ಪಿ.ಯು.ಸಿ ರಾಜ್ಯ ಮಟ್ಟದಲ್ಲಿ ರ್‍ಯಾಂಕ್ ಪಡೆದ ಸೋಹನ್ ಮತ್ತು ಭುವನ್ ಗೆ ಕುಂದಾಪುರ ವಲಯ ಕಥೊಲಿಕ್ ಸಭಾ – ಶೆವೊಟ್ ಪ್ರತಿಷ್ಠಾನದಿಂದ ಸನ್ಮಾನ

JANANUDI.COM NETWORK

ಕುಂದಾಪುರ,ಅ.5: 2019-20 ರ ಸಾಲಿನ ಪಿ.ಯು.ಸಿ.ಪರೀಕ್ಷೆಯಲ್ಲಿ ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಾದ ರಾಜ್ಯ ಮಟ್ಟದಲ್ಲಿ 7ನೇ ರ್‍ಯಾಂಕ್ ಪಡೆದ ಸೋಹನ್ ಕುಮಾರ್ ಶೆಟ್ಟಿ ಮತ್ತು 8 ನೇ ರ್‍ಯಾಂಕ್ ಪಡೆದ ಭುವನ್ ಇವರನ್ನು ಅಗೋಸ್ಟ್ 4 ರಂದು ಕುಂದಾಪುರ ವಲಯ ಕಥೊಲಿಕ್ ಸಭಾ ಸಂಘಟನೆ ಮತ್ತು ಶೆವೊಟ್ ಪ್ರತಿಷ್ಠಾನ್ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಅವರ ಮುಂದಿನ ಭವಿಸ್ಯವು ಉಜ್ವಲವಾಗಲೆಂದು ಹಾರೈಸಿದರು
ಈ ಸಂದರ್ಭದಲ್ಲಿ ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷೆ ಮೇಬಲ್ ಡಿಸೋಜಾ, ಕಾರ್ಯದರ್ಶಿ ಹೆನ್ರಿ ಮೆಲ್ವಿನ್ ಪುಟಾರ್ಡೊ, ಸರ್ಕಾರಿ ಸವಲತ್ತು ಸಂಚಾಲಕ ಹಾಗೂ ಶೆವೊಟ್ ಪ್ರತಿಷ್ಠಾನ
ಅಧ್ಯಕ್ಷ ವಿನೋದ್ ಕ್ರಾಸ್ಟೊ, ಶೆವೊಟ್ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕಿರಣ್ ಕ್ರಾಸ್ತಾ, ಕುಂದಾಪುರ ಕಥೊಲಿಕ್ ಸಭಾದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಸೋಹನ್ ಕುಮಾರ್ ಇವರ ತಂದೆ ಪುರುಷತ್ತೋಮ್ ಶೆಟ್ಟಿ ತಾಯಿ ಮಮತಾ, ಭುವನ್ ಇವರ ತಂದೆ ರಮಾನಂದ ಕೆ., ತಾಯಿ ನಿಶಾ ಮತ್ತು ಶ್ರೀವೆಂಕಟರಮಣ ಪಿ.ಯು.ಕಾಲೇಜಿನ ಉಪನ್ಯಾಸಕಿ ಮಮತಾ ರೈ ಉಪಸ್ಥಿತರಿದ್ದರು.