ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ

JANANUDI.COM NETWORK

 

ಬಿಸ್ಮಿಲ್ಲಾ ಸೀ ಫುಡ್ ಇವರಿಂದ ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಮನೆಯ ಸಾಮಾಗ್ರಿಗಳ ಕಿಟ್ ವಿತರಣೆ

 

 

ತಮಗೆಲ್ಲರಿಗೂ ತಿಳಿದ ಆಗೆ ಇಡೀ ಪ್ರಪಂಚದಲ್ಲಿ ಕೊವೀಡ್ 19 ವ್ಯಾಪಕವಾಗಿ ಹರಡಿಕೊಂಡು ಸಾವುಗಳು ಸಂಭವಿಸುತ್ತಾ ಇದೆ. ದೇಶಾದ್ಯಂತ  ಲಾಕ್ ಡೌನ್ ನಿಂದ ಸಹಸ್ರಾರು ನಿರಾಶ್ರಿತರು, ದಿನಕೂಲಿ ಕಾರ್ಮಿಕರು ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಾ ಇದ್ದಾರೆ. ಇಂತಹ ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರಿಗೆ ದಿನಗಳನ್ನು ಮುಂದೂಡಲು ತುಂಬಾ ಕಷ್ಟಕರವಾದ ಸಮಯದಲ್ಲಿ.. ಕುಂದಾಪುರ ತಾಲೂಕಿನಾಧ್ಯಂತ ಜಾತಿ ಮತ ಭೇದವಿಲ್ಲದೆ ಸುಮಾರು 300 ಕ್ಕೂ ಅಧಿಕ (ಕಿಟ್) ತಿಂಗಳ ಮನೆಯ ಸಾಮಾಗ್ರಿಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಸಾಮಾಜಿಕ ಕಳಕಳಿಯ ಕಾರ್ಯವನ್ನು  ಬಿಸ್ಮಿಲ್ಲಾ ಸೀ ಫುಡ್ ” ಇದರ ಮಾಲಿಕರಾದ  ಶ್ರೀ ರಫಿಕ್ ಗಂಗೊಳ್ಳಿ ಮಾಡಿದ್ದಾರೆ

    ಇತ್ತೀಚೆಗೆ ಸೌಧಿ ಅರೇಬಿಯಾದಲ್ಲಿ ಬಂದನಕ್ಕೊಳಗಾಗಿದ್ದ ಕೋಟೇಶ್ವರ ಬೀಜಾಡಿ ಗ್ರಾಮದ ” ಹರೀಶ ಬಂಗೇರ ” ಇವರ ಮನೆಗೆ ಶ್ರೀ ರಫಿಕ್ ಗಂಗೊಳ್ಳಿ ಇವರು ಕುಂದಾಪುರ ಕೋಡಿಯ 14 ನೇ ಬ್ಲಾಕ್ ಇದರ ಪುರಸಭೆ ಸದಸ್ಯರಾದ ಶ್ರೀ  ಹಾಗೂ ಅಷ್ಪಕ್ ಮಹಮ್ಹದ ಮುನಾಫ್  (ಕಾಂಗ್ರೆಸ್ ಕಾರ್ಯಕರ್ತ) ಇವರ ಸಹಾಯದೊಂದಿಗೆ ಕಿಟ್ ವಿತರಣೆ ಜೊತೆಗೆನೇ  ಕೋಡಿಯ ” ಮುಸ್ಲಿಂ ಯಂಗ್ ಮೆನ್ಸ್” ವತಿಯಿಂದ ಮೊತ್ತ ರೂಪಾಯಿ 6,000 ವನ್ನು ಕುಟುಂಬಕ್ಕೆ ನೀಡಿರುತ್ತೇವೆ.