ಶ್ರೀನಿವಾಸಪುರ:ಕೆ.ಆರ್‌.ರಮೇಶ್‌ ಮುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಕ್ಕೆ ಪ್ರತಿಭಟನೆ 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ:ಕೆ.ಆರ್‌.ರಮೇಶ್‌ ಮುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಕ್ಕೆ ಪ್ರತಿಭಟನೆ 
ಶ್ರೀನಿವಾಸಪುರ:  ಗೌನಿಪಲ್ಲಿ ಗ್ರಾಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ವೈದ್ಯಕೀಯ ಸಚಿವ ಡಾ. ಕೆ.ಸುಧಾಕರ್‌, ಶಾಸಕ ಕೆ.ಆರ್‌.ರಮೇಶ್‌ ಮುಮಾರ್ ಅವರನ್ನು ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾರೆ ಎಂದು ಆಪಾದಿಸಿ, ಡಾ. ಸುಧಾಕರ್‌ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ನಂತರ ದಹಿಸಿದರು.
  ರಾಯಲ್ಪಾಡು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸಂಜಯ್‌ ರೆಡ್ಡಿ ಮಾತನಾಡಿ, ಶಾಸಕ ಕೆ.ಆರ್‌.ರಮೇಶ್‌ ಕುಮಾರ್ ನಾಡು ಕಂಡ ಅಪ್ರತಿಮ ರಾಜಕಾರಣಿ, ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವ ವ್ಯಕ್ತಿ. ಹಾಗಿರುವಾಗ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ರಮೇಶ್‌ ಕುಮಾರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಹೇಳಿದರು.
    ಕಾಂಗ್ರೆಸ್‌ ಮುಖಂಡರಾದ ಸತ್ಯನಾರಾಯಣ, ಮಂಜುನಾಥ ಆರಾಧ್ಯ, ರಮೇಶ್‌ ಬಾಬು, ನಾರಾಯಣಸ್ವಾಮಿ, ರಿಯಾಜ್‌ ಪಾಷ, ವಲ್ಲಿ ಬಾಷ, ಸೋಮಶೇಖರ್‌, ಮುನಿರಾಜು ಮತ್ತಿತರರು ಇದ್ದರು.