ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ – 13-12-2020 ರಂದು ಭಾನುವಾರ ಸಂಜೆ 4.30ಕ್ಕೆ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾಭವನದಲ್ಲಿ

JANANUDI.COM NETWORK

ಕುಂದಾಪುರ,ಡಿ. 12: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ವತಿಯಿಂದ ಉಡುಪಿ ಧರ್ಮಪ್ರಾಂತ್ಯದ ಲ್ಯಾಟಿನ್ ಕೆಥೊಲಿಕ್, ಸೀರೊ ಮಲಬಾರ್ ಕೆಥೊಲಿಕ್, ಸಿ.ಎಸ್.ಐ.ಧರ್ಮಸಭೆ, ಅರ್ಥೊಡ್ಯಾಕ್ಸ್ ಸೀರಿಯನ್ ಹಾಗೂ ಸಮಾಜದ ಇತರ ಬಾಂಧವರೊಂದಿಗೆ “ಕ್ರಿಸ್ಮಸ್ ಸೌಹಾರ್ದ” ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಅತೀ ವಂ. ಫಾ| ಸ್ಟ್ಯಾನಿ ತಾವ್ರೊ, ಕುಂದಾಪುರ ವಲಯ ಪ್ರಧಾನರು, ವಂ| ಸ್ಟೀವನ್ ಸರ್ವೊತ್ತಮ, ಮಾಜಿ ಅಧ್ಯಕ್ಷರು, ಉಡುಪಿ. ಜಯಪ್ರಕಾಶ್ ಶೆಟ್ಟಿ, ಸಹಪ್ರಾಧ್ಯಪಕರು. ಅಬ್ದುಲ್ ಅಜೀಜ್, ಅಧ್ಯಕ್ಷರು ಉರ್ದು ಶಾಲೆ, ಬಸ್ರೂರು. ವಂ|ಫಾ|ಚಾಲ್ರ್ಸ್ ನೊರೊನ್ಹಾ, ಧರ್ಮಗುರುಗಳು ಬಸ್ರೂರು. ಜೊಯೆಲ್ ಸುಹಾಸ್ ಕ್ರಪಾ ಚರ್ಚ್,ಕುಂದಾಪುರ. ಇವರುಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮ 13-12-2020 ರಂದು ಭಾನುವಾರ ಸಂಜೆ 4.30ಕ್ಕೆ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್ ಸಭಾಭವನದಲ್ಲಿ ನಡೆಯಲಿದೆಯೆಂದು, ಕಾರ್ಯಕ್ರಮ ಸಂಚಾಲಕರಾದ ಪ್ರೀತಮ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.