ಶ್ರೀನಿವಾಸಪುರ ತಾಲ್ಲೂಕು ಕಚೇರಿ ಎದುರು  ಅಂಗನವಾಡಿ ಕಾರ್ಯಕರ್ತೆಯರು  ಬೇಡಿಕೆ ಈಡೇರಿಸುವಂತೆ  ಪ್ರತಿಭಟನೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಕಚೇರಿ ಎದುರು  ಅಂಗನವಾಡಿ ಕಾರ್ಯಕರ್ತೆಯರು  ಬೇಡಿಕೆ ಈಡೇರಿಸುವಂತೆ  ಆಗ್ರಹಿಸಿ ಪ್ರತಿಭಟನೆ  ನಡೆಸಿದರು.
  ಜಿಲ್ಲಾ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಜಿ.ಈಶ್ವರಮ್ಮ ಪ್ರತಿಭಟನೆ ನಿರತ ಅಂಗನವಾಡಿ ಕಾರ್ಯಕರ್ತೆಯರನ್ನು ಉದ್ದೇಶಿಸಿ ಮಾತನಾಡಿ, ಮೊದಲ ಸಾಲಿನ ಕೊರೊನಾ ವಾರಿಯರ್ಸ್‌ ಆಗಿರುವ ಅಂಗನವಾಡಿ ನೌಕರರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು. ಮಕ್ಕಳ ಆರೋಗ್ಯ ತಪಾಸಣೆಗೆ ಸಂಬಂಧಿಸಿದಂತೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
  ಅಂಗನವಾಡಿ ನೌಕರರ ನಿವೃತ್ತಿ ವೇತನ ಸಮಸ್ಯೆ ಬಗೆಹರಿಸಬೇಕು. ಸಹಾಯಕಿಯರ ಮುಂಬಡ್ತಿಗೆ ವಯಸ್ಸಿನ ಮಿತಿಯನ್ನು ತೆಗೆದುಹಾಕಬೇಕು. ಕೊರೊನಾ ನಿಯಂತ್ರನ ಕಾರ್ಯಕ್ಕೆ ತಲಾ ರೂ.25 ಸಾವಿರ ಪ್ರೋತ್ಸಾಹ ಧನ ನೀಡಬೇಕು. ಮೇಲ್ವಿಚಾರಕಿಯರ ಹುದ್ದೆಗೆ ಶೇ.100 ರಷ್ಟು ಮೀಸಲಾಗಿ ನೀಡಿ, ಸೇವಾ ಜೇಷ್ಟತೆಯ ಆಧಾರದಲ್ಲಿ ಮುಂಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
    ತಾಲ್ಲೂಕು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಆಂಜಿಲಮ್ಮ, ಸಹ ಕಾರ್ಯದರ್ಶಿಗಳಾದ ರಾಧಾ, ಮಮತ, ಖಜಾಂಚಿ ಪುಷ್ಪ, ಉಪಾಧ್ಯಕ್ಷರಾದ ಪದ್ಮ , ಲಕ್ಷ್ಮಿದೇವಮ್ಮ, ಶಕುಂತಲ ಇದ್ದರು.