ಕುಂದಾಪುರದಲ್ಲಿ ಸೆಕ್ಯೂಲರ್ ಧರ್ಮಗುರುಗಳ ಪಾಲಕ ಸಂತ ವಿಯಾನ್ನಿಯ ಸ್ಮರಣೆ ಧರ್ಮಗುರುಗಳಿಗೆ ಅಭಿನಂದನೆ

JANANUDI NETWORK

ಕುಂದಾಪುರದಲ್ಲಿ ಸೆಕ್ಯೂಲರ್ ಧರ್ಮಗುರುಗಳ ಪಾಲಕ ಸಂತ ವಿಯಾನ್ನಿಯ ಸ್ಮರಣೆ ಧರ್ಮಗುರುಗಳಿಗೆ ಅಭಿನಂದನೆ


ಕುಂದಾಪುರ, ಆ.4: ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಅವರ ನೆನಪಿಗಾಗಿ ಧರ್ಮಗುರುಗಳ ಸ್ಮರಣೆಯನ್ನು ಆಚರಿಸಿ ಇಗರ್ಜಿಯ ಧರ್ಮಗುರುಗಳಿಗೆ ಅಭಿನಂದಿಸಲಾಯಿತು.
ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ‘ನೀವು ನಮ್ಮನ್ನು ಸ್ವೀಕರಿಸಿದ್ದಿರಿ, ನಾವು ನಿಮ್ಮನ್ನು ಸ್ವೀಕರಿಸಿದ್ದೆವೆ, ನಮಗೆ ನಿಮ್ಮ ಸೇವೆ ಮಾಡಲು, ನಿಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು, ಹಾಗೇ ನಾವು ಪಡೆದುಕೊಂಡ ಯಾಜಕರ ಸಂಸ್ಕಾರವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಲು ನಮಗೆ ನಿಮ್ಮ ಪ್ರಾರ್ಥನೆ ಅಗತ್ಯವಿದೆ, ನಮ್ಮ ಪಾಲಕ ಸಂತ ವಿಯಾನ್ನಿ ಕಲಿಯುವಿಕೆಯಲ್ಲಿ ಹಿಂದೆ ಇದ್ದರು, ಅವರೊಬ್ಬ ಶ್ರೇಷ್ಟ ಧರ್ಮಗುರು, ಅವರ ಪ್ರವಚನದಿಂದ, ಪಾಪ ಕ್ಷಮೆಗಳಿಂದ ಹಲವಾರು ಪಾಪಿಗಳನ್ನು ಸನ್ಮಾರ್ಗಕ್ಕೆ ತಂದವರು ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮ ಕರ್ತವ್ಯ’ ಎಂದು ತಿಳಿಸಿದರು. ಅವರು ಕಾರ್ಯಕ್ರಮದ ಮೊದಲು ಧರ್ಮಗುರು ವಂ|ವಿಜಯ್ ಡಿಸೋಜಾ ದಿವ್ಯ ಬಲಿದಾನವನ್ನು ಅರ್ಪಿಸಿದರು.
ನಿವ್ರತ್ತ ಅಧ್ಯಾಪಕ ಲುವಿಸ್ ಜೆ.ಫೆರ್ನಾಂಡಿಸ್ ಧರ್ಮಗುರುಗಳಿಗೆ ಶುಭ ಕೋರಿದರು. ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, 18 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಹಾಗೂ ಭಕ್ತಾಧಿಗಳು ಕಾರ್ಯಕ್ರಮಕ್ಕೆ ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.