ದಲಿತ ಮುಖಂಡ ವ.ವೆಂಕಟೇಶ್ ರವರನ್ನು  ಠಾಣಾ ಆರಕ್ಷಕ ನಿರೀಕ್ಷಕ ಜಗಧೀಶ್ ನಿಂಧಿಸಿ, ಕೆಟ್ಟ ಪದ ಮಾತನಾಡಿ, ಕೊಲೆಯ ಬೆದರಿಕೆಕೆ ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಒತ್ತಾಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ,ಜು.22: ದಲಿತ ಮುಖಂಡರಾದ ವರದೇನಹಳ್ಳಿ ವೆಂಕಟೇಶ್ ರವರನ್ನು ಮಹಿಳಾ ಪೋಲಿಸ್ ಠಾಣಾ ಆರಕ್ಷಕ ನಿರೀಕ್ಷಕರಾದ ಜಗಧೀಶ್ ರವರು ಏಕ ವಚನದಲ್ಲಿ ನಿಂಧಿಸಿ, ಕೆಟ್ಟ ಪದಗಳನ್ನು ಮಾತನಾಡಿ, ಕೊಲೆ ಬೆದರಿಕೆ ಹಾಕಿರುವುದನ್ನು ಖಂಡಿಸಿ, ಜಗಧೀಶ್ ರವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ಕೋಲಾರ ಜಿಲ್ಲಾ ಮುಖಂಡರು ಮಾನ್ಯ ಜಿಲ್ಲಾ ಅಪರ ಜಿಲ್ಲಾ ಅಧೀಕ್ಷಕರಾದ ಜಾಹ್ನವಿ ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವರಧೇನಹಳ್ಳಿ ವೆಂಕಟೇಶ್, ದಲಿತ ನಾರಾಯಣಸ್ವಾಮಿ, ಮಾರ್ಜೇನಹಳ್ಳೆ ಬಾಬು, ಮುನೇಶ್, ಪ್ರಕಾಶ್, ಸಂದೇಶ್, ವಲ್ಲಬ್ಬಿ ಮಂಜು ಉಪಸ್ಥಿತರಿದ್ದರು.