ಲೋಕಾಯುಕ್ತದಿಂದ ಸಾರ್ವಜನಿಕ ದೂರುಗಳ ಸ್ವೀಕಾರ

JANANUDI.COM NETW

 

 

ಲೋಕಾಯುಕ್ತದಿಂದ ಸಾರ್ವಜನಿಕ ದೂರುಗಳ ಸ್ವೀಕಾರ

 

 

ಕುಂದಾಪುರ : ಉಡುಪಿ ಜಿಲ್ಲಾ ಲೋಕಾಯುಕ್ತ ದಳದಿಂದ ಕುಂದಾಪುರ ಹಾಗೂ ಬೈಂದೂರು ವಲಯಗಳ ಸಾರ್ವಜನಿಕರಿಂದ ಪ್ರವಾಸಿ ಬಂಗಲೆಯಲ್ಲಿ ದೂರುಗಳನ್ನು ಸ್ವೀಕರಿಸಲಾಯಿತು. ಉಡುಪಿ ಲೋಕಾಯುಕ್ತ ನಿರೀಕ್ಷಕರಾದ ರಾಜ್ ಶೇಖರ್ ಹಾಗೂ ಸಿಬಂದಿಗಳು ಸಾರ್ವಜನಿಕರ ಅಹವಾಲುಗಳಿಗೆ ಸಕರಾತ್ಮಕವಾಗಿ ಸ್ಪಂದನೆ ನೀಡಿದ್ದು, ತಮ್ಮ ಇಲಾಖೆಯ ಅóಧಿಕೃತ ಅರ್ಜಿ ನಮೂನೆಗಳಲ್ಲಿ ದೂರುಗಳನ್ನು ಪ್ರಮಾಣಿಕರಿಸಿ ಉಡುಪಿ ಇಲಾಖೆಯ ಮೂಲಕ ಅಥವಾ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಮುಖ್ಯ ಕಛೇರಿಗೆ ನೇರವಾಗಿ ಕಳುಹಿಸುವ ಮೂಲಕ ಸಾರ್ವಜನಿಕರು ತಮ್ಮ ದೂರುಗ¼ನ್ನು ತ್ವರಿತವಾಗಿ ಬಗೆ ಹರಿಸಿಕೊಂಡು ಪರಿಹಾರ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಹಲವಾರು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಂಡಿದ್ದು, ಹೆಚ್ಚಿನ ಸಾರ್ವಜನಿಕ ದೂರುಗಳೆಲ್ಲಾ ಸರ್ಕಾರಿ ಕಛೇರಿ ಮತ್ತು ಸರ್ಕಾರಿ ಅಧಿಕಾರಿಗಳ ಅಸಡ್ಡೆ ಮತ್ತು ಭೃಷ್ಟತೆಯ ವಿರುದ್ಧವೇ ಕೇಳಿ ಬಂದಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅತ್ಯಂತ ಸಮಾಧಾನ ಚಿತ್ತದಿಂದ ಸಾರ್ವಜನಿಕ ದೂರುಗಳನ್ನು ಆಲಿಸಿದ ಲೋಕಾಯುಕ್ತ ನಿರೀಕ್ಷಕರು ಅವರಿಗೆ ಮುಂದಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದು ಲೋಕಾಯುಕ್ತ ದಳದ ಬಗ್ಗೆ ಸಂತೃಸ್ಥ ಸಾರ್ವಜನಿಕರಲ್ಲಿ ಹೊಸ ಹುರುಪು ಮೂಡಿದಂತಾಗಿದೆ ಎಂದು ಹೇಳಲಾಗಿದೆ.