ಯುವಕರು ದೈಹಿಕ ಸದೃಡತೆ ಕಾಪಾಡುವಲ್ಲಿ ಬೇಕಾದರೆ ನಿತ್ಯ ವ್ಯಾಯಮ ಮಾಡುವುದರ ಜತೆಗೆ ಆಟೋಟಗಳಲ್ಲಿ ಪಾಲ್ಗುಳ್ಳುವುದು ಸಹ ಮುಖ್ಯ:ನಾಗರಾಜ್

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಸ.ಕ.ಸಮಚಾರ , ರಾಯಲ್ಪಾಡು 2 : ಯುವಕರು ದೈಹಿಕ ಸದೃಡತೆಯನ್ನು ಕಾಪಾಡಿಕೊಳ್ಳಬೇಕಾದರೆ ಪ್ರತಿನಿತ್ಯ ವ್ಯಾಯಮ ಮಾಡುವುದರ ಜತೆಗೆ ಆಟೋಟಗಳಲ್ಲಿ ಪಾಲ್ಗುಳ್ಳುವುದು ಸಹ ಮುಖ್ಯವೆಂದು ಆಡಳಿತಾಧಿಕಾರಿ ನಾಗರಾಜ್ ಹೇಳಿದರು.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ನರೇಗಾ ಯೋಜನೆಯಡಿಯಲ್ಲಿ 4ಲಕ್ಷ ರೂ ವೆಚ್ಚದಲ್ಲಿ ಆಟ ಮೈದಾನಗಳನ್ನ ಸಿದ್ದಪಡಸಿಪಡಿಸುವ ಸಲುವಾಗಿ ಬುಧವಾರ ಸ್ಥಳ ಪರಿಶೀಲಿಸಿ ಮಾತನಾಡಿದರು.
ಶಾಲಾವರಣದಲ್ಲಿ ಕೋಕೋ, ವಾಲಿಬಾಲ್, ಷಟಲ್‍ಕಾಕ್, ಕಬಡ್ಡಿ ಇತರೆ ಆಟಗಳಿಗೆ ಮೈದಾನಗಳನ್ನ ಸಿದ್ದಪಡಿಸುವ ಸಲುವಾಗಿ ಯೋಜನೆಯನ್ನು ರೂಪಿಸಲಾಯಿತು.
ಪಿಡಿಒ ಕೆ.ವಿ.ನರೇಂದ್ರಬಾಬು , ಗ್ರಾ.ಪಂ. ಮಾಜಿ ಸದಸ್ಯ ಸಿಮೆಂಟ್ ನಾರಾಯಣಸ್ವಾಮಿ ಇದ್ದರು.
ಪೋಟು 2: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ಆಟ ಮೈದಾನಗಳನ್ನು ಸಿದ್ದಪಡಿಸುವ ಸಲುವಾಗಿ ಆಡಳಿತಾಧಿಕಾರಿ ನಾಗರಾಜ್ ಸ್ಥಳಪರಿಶೀಲಿಸಿದರು.