ಜನನುಡಿ ವರದಿಯ ಫಲಶ್ರುತಿ : ಚರ್ಚ್ ರಸ್ತೆಯ ಬಿರುಕಿಗೆ ತೇಪೆಯ ದುರಸ್ತಿ ಕಾರ್ಯ

ವರದಿ: ಜೋಯ್ ಕರ್ವಾಲ್ಲೊ,ಕುಂದಾಪುರ

 

ಜನನುಡಿ ವರದಿಯ ಫಲಶ್ರುತಿ : ಚರ್ಚ್ ರಸ್ತೆಯ ಬಿರುಕಿಗೆ ತೇಪೆಯ ದುರಸ್ತಿ ಕಾರ್ಯ

 

 

 

ಕುಂದಾಪುರ, ಜೂನ್ 2:  ಕುಂದಾಪುರ ನಗರದ ಅತ್ಯಂತ ಪ್ರಮುಖ ಚರ್ಚ್ ರಸ್ತೆಯ ಇಳಿಜಾರಿನಲ್ಲಿ ಡ್ರೆನೇಜ್ ಕಾಮಾಗಾರಿಗಾಗಿ ಕಾಂಕ್ರೀಟ್ ರಸ್ತೆಯನ್ನು ಸೀಳಿದಲ್ಲಿ   ಕಳೆದ 5-6 ತಿಂಗಳಿನಿಂದ ಬಿರುಕು ಉಂಟಾಗಿ ಆ ಬಿರುಕು ದಿನೇ ದಿನೆ ದೊಡ್ಡದಾಗುತ್ತ ಸೈಕಲ್ ಮತ್ತು ದ್ವಿಚಕ್ರವಾಹನದಾರರಿಗೆ ಅಪಾಯ ತಂದೊಡ್ಡುವ ಸ್ಥಿತಿಗೆ ತಲುಪಿತ್ತು ಬಗ್ಗೆ ನಮ್ಮ ” ಜನನುಡಿ” ನ್ಯೂಸ್ ವೆಬ್ ಸೈಟ್ ಪ್ರಥಮವಾಗಿ ವರದಿ ಮಾಡಿತ್ತು.ಇದರ ಫಲಶ್ರುತಿಯಾಗಿ ಸ್ಥಳೀಯಾಡಳಿತ ಕೊನೆಗೂ ತಾತ್ಕಾಲಿಕವಾಗಿ ತೇಪೆ ಹಾಕಿ ದುರಸ್ತಿ ಕಾರ್ಯ ಮಾಡಿದೆ. ಈ ಕೆಲಸ ಎಷ್ಟು ಕಾಲ ಬಾಳುವುದೋ ಗೊತ್ತಿಲ್ಲ. ಆದರೆ ಈ ಕಾರ್ಯ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ.