ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ತಮ್ಮ ಹಾಲನ್ನು ಖಾಸಗಿ ಡೈರಿಗಳಿಗೆ ಕಳುಹಿದೆ,ಸರ್ಕಾರಿ ಹಾಲು ಡೈರಿಗಳಿಗೆ ನೋಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

 ಹಾಲು ಉತ್ಪಾದಕರು ಯಾವುದೇ ಕಾರಣಕ್ಕೂ ತಮ್ಮ  ಹಾಲನ್ನು ಖಾಸಗಿ ಡೈರಿಗಳಿಗೆ  ಕಳುಹಿಸಬೇಡಿ. ಬದಲಾಗಿ  ಸರ್ಕಾರಿ ಹಾಲು ಡೈರಿಗಳಿಗೆ  ಹಾಲನ್ನು ನೀಡುವುದರಿಂದ ರೈತರಿಗೆ  ವಿಮೆ, ತಮ್ಮ ಹಸುಗಳಿಗೆ  ವೈದ್ಯಕೀಯ ಚಿಕಿತ್ಸೆ  ಮತ್ತು  ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನವನ್ನು ಪಡೆಯಲು ಸಾದ್ಯವಾಗುತ್ತದೆ.  ಎಂದು ಮಾಜಿ ವಿಧಾನ ಸಭಾಧ್ಯಕ್ಷ ಹಾಗೂ ಶಾಸಕ  ಕೆ.ಆರ್ ರಮೇಶ್ ಕುಮಾರ್  ರೈತರಿಗೆ ಕರೆನೀಡಿದರು. 

ಅವರು  ಇಂದು ಯಲ್ದೂರು ಹೋಬಳಿ  ಶೆಟ್ಟಿಹಳ್ಳಿಗ್ರಾಮದಲ್ಲಿ  ಹಮ್ಮಿಕೊಂಡಿದ್ದ ಶೆಟ್ಟಿಹಳ್ಳಿ ಹಾಲು ಉತ್ಪಾದಕರ   ಸಹಕಾರ ಸಂಘದ     ನೂತನ  ಘಟಕವನ್ನು ಉದ್ಘಾಟಿಸಿ  ಮಾತನಾಡುತ್ತ  ಹೈನುಗಾರಿಕೆಯಿಂದ ಇಂದು ಗ್ರಾಮೀಣ ಭಾಗದ ಜನರು  ಆರ್ಥಿಕವಾಗಿ  ಸಬಲಗಾಗುತ್ತಿದ್ದಾರೆ. ಆದ್ದರಿಂದ ಗ್ರಾಮ ಪ್ರತಿಯೊಂದು ಕುಟುಂಬವು  ಸ್ತ್ರೀ ಶಕ್ತಿ ಸಂಘಗಳಿಂದ  ಮತ್ತು  ರೈತರ  ಸೇವ ಸಹಕಾರ ಸಂಘಗಳಿಂದ ದೊರೆಯುವ ಸಾಲ ಸೌಲಭ್ಯವನ್ನು  ಬಳಸಿಕೊಂಡು  ಹಸುಗಳನ್ನು ಖರೀದಿಸಿ ಸ್ವಾವಲಂಬಿ ಜೀವನವನ್ನು  ನಡೆಸಬೇಕು. ಸಹಕಾರ ಸಂಘದ ಆಡಳಿತ ಮಂಡಳಿಯವರು ಖಾಸಗಿ  ಡೈರಿಗಳಿಗೆ  ಹಾಲು  ಒದಗಿಸುವ  ಹಾಲು  ಉತ್ಪಾದಕರ ಮನೆಗಳಿಗೆ ಬೇಟಿ ನೀಡಿ  ಅವರ ಮನವೊಲಿಸಿ  ಹಾಲನ್ನು ಸರ್ಕಾರಿ ಡೈರಿಗಳಿಗೆ  ಒದಗಿಸುವಂತೆ ಮಾಡಬೇಕು ಎಂದು ತಿಳಿಸಿದರು  

                 ಯಲ್ದೂರು ಜಿಲ್ಲಾಪಂಚಾಯಿತಿ ಸದಸ್ಯ ಗೋವಿಂದ ಸ್ವಾಮಿ  ಮಾತನಾಡುತ್ತ   ದಿವಂಗತ ಎಂ ವಿ  ಕೃಷ್ಣಪ್ಪನವರ ಕನಸು ಇಂದು  ನನಸಾಗುತ್ತಿದೆ. ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಎಲ್ಲಾ ಗ್ರಾಮಗಳಲ್ಲಿ  ಹಾಲ ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿ   ಜನರು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ.  ಜೊತೆಗೆ ಆಧುನಿಕ ಭಗೀರಥ   ಕೆ. ಆರ್ ರಮೇಶ್ ಕುಮಾರ್ ರವರ  ಪ್ರಯತ್ನದ ಫಲವಾಗಿ ಕೆ. ಸಿ ವ್ಯಾಲಿ ನೀರು   ಕೋಲಾರ ಜಿಲ್ಲೆಯ ಕೆರೆಗಳಲ್ಲಿ ಹರಿಯುತ್ತಿದ್ದು  ಹೈನುಗಾರಿಕೆ ಹಾಗೂ ಇತರೆ ವ್ಯವಸಾಯ ಚಟುವಟಿಕೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

                ಈ ಸಂದರ್ಭದಲ್ಲಿ  ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂದ ನಿರ್ದೇಶಕ ಹನುಮೇಶ್ ,ಮಾಜಿ ಅಧ್ಯಕ್ಷ  ಕೊಂಡಸಂದ್ರ  ವೆಂಕಟಶಿವಾರೆಡ್ಡಿ ,  ಆಧಿಕಾರಿ ಶ್ರೀಕಾಂತ್ , ಶೆಟ್ಟಿಹಳ್ಳಿ  ಹಾಲು ಉತ್ಪಾದಕಸಹಕಾರ ಸಂಘದ   ಅಧ್ಯಕ್ಷ  ವಿ ನಾಗಪ್ಪ ,  ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀರಾಮಪ್ಪ,  ಎ.ಪಿ.ಎಂ.ಸಿ ನಿರ್ದೇಶಕ ಯೋಗೀಂದ್ರ ಗೌಡ  ವೈ ಎಸ್. ಎಪ್. ಸಿ. ಎಸ್ ಅಧ್ಯಕ್ಷ  ನಾರಾಯಣಸ್ವಾಮಿ,  ಮುಖಂಡರಾದ ಇ. ದೇವರಾಜ್ , ಕೆ.ಟಿ. ಜಯಣ್ಣ  , ಗೌರಮ್ಮ, ಗಾಜುಲಪಲ್ಲಿ ಚಂದ್ರಪ್ಪ ,  ಬೈಚಪ್ಪ, ಲಕ್ಷ್ಮೀಸಾಗರ ಅಶೋಕ್ ಇನ್ನೂ ಮುಂತಾದವರು ಭಾಗವಹಿಸಿದ್ದರು.