ಶಿಕ್ಷಕ ಕೆ. ಪ್ರೇಮಾನಂದರಿಗೆ ಸನ್ಮಾನ ಶಿಕ್ಷಕರನ್ನು ಗೌರವಿಸುವುದು ಪವಿತ್ರ ಕಾರ್ಯ: ರಾಮ್ ಕಿಶನ್ ಹೆಗ್ಡೆ

JANANUDI NETWORK

ಶಿಕ್ಷಕ ಕೆ. ಪ್ರೇಮಾನಂದರಿಗೆ ಸನ್ಮಾನ ಶಿಕ್ಷಕರನ್ನು ಗೌರವಿಸುವುದು ಪವಿತ್ರ ಕಾರ್ಯ: ರಾಮ್ ಕಿಶನ್ ಹೆಗ್ಡೆ

ಕುಂದಾಪುರ, ಆ. ’ತನ್ನ ಸುಧೀರ್ಘ ಸೇವಾ ಅವಧಿಯಲ್ಲಿ ಸಹಸ್ರಾರು ಮಕ್ಕಳ ಭವಿಷ್ಯವನ್ನು ರೂಪಿಸುವ ಪವಿತ್ರ ಕಾರ್ಯ ಶಿಕ್ಷಕರು ಮಾಡುತ್ತಾರೆ.ವಿಧ್ಯಾಧಾನದಲ್ಲಿ ಸಂಪೂರ್ಣ ಅರ್ಪಣಾ ಭಾವ ಯಾರಲ್ಲಿ ಇರುವುದೋ ಅಂತಹ ಗುರುಪರಂಪರೆ ಈ ನಾಡಿನ ನಿಜವಾದ ಬೆಳಕು. ಈ ಹಿನ್ನೆಲೆಯಲ್ಲಿ ನಿವೃತ್ತ ಅಧ್ಯಾಪಕ ಕೆ.ಪ್ರೇಮಾನಂದ ಇವರನ್ನು ಸನ್ಮಾನಿಸಲು ಹೆಮ್ಮೆ ಪಡುತ್ತೇನ”  ಎಂದು ತಾಲೂಕ್ ಪಂಚಾಯಿತ್ ಉಪಾಧ್ಯಕ್ಷರಾದ ಶ್ರೀ ರಾಮ್ ಕಿಶನ್ ಹೆಗ್ಡೆ ತಿಳಿಸಿದರು.

     ಅವರು ಸ. ಹೀ. ಫ್ರಾ.ಶಾಲೆ ಬಸ್ರೂರು ಉರ್ದು ಶಾಲೆಯಲ್ಲಿ ಸೇವಾ ನಿವೃತ್ತಿ ಗೊಂಡ್ ಶಿಕ್ಷಕ ಕೆ. ಪ್ರೇಮಾನಂದ ದಂಪತಿಗಳನ್ನು ಸನ್ಮಾನಿಸಿ, ಸ್ಮರಣಿಕೆ ನೀಡಿ ಶುಭಹಾರೈಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಣಿ ಕ್ಲಸ್ಟರ್ನ ಸಿ. ಆರ್. ಪಿ ಶ್ರೀಮತಿ ಸಂಧ್ಯಾ ಶೆಟ್ಟಿ,ಮೊಹಮ್ಮದ್ ಹನೀಫ್ ಶೇಕ್ ಸೌದಿ ಅರೇಬಿಯಾ,ಮೊಹಮ್ಮದ್ ಇರ್ಫಾನ್,ಜಾಮಿಯಾ ಅಧ್ಯಕ್ಷ ಹಮೀದ್ ಸಾಹೇಬ್, ಎಸ್. ಡೀ. ಮ್. ಸಿ. ಅಧ್ಯಕ್ಷ ಅಬ್ದುಲ್ ಅಜೀಜ್ ಸಭಾಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸಗೀರ್ ತರನ್ನುಮ್ ಸನ್ಮಾನ ಪತ್ರ ವಾಚನಾಗೈದು,ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಶಾಲಾಕ್ಷಿ ಶೆಟ್ಟಿ ಅಭಿನಂದನ ಭಾಷಣ ಮಾಡಿ, ಸರ್ವ ರನ್ನು ಸ್ವಾಗತಿಸಿದರು.ಶಿಕ್ಷಕ ಮಹೇಶ್ ವಕ್ವಾಡಿ ನಿರೂಪಿಸಿದರು