea was indeed innovative and colourful. The programme began with a prayer song and welcome dance. Students participated enthusiastically in the games conducted by the Lecturers.

Sr Norine DSouza the Principal in her address urged students to believe in themselves and to make use of every EUREKA moment of their life to emerge as winners.

II BEBA/BSBA Batch emerged as Champions of ‘EUREKA’– 2k23, and II PCMB ‘A’ and PCMB ‘B’ Batches were the Runners-up.

The amalgamation of the Science, Commerce and Arts streams was successful in celebrating the diverse talents of the students and fostered meaningful connections. The programme was compered by Ms Alisha Thimmaiah & Ms Ayesha Amani proposed the vote of thanks. It was indeed a EUREKA moment to all the future Scientists and Entrepreneurs of SAPUC. 

ಕುಂದಾಪುರ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಉಪ್ಪುಂದ ದ ವತಿಯಿಂದ ವ್ಯಕ್ತಿತ್ವ ವಿಕಸನ ತರಬೇತಿ

ಕುಂದಾಪುರ: ‘ವೃತ್ತಿಪರ ವಿದ್ಯೆಯಲ್ಲಿ ಪರಿಣತಿಯನ್ನು ಪಡೆದು ತನ್ನ ಬೆಳವಣಿಗೆಯ ಮೂಲಕ ಇತರರ ಯಶಸ್ಸಿಗೂ ಸಹಕಾರಿಯಾಗಬೇಕು‌. ಈ ರೀತಿಯಲ್ಲಿ ವಿದ್ಯಾರ್ಥಿಗಳು ಎಳೆ ಪ್ರಾಯದಿಂದಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ‘ ಎಂದು ಜೆ.ಸಿ. ಐ ಉಪ್ಪುಂದ ಇದರ ವತಿಯಿಂದ ಕುಂದಾಪುರದ ಆರ್‌. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಜೆ.ಸಿ ವಲಯ XV ರ ತರಬೇತುದಾರರಾದ ಡಾ. ಜಗದೀಶ್ ಜೋಗಿ ಇವರು ಕರೆ ನೀಡಿದರು. ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಯುವ ವಿದ್ಯಾರ್ಥಿಗಳಲ್ಲಿ ವೈಚಾರಿಕ ಬೆಳವಣಿಗೆಯನ್ನು ತರುವ ಸದುದ್ದೇಶ ಹೊಂದಿರುವ ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದು ತಮ್ಮ ಉದ್ಘಾಟನಾ ನುಡಿಯಲ್ಲಿ ತಿಳಿಸಿದರು. ಜೆ.ಜೆ.ಸಿ ಘಟಕದ ಅಧ್ಯಕ್ಷೆಯಾದ ನಿಶಾ ಸಂತೋಷ್ ಶೆಟ್ಟಿ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜೆ.ಸಿ.ಐ ಉಪ್ಪುಂದ ಘಟಕದ ಅಧ್ಯಕ್ಷರಾದ ಜೆಎಫ್ ಪಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಜೆ.ಸಿ.ಐ ಉಪ್ಪುಂದ ಇದರ ಪೂರ್ವಾಧ್ಯಕ್ಷರಾದ ಶ್ರೀ ಮಂಗೇಶ್ ಶಾನುಭಾಗ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ನಾಗರಾಜ ಪೂಜಾರಿ‌ ಹಾಗೂ ಕುಂದಾಪುರ ಜೆ.ಸಿ ಯ ಕಾರ್ಯದರ್ಶಿ ಶ್ರಿ ರಾಕೇಶ್ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಜ್ಯೂನಿಯರ್ ಜೆ.ಸಿ ಸದಸ್ಯೆ ಅಸ್ಮಿತಾ ಇವರು ಸಂಪನ್ಮೂಲ ವ್ಯಕ್ತಿಯ ಪರಿಚಯ ನೀಡಿದರು. ಜ್ಯೂನಿಯರ್ ಜೆ.ಸಿ ಸದಸ್ಯ ಸುಮಿತ್ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. 

ಜಿಲ್ಲಾಧಿಕಾರಿ ಅಕ್ರಂಪಾಷಾ ಅಧ್ಯಕ್ಷತೆಯಲ್ಲಿ ಕೋಲಾರ ಜಿಲ್ಲಾ ಕೌಶಲ್ಯ ಸಮಿತಿ ಸಭೆಕೌಶಲ್ಯ ತರಬೇತಿ;ಮಾನವ ಸಂಪನ್ಮೂಲ ಅಭಿವೃದ್ದಿಗೆ ಶ್ರಮಿಸುವಂತೆ ಕರೆ

ಕೋಲಾರ:- ಜಿಲ್ಲೆಯ ಕೌಶಲ್ಯ ಅಭಿವೃಧ್ಧಿ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಕೌಶಲ್ಯ ಚಟುವಟಿಕೆಗಳ ಸಮನ್ವಯತೆ ಅಗತ್ಯವಾಗಿದ್ದು, ಹೆಚ್ಚಿನ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ಅವಕಾಶ ಕಲ್ಪಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ತರಬೇತಿ ಕೇಂದ್ರದವರು ಜಿಲ್ಲೆಗೆ ಅಗತ್ಯವಾದ ಗುಣಮಟ್ಟದ ತರಬೇತಿ ಆಯೋಜಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ವತಿಯಿಂದ ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ತರಬೇತಿ ಆಯೋಜಿಸುವಂತೆ ಸೂಚಿಸಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಆರ್‍ಸೆಟಿ ನಿರ್ದೇಶಕರಿಗೆ ಹೊನ್ನೇನಹಳ್ಳಿ ತರಬೇತಿ ಕೇಂದ್ರದ ಸಾಮಥ್ರ್ಯ ಹೆಚ್ಚಿಸುವಂತೆ ಸೂಚಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆ ಕುರಿತು ಎಲ್ಲಾ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಶೇ. 100 ರ ಸಾಧನೆ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.ಎರಡು ಗಂಟೆಗಳಿಗೂ ಹೆಚ್ಚಿನ ಸುಧೀರ್ಘ ಕಾಲವಧಿಯ ಸಭೆಯಲ್ಲಿ ಜಿಲ್ಲೆಯ ಸಮಗ್ರ ಕೌಶಲ್ಯ ಅಭಿವೃದ್ಧಿಗೆ ಭಾಗವಹಿಸಿದ ಎಲ್ಲಾ ಅಧಿಕಾರಿಗಳ ಸಲಹೆಯನ್ನು ಪಡೆದುಕೊಂಡರು.

ಕೌಶಲ್ಯ ಕೊರತೆಯ ನೀಗಿಸಲು ಕ್ರಮ

ಸಮಿತಿಯ ಸದಸ್ಯ ಕಾರ್ಯದರ್ಶಿಯಾದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್, ಜಿಲ್ಲೆ ಕೌಶಲ್ಯ ಸಮಿತಿಯ ಪ್ರಮುಖ ಕಾರ್ಯಗಳು, ಸಿಎಂಕೆಕೆವೈ ಹಾಗೂ ಪಿಎಂಕೆವಿವೈ ಯೋಜನೆಗಳ ಪ್ರಗತಿ, ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕೌಶಲ್ಯ ಕೊರತೆ ನಿವಾರಿಸಲು ಆಯೋಜಿಸಬಹುದಾದ ತರಬೇತಿಗಳು, ಜಿಲ್ಲೆಯ ಕೈಗಾರಿಕಾ ತರಬೇತಿ ಸಂಸ್ಥೆಗಳು, ಜಿಟಿಟಿಸಿ ತರಬೇತಿ ಸಂಸ್ಥೆಯ ವಿವಿಧ ಚಟುವಟಿಕೆಗಳ ಕುರಿತು ಸಭೆಯಲ್ಲಿ ವಿವರಿಸಿದರು.
ಜಿಲ್ಲೆಯ ಕೌಶಲ್ಯ ಇಲಾಖೆ ಮೂಲಕ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿರುವವರಿಗೆ ಹಾಗೂ ಮ್ಯಾನುಯಲ್ ಸ್ಕಾವೇಂಜರ್‍ಗಲವರಿಗೆ ಆಯೋಜಿಸಲಾಗುವ ತರಬೇತಿ ಕುರಿತು ಹಾಗೂ ಕಲಿಕೆ ಜೊತೆ ಕೌಶಲ್ಯ ಯೋಜನೆಯ ಕುರಿತು ಸಭೆಗೆ ವಿವರಿಸಿದರು.
ನಂತರ ಜಿಲ್ಲಾ ಕೌಶಲ್ಯ ಉಪಸಮಿತಿಗಳಾದ ಅಭ್ಯರ್ಥಿಗಳ ಕ್ರೂಢೀಕರಣ ಮತ್ತು ಸಮಾಲೋಚನೆ ಉಪಸಮಿತಿ, ತರಬೇತಿ ಗುಣಮಟ್ಟ ಉಪಸಮಿತಿ, ಕೈಗಾರಿಕೆಗಳ ಇಂಟರ್‍ಫೇಸ್ ಉಪಸಮಿತಿ, ಸ್ವಯಂ ಉದ್ಯೋಗ ಉಪಸಮಿತಿ, ಗ್ರಾಮ ಪಂಚಾಯಿತಿ ಸಮನ್ವಯ ಉಪಸಮಿತಿ, ಕೃಷಿ ಉಪಸಮಿತಿ, ಸಾಮಥ್ಯ ಅಭಿವೃದ್ಧಿ ಉಪಸಮಿತಿ, ಎಂಐಎಸ್ ಮೇಲ್ವಿಚಾರಣೆ ಉಪಸಮಿತಿ, ವರದಿಗಳನ್ನು ಮಂಡಿಸಲಾಯಿತು. ಇಲಾಖೆಯ ನೂತನ ಯೋಜನೆಗಳಾದ ಅಂತರಾಷ್ಟ್ರೀಯ ವಲಸೆ ಕೇಂದ್ರ, ಕರ್ನಾಟಕ , ಸ್ಕಿಲ್ ಕನೆಕ್ಟ್ ಪೋರ್ಟ್‍ಲ್ ಹಾಗೂ ಇಂಡಸ್ಟ್ರೀ ಲಿಂಕೇಜ್ ಸೆಲ್ ಬಗ್ಗೆ ಕೌಶಲ್ಯ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ದೀನ್ ದಯಾಳ್ ಅಂತ್ಯೋದಯ ಯೋಜನೆಯ ಕುರಿತು ಅಭಿಯಾನ ವ್ಯವಸ್ಥಾಪಕ ಗೋವಿಂದ ಮೂರ್ತಿ ಸಭೆಗೆ ವಿವರಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಾಮಚಂದ್ರಪ್ಪರವರು ಮುಂದಿನ ದಿನಗಳಲ್ಲಿ ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಹಾಗೂ ಸಮಾಲೋಚನೆ ಶಿಬಿರ ಏರ್ಪಡಿಸುವುದಾಗಿ ತಿಳಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಭವ್ಯ ರಾಣಿರವರು ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗುವ ತರಬೇತಿಗಳನ್ನು ವಿವರಿಸಿದರು. ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಶಬಾನ ರವರು ಅಪ್ರೆಂಟ್‍ಶಿಪ್ ತರಬೇತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್‍ರವರು ಜವಳಿ ಇಲಾಖೆಯಲ್ಲಿ ಕೈಗೊಳ್ಳಲಾಗುವ ತರಬೇತಿಗಳ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್‍ನ ಯೋಜನಾಧಿಕಾರಿ ಗೋವಿಂದ ಗೌಡ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸುವ ಕೌಶಲ್ಯ ತರಬೇತಿ ಯೋಜನೆಗಳು ಹಾಗೂ ಪ್ರಚಾರ ಕಾರ್ಯಗಳ ಬಗ್ಗೆ ವಿವರಿಸಿದರು. ಉದ್ಯೋಗ ಇಲಾಖೆ ಅಧಿಕಾರಿಯವರಿಗೆ ಉದ್ಯೋಗ ಮೇಳ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿದರು. ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಯಾದ ಸೋನಿಯಾ ವೆಣೇಕರ್‍ರವರಿಗೆ ಹಾಸ್ಟಲ್ ವಿದ್ಯಾರ್ಥಿಗಳಿಗೆ ನೀಡಲಾಗುವ ತರಬೇತಿ ಕಾರ್ಯಕ್ರಮದ ಮುಂದಾಳತ್ವ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಪಾಲ್ಗೋಂಡಿದ್ದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ದೀನ್ ದಯಾಳ್ ಅಂತ್ಯೋದಯ ಯೋಜನೆಯ ಯಶಸ್ಸಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಪಿಯು ಡಿಡಿ ರಾಮಚಂದ್ರಪ್ಪ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಮಹದೇವ್, ಬಂಗಾರಪೇಟೆ ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಬಿಸಿಎಂ ಅಧಿಕಾರಿ ಸೋನಿಯಾ ವರ್ಣೇಕರ್, ಅಧಿಕಾರಿಗಳಾದ ಆರ್.ರವಿಚಂದ್ರ, ಹೆಚ್.ಶ್ರೀನಿವಾಸ್, ಡಿಐಸಿ ಡಿಸಿ ವಿ.ಶ್ರೀನಿವಾಸರೆಡ್ಡಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ, ಬಂಗಾರಪೇಟೆ ಸಿಎಂಸಿ ಉಮಾ, ಆಹಾರ ಇಲಾಕೆಯ ಪ್ರಕಾಶ್, ಜಿಪಂ ಸಹಾಯಕ ಯೋಜನಾಧಿಕಾರಿ ಗೋವಿಂದಗೌಡ, ಐಟಿಐನ ಆರ್ಮುಗಂ, ಹೆಚ್‍ಆರ್‍ಡಿಸಿ ನಾರಾಯಣಸ್ವಾಮಿ ಮತ್ತಿತರರಿದ್ದರು.

ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ವಹಿವಾಟು ಜೋರು 15 ಕೆಜಿ ಟೊಮೆಟೊ ಬಾಕ್ಸಿಗೆ ರೂ.1800 ರಿಂದ ರೂ.2000

ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮೆಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೆಟೊ ಬಾಕ್ಸೊಂದು ರೂ.1800 ರಿಂದ ರೂ.2000 ದವರೆಗೆ ಮಾರಾಟವಾಯಿತು.
ಮಾರುಕಟ್ಟೆಗೆ ಟೊಮೆಟೊ ತಂದಿದ್ದ ರೈತರು ಬೆಲೆಯಿಂದ ಹರ್ಷಚಿತ್ತರಾಗಿದ್ದರು. ಆದರೆ ಮುದುಡು ರೋಗದಿಂದ ಇಳುವರಿ ಕುಸಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
‘1 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಪ್ರಾರಂಭದಲ್ಲಿ 60 ಬಾಕ್ಸ್ ಸಿಕ್ಕಿದೆ. ಒಳ್ಳೆ ಬೆಲೆ ಬಂದಿದೆ. ತೋಟ ರೋಗಪೀಡತವಾಗದೆ ಇದ್ದಲ್ಲಿ, ಈ ಹಿಂದೆ ಬೆಲೆ ಕುಸಿತದಿಂದ ಕಳೆದುಕೊಂಡಿದ್ದ ಬಂಡವಾಳ ವಾಪಸ್ ಬರುತ್ತಿತ್ತು. ಸಧ್ಯ ಇಷ್ಟಾದರೂ ಸಿಗುತ್ತಿದೆ. ಅದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು’ ಎಂದು ಕೂಳಗುರ್ಕಿ ಗ್ರಾಮದ ಟೊಮೆಟೊ ಬೆಳೆಗಾರ ರಾಮಾಂಜಿಲಪ್ಪ ಹೇಳಿದರು.
‘ಗಿಡಕ್ಕೆ ಮುದುಡು ರೋಗ ಬಂದ ಪರಿಣಾಮವಾಗಿ ಮಾರುಕಟ್ಟೆಗೆ ಸಾಕಷ್ಟು ಟೊಮೆಟೊ ಬರುತ್ತಿಲ್ಲ. ತಾಲ್ಲೂಕಿನ ಉತ್ತರ ಭಾಗದ ರೈತರು ತಾವು ಬೆಳೆದ ಟೊಮೆಟೊ ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಹಾಗಾಗಿ ಕಡಿಮೆ ಸಂಖ್ಯೆಯ ಬಾಕ್ಸ್‍ಗಳು ಬರುತ್ತಿವೆ. ಆದರೂ ಬೆಲೆ ಬಂದಿರುವುದರಿಂದ ರೈತರು ಬಚಾವಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬೆಲೆ ಇನ್ನಷ್ಟು ಹೆಚ್ಚುವ ಸಂಭವಿ ಇದೆ’ ಮಂಡಿ ಮಾಲೀಕ ಕೆ.ಸಿ.ವರದರಾಜು ಪ್ರಜಾವಾಣಿಗೆ ತಿಳಿಸಿದರು.

ಶ್ರೀನಿವಾಸಪುರ:ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಿ – ವೈ.ಎನ್.ಸತ್ಯನಾರಾಯಣ

ಶ್ರೀನಿವಾಸಪುರ: ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಜಾನುವಾರುಗಳ ಪಾಲಿಗೆ ಯಮಪಾಷವಾಗಿದೆ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಕವರ್‍ಗೆ ಬದಲಾಗಿ ಬಟ್ಟೆ ಚೀಲ ಬಳಸಬೇಕು. ಮಾಂಸ, ಮೀನು ಖರೀದಿಸಿ ಕೊಂಡೊಯ್ಯಲು ಸ್ಟೀಲ್ ಕ್ಯಾರಿಯರ್ ಬಳಸುವುದು ಕ್ಷೇಮಕರ. ಪ್ಲಾಸ್ಟಿಕ್ ವಸ್ತು ಸುಡುವುದರಿಂದ ಪರಿಸರ ಕೆಡುತ್ತದೆ. ವಾಯು ಮಾಲಿನ್ಯ ಹೆಚ್ಚಿ ಉಸಿರಾಟದ ತೊಂದರೆ ಮತ್ತಿತರ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಜನರು ಪ್ಲಾಸ್ಟಿಕ್ ಬಳಕೆ ವಿಷಯದಲ್ಲಿ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವರ್ತಕರ ಸಂಘದ ಅಧ್ಯಕ್ಷ ಕೆ.ವಿ.ಸೂರ್ಯನಾರಾಯಣಶೆಟ್ಟಿ ಮಾತನಾಡಿ, ಪುರಸಭೆ ಏನೆಲ್ಲ ಕ್ರಮ ಕೈಗೊಂಡರೂ, ಪ್ಲಾಸ್ಟಿಕ್ ವಸ್ತು ಮಾರಾಟ ಹಾಗೂ ಬಳಕೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಷೇಧಿತ ಪ್ಲಾಸ್ಟಿಕ್ ವಸ್ತುಳ ತಯಾರಿಕೆ ನಿಲ್ಲಿಸಲು ಸರ್ಕಾರ ಕೈಗೊಳ್ಳಬೇಕು. ಮೂಲದಲ್ಲಿಯೇ ತಡೆಯುವುದರಿಂದ ಬಳಕೆ ಸಂಪೂರ್ಣ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ಸುರೇಶ್, ಸಂತೋಷ್ ಇದ್ದರು.

ಕುಂದಾಪುರ ಭಾ.ರೆಡ್ ಕ್ರಾಸ್ ಸಂಸ್ಥೆಯಿಂದ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಟ್ಟಿ ಉದ್ಘಾಟನೆ

ಕುಂದಾಪುರ: ಜು.೧೯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ಮತ್ತು ಸರಕಾರಿ ಜೂನಿಯರ್‌ ಕಾಲೇಜು ಕುಂದಾಪುರ ಇವರ ಸಹಯೋಗದೊಂದಿಗೆ ಜೂನಿಯರ್ ರೆಡ್ ಕ್ರಾಸ್ ಘಟಕ ವನ್ನು ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಉದ್ಘಾಟಿಸಿದರು ಮತ್ತು ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕರಾದ ದಿನಕರ ಅರ್ ಶೆಟ್ಟಿ ಇವರು ಪ್ರತಿಜ್ಞೆಯನ್ನು ಭೋದಿಸಿದರು. ಪ್ರಭಾರ ಪ್ರಾಂಶುಪಾಲರಾದ ಭುಜಂಗ ಶೆಟ್ಟಿ ಅದ್ಯಕ್ಷೀಯ ಭಾಷಣ ಮಾಡಿದರು. ಸಭಾಪತಿ ಜಯಕರ ಶೆಟ್ಟಿ ಇವರು ಪ್ರಾಂಶುಪಾಲರಿಗೆ ಫಸ್ಟ್‌ ಎಐ್ಡ ಕಿಟ್ ಹಸ್ತಾಂತರಿಸಿದರು ಮತ್ತು ಜೂನಿಯರ್ ರೆಡ್ ಕ್ರಾಸ್ ಅದ್ಯಕ್ಷ ಮತ್ತು ಕಾರ್ಯದರ್ಶಿ ಗೆ ಪಿನ್ ತೊಡಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಅಧ್ಯಾಪಕರಾದ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಸಂಚಾಲಕರಾದ ಶಂಕರ್ ನಾಯ್ಕ್ ವಂದಿಸಿದರು.

‘Yuva Saha Milan’ A Day with the Youth in Kulur.

Indian Catholic Youth Movement of Kulur Parish organized a Youth get-together on 16th July 2023 at Kulur Church mini hall. The programme was inaugurated by Rev. Fr Victor Vijay Lobo, Parish Priest of Kulur Church. Fr Ashwin Lohith Cardoza, Director of ICYM Mangalore Diocese Central Council, Wilma Viyola Lobo, General Secretary Of Mangalore Diocese Central Council, Arun Roshan Dsouza, vice president of Parish Council, Sunitha Victoria D Souza, secretary of Parish Council, Dr. Vinay Rajath Dsouza, Convener, Parish Pastoral commissions, Claver Dsouza, ICYM Kulur unit Animator, Praneeth Monteiro, ICYM Kulur unit President, Suzannha Ferrao, ICYM Kulur unit Secretary were present on the dais.

In her message, Ms Wilma Viyola Lobo, General Secretary of ICYM Central Council motivated the youth to participate actively in the events. She also shared how ICYM has helped her in her personal development.

In his Presidential address, the Parish Priest of St Antony Church Kulur, Fr Victor Vijay Lobo appreciated all those who came to participate in the programme. Today’s Youth is full of energy ad innovative ideas. Church wants to listen to the youth of today and invited the youth to share their opinions on social and church matters. He motivated and invited the youth to take an active part in all the upcoming events.

President Praneeth Monteiro welcomed, and Vice President Sneha D’Mello proposed a vote of thanks. Secretary, Suzannha Ferrao compered the Inaugural programme.

After the Inaugural programme, the resource person of the day, Rev. Fr Ashwin Lohith Cardoza took over the workshop. He made the participants feel at home through the action songs and Ice Breaking sessions. 

The participants were divided into Six groups. Each group had to pick a name/slogan, and the first activity that was given to them was to prepare an action song based on the name/slogan taken.

As part of the session, a youth Cafe was conducted. Each group was given a case related to the youth of the society and each group had to come forward and put forth their opinions.

Later on, a few activities were given to the groups to show them how strong the youth is if we come together. The message that all the youth received from these activities was that with teamwork, right planning and execution, and unity we can achieve the goals that we intend to.

Mr Wayne Lansten D’Silva CEO of Wayne’s business services young entrepreneur shared his experience on how his deep faith in God changed his life which led him to achieve his goals.

He also inspired the youth to think and to decide where they would like to see themselves in 5 years and motivated them to take on entrepreneurship.

The participants were invited to shared their experience about the program. Nishel Dsouza said that she enjoyed the program and she could actively participate in all the activities. ‘I was hesitant to come for the programme but once I came, I enjoyed a lot. If had I not come, I would have missed a lot’ she said. The other participant, Clevita Dsouza said that she could take leadership in all the activities and made sure that her group performed well.

Reeshal Dsouza appreciate the modality used for the programme. She said, because of group activities, I could participate well. If it was individual activities, I would have hesitated to take part in the activities. Viya Sequeira said that she came to know a lot of new people due to this program.

In the end, the Parish Priest thanked Fr Ashwin Cardoza for such an amazing session.

ಮರವಂತೆ ಬೀಚ್ : ಸಮುದ್ರ ಪಾಲಾದ ಯುವಕನ ಶವ ಪತ್ತೆ


ಕುಂದಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ತ್ರಾಸಿ ಮರವಂತೆ ಬೀಚ್‌ನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಸಮುದ್ರ ಪಾಲಾದ ಯುವಕನ ಶವ ಬುಧವಾರ ಬೆಳಿಗ್ಗೆ ಕಂಡು ಬಂದಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕು ಮೇವಂಡಿ ಗ್ರಾಮದ 23 ವರ್ಷ ಪ್ರಾಯದ ಪೀರ್ ನದಾಫ್ ಮೃತ ಯುವಕ. ಮೃತ ದೇಹವು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆ ಬಳಿ ಪತ್ತೆಯಾಗಿದೆ.
ನದಾಫ್ ಕಳೆದ ನಾಲ್ಕು ವರ್ಷಗಳಿಂದ ಊರಿನ ತನ್ನ ಸ್ನೇಹಿತರ ಜತೆ ಪಡುಬಿದ್ರಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ನದಾಫ್ ಸಹಿತ ಮೂವರು ಸ್ನೇಹಿತರು ಟ್ಯಾ0ಕರ್ ಒಂದರಲ್ಲಿ ಊರಿಗೆ ಹೊರಟಿದ್ದರು.ಮರವಂತೆ ಬೀಚ್‌ಗೆ ಬಳಿ ಬಂದಾಗ ಸೆಲ್ಫಿ ತೆಗೆಯುವ ಹುಚ್ಚಿನಿಂದ ಸಮುದ್ರಕ್ಕಿಳಿದಿದ್ದ ವೇಳೆ ನದಾಫ್ ಸಮುದ್ರ ಪಾಲಾಗಿದ್ದ ಸ್ಥಳೀಯರು ಈಜುಗಾರ ಜತೆ ಸೇರಿ ಅವನ ಪತ್ತೆಗೆ ಸಾಕಷ್ಟು ಶ್ರಮಿಸಿದರೂ ಪ್ರತಿ ಕೂಲ ಹವಾಮಾನದಿಂದಾಗಿ ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಿಗ್ಗೆ ಅಂಬಿಕಾ ಖಾರ್ವಿ ಮಹಿಳೆ ಮನೆಯ ಬಳಿ ಸಮುದ್ರದ ಹತ್ತಿರ ಹೋಗುತ್ತಿರುವಾಗ ಸಮುದ್ರದಲ್ಲಿ ತೇಲಾಡುತ್ತಿರುವ ಮೃತ ದೇಹ ನೋಡಿ ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಈಜು ತಜ್ಞ ದಿನೇಶ್ ಖಾರ್ವಿ ತಂಡ, ಆಂಬ್ಯುಲೆನ್ಸ್ ಡ್ರೈವರ್ ಮೃತ ದೇಹವನ್ನು ನೀರಿನಿಂದ
ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಕುಂದಾಪುರ ಸರಕಾರಿ ತಾಲೂಕು ಆಸ್ಪತ್ರೆಗೆ ರವನಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ ನಿಧನ (78)


ಕುಂದಾಪುರ, ಜು.19: ಕುಂದಾಪುರದ ಹಿರಿಯ ಛಾಯಚಿತ್ರಕಾರ ಭಾರತ್ ಸ್ಟುಡೀಯೊ ಮಾಲೀಕ ರೊಬರ್ಟ್ ಡಿಸೋಜಾ (78) ಅಲ್ಪ ಕಾಲದ ಅಸ್ವಸ್ಥೆಯಿಂದ ಇಂದು ಜು.19 ರಂದು ಸ್ವಗ್ರಹದಲ್ಲಿ ನಿಧನದಾರು. ಇವರು ಕುಂದಾಪುರ ತಾಲೂಕಿನ ಛಾಯಚಿತ್ರಕಾರ ಸಂಘದ ಗೌರವ ಅಧ್ಯಕ್ಷರಾಗಿದ್ದರು. ಇವರು ಪತ್ನಿ ಡೆಲ್ಫಿನ್, ಮೂವರು ಪುತ್ರರರಾದ ವೆಸ್ಲಿ, ವೆನಿಲ್ (ಧರ್ಮಗುರುಗಳು) ವೆಲ್ಚನ್ ಸೊಸೆಯಂದಿರಾದ ಡೋರಿನ್, ರೊಸಿ, ಮೊಮ್ಮಕ್ಕಳಾದ ಡೆರ್ವಿನ್,ಇಲಾಯ್ನೆ ಮತ್ತು ಅವೌರರಾ ಇವರನ್ನು ಮತ್ತು ಬಂಧುಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ನಾಳೆ ೪ ಗಂಟೆಗೆ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ನಡೆಯಲಿದೆ