ಕೋವಿಡ್ ಮಹಾಮಾರಿಗೆ ಕುಂದಾಪುರದ ಕ್ರೀಡಾಪಟು  ಕುವೈಟ್ ನಲ್ಲಿ ಬಲಿ.

ವರದಿ: ಅನು ಮಝರ್ ಕುಂದಾಪುರ

 

 

ಕುಂದಾಪುರ : ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ಸ್ ಚಾಂಪಿಯನ್,ಖ್ಯಾತ ಕಬ್ಬಡಿಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿ ಕೇರಿ ನಿವಾಸಿ ಶೇಕ್ ಮಹ್ಮದ್ ಸಯೀದ್(56)ಅವರು ಕುವೈಟ್ ನಲ್ಲಿ ಜು.16ರಂದು ನಿಧನ ರಾಗಿದ್ದಾರೆ. ಕುವೈಟ್ ನ ಕೆ.ಆರ್. ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಇವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢ ಪಟ್ಟಿತೆನ್ನಲಾಗಿದೆ. ಕಳೆದ ಸುಮಾರು 22 ದಿನಗಳಿಂದಲೂ ಕುವೈಟ್ ನ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ಇವರಿಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲವೆನ್ನಲಾಗಿದೆ. ಮೃತ ದೇಹದ ಧಫನ ಕಾರ್ಯವನ್ನು ಕುವೈಟ್ ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.   80ರ ದಶಕದಲ್ಲಿ ಕುಂದಾಪುರದ ಖ್ಯಾತ ಕ್ರೀಡಾಪಟು ವಾಗಿ ಮಿಂಚಿದ ಇವರು ಯುವ ಆಟಗಾರರಿಗೆ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಯು.ಎ. ಇ ಯಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಇವರು ಕೆಲವು ವರ್ಷಗಳ ಹಿಂದೆ ಕುವೈಟ್ ನಲ್ಲಿ ಉದ್ಯೋಗದಲ್ಲಿದ್ದರು.

ಇವರು ಪತ್ನಿ, ಮೂವರು ಪುತ್ರಿಯರು,ತಾಯಿ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.ಇವರ ಅಗಲಿಕೆಗೆ ಹಲವೆಡೆಯಿಂದ ಸಂತಾಪ ವ್ಯಕ್ತವಾಗಿದೆ.