ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

JANANUDI.COM NETWORK 

 

ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

 

 

ಕುಂದಾಪುರ, ಜ.27: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಯವರು ‘ಇಂದು ದೇಶ ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಲು ಅಂಬೆಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ ಮತ್ತು ಇದನ್ನು ರಕ್ಷಿಸುವ ಜವಾವ್ದಾರಿ ಈ ದೇಶದ ಪ್ರತಿಯೊಬ್ಬ ನಾಗರಿಕರವರದಾಗಿದೆ’ ಎಂದರು.
ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿಯವರು ಇಂದಿನ ಕೇಂದ್ರ ಸರಕಾರದ ತಪ್ಪು ನೀತಿಗಳಿಂದ ದೇಶಾಧ್ಯಾಂತ ಅರಾಜಕತೆ ಉಂಟಾಗಿ ಅಭಿವ್ರದ್ದಿ ಕುಂಟಿತವಾಗಿದೆ. ಮಾತ್ರವಲ್ಲಾ ಸಂವಿಧಾನ ಅಪಾಯದಲ್ಲಿದೆ’ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಬಿ.ಹೆರಿಯಣ್ಣ ಕೆ.ಎಫ್.ಡಿ.ಸಿ. ಮಾಜಿ ಅಧ್ಯಕ್ಷರು, ವಿಕಾಸ ಹೆಗ್ಡೆ, ನಾರಯಣ ಆಚಾರಿ, ಅಬ್ದುಲ್ಲಾ ಕೋಡಿ, ಶಂಕರ ಪೂಜಾರಿ, ಪ್ರಭಾಕರ ಕೋಡಿ, ಚಂದ್ರ ಅಮೀನ್, ಸುಭಾಶ್ ಪೂಜಾರಿ, ಕಾಳಪ್ಪ ಪೂಜಾರಿ ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ವಿಠಲ ಕಾಂಚನ್, ಆರಿಫ್ ಹುಸೇನ್, ಧರ್ಮಪ್ರಕಾಶ್, ಜ್ಯೋತಿ ಮೊಗವೀರ, ಹೇಮಾ ಪೂಜಾರಿ, ರಾಘವೇಂದ್ರ, ಸಂದೇಶ, ಕೆ.ಶಿವಕುಮಾರ್, ಸ್ಟೀವನ್ ಡಿಕೋಸ್ತಾ ಹಂಗಳೂರು, ಮುನಾಫ್ ಕೋಡಿ, ಕೆ.ಪಿ.ಅರುಣ್ ಪಟೇಲ್, ಕೇಶವ ಭಟ್, ದಿನೇಶ, ಅಶೋಕ ಸುವರ್ಣ, ಸಂಪತ್ ಶೆಟ್ಟಿ, ಪಲ್ಲವಿ, ಗಣೇಶ್ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.