ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರ

25-4-22 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರವನ್ನು ಆಯೋಜಿಸಿದರು. ಇದರ ಉದ್ಘಾಟನೆ ಯನ್ನು ಸಂತ ನಿರಂಕಾರಿ ಸಂಸ್ಥೆಯ ಆನಂದ್ ಚಾಬ್ರಿಯ ಮತ್ತು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಜಂಟಿಯಾಗಿ ಮಾಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸತ್ಯನಾರಾಯಣ ಪುರಾಣಿಕ ಹಾಗೂ ಸಂತ ನಿರಂಕಾರಿ ಸಂಸ್ಥೆಯ ರಾಮ ಪೂಜಾರಿ, ರಾಮ ಮೊಗವೀರ, ಲಕ್ಷ್ಮಣ ಪೂಜಾರಿ, ನಿರಂಜನ ಪೈ, ಚಂದ್ರ ಚಂದನ್, ದಾಮೋದರ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು. ಒಟ್ಟು116 ಯುನಿಟ್ ರಕ್ತ ಸಂಗ್ರಹಿಸಲಾಯಿತು.

ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ :ಅಹಮದ್ ಪಾಷಾ ಬೀದರ್ ನಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಂಡರು


ದಿನಾಂಕ 05.01.2023 ರಂದು ಹೊಸಂಗಡಿಯ ರಸ್ತೆಯಲ್ಲಿ ನಿರ್ಗತಿಕನಾಗಿ,ಕಳಪೆಯಾದ ಸ್ವಚ್ಛತೆ ಮತ್ತು ಖಿನ್ನತೆಗೆ ಒಳಗಾಗಿ
ಅಲೆದಾಡುತ್ತಿದ್ದ ಸುಮಾರು 39 ವರ್ಷ ಪ್ರಾಯದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಇಬ್ರಾಹಿಂ ಅವರು ರಕ್ಷಿಸಿ ಮಂಜೇಶ್ವರದ
ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಆರೈಕೆ ಮತ್ತು ಚಿಕಿತ್ಸೆಗಾಗಿ ದಾಖಲಿಸಿದರು.
ಪ್ರಾಥಮಿಕ ಆರೈಕೆಯ ನಂತರ ಅವರಿಗೆ ಮನೋವೈದ್ಯಕೀಯ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಅವರು ತನ್ನನ್ನು
ಅಹ್ಮದ್ ಬಾಷಾ ಎಂಬುದಾಗಿ ತಿಳಿಸಿದರು . ಮನೋರೋಗ ತಜ್ಞರು ಮತ್ತು ಮನೋವೈದ್ಯಕೀಯ ಸಮಾಜ ಸೇವಕರ
ಮಾರ್ಗದರ್ಶನದಲ್ಲಿ ಅವರಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಯಿತು.
ನಿಧಾನವಾಗಿ ಅವರು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಂಡರು ಮತ್ತು ಅವರ ಸ್ಥಳೀಯ ವಿವರಗಳನ್ನು ಹಂಚಿಕೊಂಡರು. ಈ
ವಿವರಗಳ ಆಧಾರದ ಮೇಲೆ ಸ್ನೇಹಾಲಯ ತಂಡ ಸ್ಥಳೀಯ ಪೊಲೀಸ್ ಠಾಣೆ ಮತ್ತು ಪಂಚಾಯತ್ ನ್ನು ಸಂಪರ್ಕಿಸಿತು . ಇದರಂತೆ
ಕರ್ನಾಟಕದ ಬೀದರ್‌ನ ಅಮಲಾಪುರದ ಟಿಪ್ಪು ಸುಲ್ತಾನ್ ಕಾಲೋನಿಯಲ್ಲಿನ ಅವರ ಕುಟುಂಬವನ್ನು ಪತ್ತೆಹಚ್ಚುವಲ್ಲಿ ತಂಡ
ಯಶಸ್ವಿಯಾಯಿತು .ಸ್ನೇಹಾಲಯ ತಂಡವು ಅವರ ಕಿರಿಯ ಸಹೋದರ ಮೊಹಮ್ಮದ್ ಮುಕ್ತಾರ್ ಅವರನ್ನು ಸಂಪರ್ಕಿಸಿತು. ಇಂದು
ದಿನಾಂಕ 24.04.2023 ರಂದು ಅವರು ಮತ್ತು ದಲಿತ ಮತ್ತು ಮೈನಾರಿಟಿಸ್ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ
ಮಹಮ್ಮದ್ ಸಲೀಂ ತಮ್ಮ ನಾಯಕರಾದ ಶ್ರೀ ಮೊಹಮ್ಮದ್ ಸಲೀಮ್ ಅವರೊಂದಿಗೆ ಸ್ನೇಹಾಲಯವನ್ನು ತಲುಪಿದರು. ಸುಮಾರು
8 ತಿಂಗಳ ಹಿಂದೆ ಕಾಣೆಯಾದ ಅಹ್ಮದ್ ಪಾಷಾ ಅವರನ್ನು ಮತ್ತೆ ಭೇಟಿ ಮಾಡಿ ಸಂತೋಷಪಟ್ಟರು.
ಅಹ್ಮದ್ ಪಾಷಾ ಟ್ರಾವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಮ್ಮೆ ಅಪಘಾತಕ್ಕೀಡಾದರು ಮತ್ತು ತಲೆಗೆ ಆದ ಏಟಿಗೆ ಚಿಕಿತ್ಸೆ
ಪಡೆದರು ಎಂದು ಅವರು ತಿಳಿಸಿದರು . ತದನಂತರ ಅವರು ಮಾನಸಿಕ ಅಸ್ವಸ್ಥತೆಯನ್ನು ಹೊಂದಿದ್ದು ಚಿಕಿತ್ಸೆ ಪಡೆಯುತ್ತಿದ್ದು
ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದಾಗಿ ಹಾಗೂ ಅವರೆಲ್ಲರು ಆತನಿಗಾಗಿ ಹುಡುಕಾಟ ನಡೆಸಿದ್ದಾಗಿ ತಿಳಿಸಿದರು .ಅಹ್ಮದ್
ಪಾಷಾರನ್ನು ಮತ್ತೆ ಭೇಟಿ ಮಾಡಿ ತಮ್ಮ ಊರಿಗೆ ಕರೆದೊಯ್ಯಲು ಸಂತೋಷಪಟ್ಟರು. ಅವರು ಸ್ನೇಹಾಲಯದ ಸೇವೆಯನ್ನು
ಶ್ಲಾಘಿಸಿದರು ಮತ್ತು ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಿದ ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ
ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಶ್ರೀನಿವಾಸಪುರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸೋಮವಾರ ಅಂತಿಮ ಪಟ್ಟಿ

ಶ್ರೀನಿವಾಸಪುರ 3: ಶ್ರೀನಿವಾಸಪುರ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸೋಮವಾರ ಅಂತಿಮ ಪಟ್ಟಿಯನ್ನು ಮಾಡಲಾಗಿದ್ದು, ಅದರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಆರ್.ರಮೇಶ್‍ಕುಮಾರ್, ಜೆಡಿಎಸ್ ಪಕ್ಷದಿಂದ ಜಿ.ಕೆ.ವೆಂಕಟಶಿವಾರೆಡ್ಡಿ, ಬಿಜೆಪಿ ಪಕ್ಷದಿಂದ ಆರ್.ಶ್ರೀನಿವಾಸರೆಡ್ಡಿ, ಎಎಪಿ ಪಕ್ಷದಿಂದ ವೈ.ವಿ.ವೆಂಕಟಾಚಲ, ಕೆ.ಆರ್.ಪಕ್ಷದಿಂದ ಜಿ.ಕೆ.ಆನಂದ್ , ಪಕ್ಷೇತರ ಅಭ್ಯರ್ಥಿಗಳಾಗಿ ಎನ್.ಎಸ್.ರಮೇಶ್‍ಕುಮಾರ್, ಎಸ್.ರಮೇಶ್‍ಕುಮಾರ್, ವೆಂಕಟಶಿವಾರೆಡ್ಡಿ, ಟಿ.ಎನ್.ವೆಂಕಟಶಿವಾರೆಡ್ಡಿ ಅಂತಿಮ ಕಣದಲ್ಲಿ ಇದ್ದಾರೆ

ನಿಧನ : ಪಿ.ವಿ.ಚಂದ್ರಯ್ಯ ಶೆಟ್ಟಿ


ಶ್ರೀನಿವಾಸಪುರ: ಪಟ್ಟಣದ ವರ್ತಕ ಪಿ.ವಿ.ಚಂದ್ರಯ್ಯ ಶೆಟ್ಟಿ (87) ಭಾನುವಾರ ನಿಧನರಾದರು. ಅವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲಿದ್ದರು.
ಮೃತರಿಗೆ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಏ.24 ರಂದು ಬೆಳಿಗ್ಗೆ ಪಟ್ಟಣದ ಹೊರವಲಯದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.

ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ : ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂಟು ಬೂಟು ಹಾಕಿಕೊಂಡು ಬಂದು ಮತ ಕೇಳುತ್ತಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇರುವುದಿಲ್ಲ. ಎಂದೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದವರು ಅವರಲ್ಲ ಎಂದು ಹೇಳಿದರು.
ಸಂವಿಧಾನ ಸಮಾಜದ ಭಾವ ಬೆಸೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನ ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ನಾನು ಅಂಬೇಡ್ಕರ್ ಸಿದ್ಧಾತದಲ್ಲಿ ನಂಬಿಕೆಯುಳ್ಳವನು. ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡಿಲ್ಲ. ಸರ್ಕಾರದ ಸೌಲಭ್ಯ ಪಕ್ಷಾತೀತವಾಗಿ ನೀಡಿದ್ದೇನೆ ಎಂದು ಹೇಳಿದರು.
ವಿಶೇಷ ಕಾಳಜಿ ವಹಿಸಿ ಕ್ಷೇತ್ರಕ್ಕೆ 23 ಸಾವಿರ ಮನೆ ತಂದಿದ್ದೇನೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವಂತೆ ಮಾಡಿದ್ದೇನೆ. ಕರೆ ಸುತ್ತಲಿನ ಗ್ರಾಮಗಳ ರೈತರು ಬೆಳೆ ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂತೋಷವಾಗಿದೆ. ಹಾಗಾಗಿ ನನಗೂ ಸಂತೋವಾಗಿದೆ. ಅರಿಕೆರೆ ನಾಗನಾಥೇಶ್ವರ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಬೇಕಾದರೆ ಖಂಡಿತವಾಗಿಯೂ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಮುಖಂಡರಾದ ಎಸ್.ವಿ.ಸುಧಾಕರ್, ಎನ್.ಜಿ.ಬ್ಯಾಟಪ್ಪ, ರಮೇಶ್, ಲಕ್ಷ್ಮಿದೇವಮ್ಮ, ಹರಿಕೃಷ್ಣ, ಜಗದೀಶ್, ಅಶೋಕ್, ಅಶೋಕ್, ಆನಂದ್, ಎಸ್.ವಿ.ವಿವೇಕ್ ಇದ್ದರು.
7

St Agnes PU College ; The overall pass percentage of 98 is also a remarkable one.

St Agnes PU College feels immensely proud of the heartwarming results garnered by the students in the Karnataka School Examination and Assessment Board 2023. Samruddhi D topped the Science stream with a praiseworthy total of 578 marks. From the Commerce stream Renisha Viola DSouza has secured an impressive 593 marks and a gratifying Centum in Accountancy, Statistics & Basic Maths. She is also the recipient of the 5th Rank at the State Level. The topper from the Arts stream is SamhitaPrabhuwho has got an outstanding total of 575 marks and scored hundred percent in Political Science. The overall pass percentage of 98 is also a remarkable one. We have an outstanding 222 Distinctions, 339 First Classes and 67 students have scored Centum in various subjects.

The Management, Principal SrNorineDSouza, Vice Principal Sr Janet Sequiera& the faculty congratulate the students for acing the exam and bringing laurels to the institution with their laudable academic accomplishment.

Mangalore – Milagres Super Cup 2023

Mangalore : Milagres Super Cup 2023, 5-A-Side, football tournament was held on April 23rd, 2023 at Jeppu Seminary Grounds. The tournament was organized by Our Lady of Miracles Church in association with Goal Academy Foundation and Gonzaga Football Club. The tournament saw 20 teams from across the region compete.

It was a huge success supported by youth from ICYM. All the teams played with great enthusiasm and sportsmanship, making it a memorable event for everyone involved.

The main sponsor for the event was Mr John Errol Samuel, Proprietor of Aquamater Laboratory. The organizers express their gratitude to all the participants and congratulates the winners.

The winners are Cordel Parish youth with Jeshsay scoring the winning goal and the runners-up Bejai Parish youth.

The tournament was organized under the guidance of Fr Bonaventure Nazareth – Parish priest, Fr Michael Santhamayor, Fr Uday Fernandes, Fr Kenneth Crasta and Fr Ivan D’Souza.

Congratulations to all the teams that participated in the Milagres Super Cup 2023.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನತಾ ಫಿಶ್ ಮಿಲ್ ಫೇಕ್ಟರಿ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತ ದಾನ ಶಿಬಿರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನತಾ ಫಿಶ್ ಮಿಲ್ ಫೇಕ್ಟರಿ ಇವರ ಸಹಯೋಗದೊಂದಿಗೆ ಬ್ರಹತತ ರಕ್ತ ದಾನ ಶಿಬಿರವನ್ನು ಪಡುಕೆರೆಯಲ್ಲಿ ಆಯೋಜಿಸಲಾಯಿತು. ಇದರ ಉದ್ಘಾಟನೆಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ನೆರವೇರಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ಹೇಳಿದರು. ಕಾರ್ಯಕ್ರಮದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಯುವ ರೆಡ್ ಕ್ರಾಸ್ ಸಂಯೋಜಕ ಸತ್ಯನಾರಾಯಣ ಪುರಾಣಿಕ ಮತ್ತು ರೆಡ್ ಕ್ರಾಸ್ ಸಿಭಂದಿಗಳು ಉಪಸ್ಥಿತರಿದ್ದರು. 102 ಯುನಿಟ್ ರಕ್ತ ವನ್ನು ಸಂಗ್ರಹಿಸಲಾಯಿತು.

ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನಆಚರಣೆ

ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್

ಮಂಗಳೂರು, ಎ.23: ಮಂಗಳೂರು ಜೆಪ್ಪುವಿನ ಸಂತಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನವನ್ನು 2023ರ ಏಪ್ರಿಲ್ 23ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‍ನಲ್ಲಿ ಆಚರಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾದರ್ ರೂಪೇಶ್ ತಾವ್ರೊ ಅವರು ಪ್ರವಚನ ಬೋಧಿಸಿದರು. ಮಂಗಳೂರು ಧರ್ಮಕ್ಷೇತ್ರದ ಕುಲಪತಿಗಳು, ಆತೀ ವಂದನೀಯ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ವಿಲಿಯಂ ಬಾರ್ಬೋಜಾ, ಫಾದರ್ ಲಾರೆನ್ಸ್ ಡಿಸೋಜ, ಫಾದರ್ ಫ್ರಾನ್ಸಿಸ್ ಡಿಸೋಜ, ಫಾದರ್ ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ.ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾದರ್ ಲ್ಯಾರಿ ಪಿಂಟೋ ಉಪಸ್ಥಿತರಿದ್ದರು.
‘ಸಂಭ್ರಮ’ ಸಭಾಂಗಣದಲ್ಲಿ ನಡೆದಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ಹಿತ ಚಿಂತಕರಿಗೆ ಕೃತಜ್ಞತೆಯ ಸಂಕೇತವಾಗಿ ಸಚಿತ ಅಂತೋನಿಯವರ ಪ್ರತಿಮೆಯನ್ನು ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಆಧ್ಯಕ್ಷರಾಗಿ ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾಆವರು ಮಾತಾನಾಡಿ, “ಯಾವುದೇ ದಾನಿ ಪ್ರತಿಫಲವನ್ನು ನಿರೀಕ್ಷಿಸಿ ದಾನ ಮಾಡುವುದಿಲ್ಲ. ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಎಂದು ಹೇಳಿದರು.
ಹಿತಚಿಂತಕರನ್ನು ಸ್ಮರಿಸುವ ಮತ್ತು ದೇವರಿಗೆಕೃತಜ್ಞತೆ ಸಲ್ಲಿಸುವ ಈ ದಿನವನ್ನು ಆಚರಿಸುವ ಈ ಹೊಸ ಉಪಕ್ರಮವು ಸಚಿತ ಅಂತೋನಿ ಆಶ್ರಮದಲ್ಲಿ ಇದೇ ಮೊದಲನೆಯದು. “ನಿರ್ದೇಶಕರು ಮತ್ತು ಸಹಾಯಕರ ಚಿಂತನಶೀಲತೆಗೆ ನಾನು ಧನ್ಯವಾದಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ” ಎಚಿದು ಶ್ರೇಷ್ಠಗುರು ಮ್ಯಾಕ್ಸಿಮ್ ಹೇಳಿದರು.
ಸಂಸ್ಥೆಯ ಮರು ವಿನ್ಯಾಸಗೊಳಿಸಲಾದ ವೆಬ್‍ಸೈಟ್‍ಅನ್ನುಇದೇ ಸಂದರ್ಭದಲ್ಲಿ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ ಅವರು ಮರು ಪ್ರಕಟಿಸಿದರು.
ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯವರ ಸವಿನೆನಪಿಗೆ ಸಚಿತ ಅಂತೋನಿ ಚಾರಿಟಿ ಸಂಸ್ಥೆಯಗಣ್ಯರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳಿಂದ 10 ಫಲ ನೀಡುವ ಗಿಡಗಳನ್ನು ನೆಡಲಾಯಿತು.
ಫಾದರ್ ಲ್ಯಾರಿ ಪಿಂಟೋಅವರು ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸಿದರು ಮತ್ತು ಆಶ್ರಮ ಮತ್ತು ಅದರ ನಿವಾಸಿಗಳ ಕೆಲವು ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿದರು.
ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ರೂಪೇಶ್ ತಾವ್ರೊ ವಂದಿಸಿದರು. ಫಾದರ್ ತ್ರಿಶಾನ್ ಡಿಸೋಜಾ ಭೋಜನದ ಪ್ರಾರ್ಥನೆ ಮಾಡಿದರು.
ಶ್ರೀ ಸೈಮನ್ ಪಾಯ್ಸ್, ಬಜಾಲ್ ಮತ್ತು ತಂಡದಿಂದ ಬಲಿಪೂಜೆಯ ಗಾಯನವನ್ನು ಹಾಡಿ ಸಹಕರಿಸಿತು.