“ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರೀನಿವಾಸಪುರ ತಾಲೂಕಿನಲ್ಲಿ3001ನೇಪ್ರಗತಿಬಂಧು ಸ್ವ-ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮ”

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಶ್ರೀನಿವಾಸಪುರ ತಾಲೂಕಿನಲ್ಲಿ ಸ್ವ-ಸಹಾಯ ಸಂಘವನ್ನುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಕೋಲಾರ ಜಿಲ್ಲೆಯ ಮಾನ್ಯ ಹಿರಿಯ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಚಂದ್ರಶೇಖರ್ ಜೆ ರವರು 3001 ನೇ ಪ್ರಗತಿಬಂಧು ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದಂತ ವಿಸ್ತರಣೆಗೊಂಡಿದ್ದು ಯೋಜನೆಯ ಬೇರೆ ಬೇರೆ ಕಾರ್ಯಕ್ರಮವನ್ನು ಕುಟುಂಬದ ಅಭಿವೃದ್ದಿಗೆ ಪೂರಕವಾಗಿ ಅನುಷ್ಠಾನ.ಸಂಘದ ನಿಯಮಗಳ ಬಗ್ಗೆ & ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಸಂಘದ ವಾರ ಸಭೆಯಿಂದ ತಮ್ಮ ಕುಟುಂಬದಲ್ಲಿ ಮಾಡ ಬೇಕಾದ ಪ್ರಗತಿ & ಯೋಜನೆಗಳನ್ನು ಹಿಡುವಳಿ ಯೋಜನೆಯ ಮೂಲಕ ಅನುಷ್ಠಾನ ಮಾಡಲಾಗುವುದು.ಸ್ವ-ಸಹಾಯ ಸಂಘದಿಂದ ಸದಸ್ಯರ ಆರ್ಥಿಕ & ಸಾಮಾಜಿಕ ಅಭಿವೃದ್ದಿಗೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ,ಕ್ಷೇ,ಧ,ಗ್ರಾ,ಯೋ,ಬಿ.ಸಿ ಟ್ರಸ್ಟ್(ರಿ)ಶ್ರೀನಿವಾಸಪುರ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಶ್ ಗೌಡ ಎಸ್ ರವರು ಹಾಗೂಕರ್ನಾಟಕ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷಕರುಕಾಸಿಂ ಹುಸೇನ್, ಗೌನಿಪಲ್ಲಿ ಗ್ರಾಮ ಪಂಚಾಯ್ತಿಯ ಮಾಜಿ ಸದಸ್ಯರು ರಮೇಶ್ ಬಾಬು, ಗೌನಿಪಲ್ಲಿ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷಕರಾದ ಬಕ್ಷುಸಾಬ್, ಗೌನಿಪಲ್ಲಿ ವಲಯದ ಮೇಲ್ವಿಚಾಕರಾದ ವೆಂಕಟೇಶ್‍ಹಾಗೂ ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಹಾಗೂ ಸ್ವ-ಸಹಾಯ ಸಂಘದವರು ಉಪಸ್ಥಿತರಿದ್ದರು.