ಕುಂದಾಪುರದಲ್ಲಿ ರೆಡ್ ಕ್ರಾಸ್ ದಿನಾಚರಣೆ : ಲಾಖ್ ಡೌನ್  ಸ್ವಂಯ ಸೇವಕರಿಗೆ ಸನ್ಮಾನ

ವರದಿ: ವೈ.ಸೀತಾರಾಮ ಶೆಟ್ಟಿ

 

 

 

ಕುಂದಾಪುರದಲ್ಲಿ ರೆಡ್ ಕ್ರಾಸ್ ದಿನಾಚರಣೆ : ಲಾಖ್ ಡೌನ್  ಸ್ವಂಯ ಸೇವಕರಿಗೆ ಸನ್ಮಾನ

 

 

 

 

ಕುಂದಾಪುರ, ಮೇ. 9: ಮೇ 8 ರಂದು ವಿಶ್ವಾದ್ಯಾಂತ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರದಲ್ಲಿಯೂ ರೆಡ್ ಕ್ರಾಸ್ ದಿನಾಚರಣೆಯನ್ನು ರೆಡ್ ಕ್ರಾಸ್ ಸಂಸ್ಥೆಯಲ್ಲಿ ಆಚರಿಸಲಾಯಿತು.

   ಈ ಸಂದರ್ಭದಲ್ಲಿ ಕೊರೊನಾ ಕಾರಣಕ್ಕೆ ಲಾಖ್ ಡೌನ್ ಸಂದರ್ಭದಲ್ಲಿ  ಸಂಕಷ್ಟಕ್ಕೆ ಒಳಗಾದವರಿಗೆ ಆಹಾರದ ಕಿಟ್, ಸಾನಿಟರಿ ವಸ್ತುಗಳನ್ನು ವಿತರಿಸಲು ನೆರವಾದ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಗಣೇಶ್ ಆಚಾರ್ಯ, ಡಾ.ಸೋನಿ ಡಿಕೋಸ್ತಾ, ಮೊನಿಶಾ ಕರ್ವಾಲ್ಲೊ,ಅಕ್ಷತಾ ಮತ್ತು ಶ್ವೇತಾ ಭಟ್ ಇವರನ್ನು ಸಂಸ್ಥೆ ಸನ್ಮಾನಿಸಿತು.

   ಇವರುಗಳು ಕುಂದಾಪುರ  ಮತ್ತು ಬೈಂದೂರು ತಾಲ್ಲೂಕಿನ ಹಳ್ಳಿ ಹಳ್ಳಿಗಳಿಗೆ ಹೋಗಿ ಆಹಾರದ ಕಿಟಗಳು ಸಾಬೂನು, ಮಾಸ್ಕ್  ಸಾನಿಟರಿ ವಸ್ತುಗಳನ್ನು ವಿತರಿಸಲು ಸಹಕರಿಸಿದ್ದರು, ಹಾಗೇ ಕುಂದಾಪುರ ಜನ್ವೊಷಧಿ ಓಷಧಿ ಅಂಗಡಿಯಲ್ಲಿ ಸಾಮಾಜಿಕ ಅಂತರ ಕಾಪಾಡಲು ನೆರವಾಗುತಿದ್ದರು. ಈ ಸಂದರ್ಭದಲ್ಲಿ  ರೆಡ್ ಕ್ರಾಸ್ ಘಠಕದ ಸಭಾಪತಿಯವರಾದ ಎಸ್. ಜಯಕರ ಶೆಟ್ಟಿ,    ಕಾರ್ಯದರ್ಶಿ ವೈ ಸೀತಾರಾಮ್ ಶೆಟ್ಟಿ , ಖಜಾಂಚಿ ಶಿವರಾಮ ಶೆಟ್ಟಿ ಮತ್ತಿತರರು ಹಾಜರಿದ್ದರು.