ಕುಂದಾಪುರದಲ್ಲಿ ಧರ್ಮಭಗಿನಿ ರೋಸ್ಲಿಂಡಾರವರ ದೀಕ್ಷೆಯ ಸ್ವರ್ಣಮಹತ್ಸೋವ

JANANUDI NETWORK

ಕುಂದಾಪುರದಲ್ಲಿ ಧರ್ಮಭಗಿನಿ ರೋಸ್ಲಿಂಡಾರವರ ದೀಕ್ಷೆಯ ಸ್ವರ್ಣಮಹತ್ಸೋವ


ಕುಂದಾಪುರ,ಜೂ.20: ಕುಂದಾಪುರ ಹೇರಿಕುದ್ರುವಿನ ದಿವಗಂತ ಜೋನ್ ಮತ್ತು ಆಂಜೇಲಿನ್ ಗೊನ್ಸಾಲ್ವಿಸ್ ಇವರ ಪುತ್ರಿ ರೋಸ್ಲಿಂಡಾ ಇವರು ಭಗಿನಿ ದೀಕ್ಷೆಯ ಸ್ವರ್ಣ ಸ್ವರ್ಣ ಮಹತ್ಸೋವವನ್ನು ಜೂನ್ 16 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ಕ್ರತಜ್ಞತೆಯ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.
ಈ ಪವಿತ್ರ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ| ಡಾ.ಜೆರಾಲ್ಡ್ ಐಸಾಕ್ ಲೋಬೊ ಇವರ ಪ್ರಧಾನ ಯಾಜಕತ್ವದಲ್ಲಿ ಅರ್ಪಿಸಲಾಯಿತು. ರೋಸ್ಲಿಂಡಾರವರ ಸಹೋದರ ವಂ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ವಂ|ಫಾ|ಸ್ಟ್ಯಾನಿ ಬಿ.ಲೋಬೊ, ವಂ|ಫಾ| ರೋಮಿಯೊ ಲುವಿಸ್, ವಂ|ಫಾ| ರೊಯ್ಸನ್ ಫೆರ್ನಾಂಡಿಸ್, ವಂ|ಫಾ|ರೋಹನ್ ಡಾಯಸ್, ವಂ|ಫಾ|ಲುವಿಸ್ ಡೆಸಾ, ವಂ|ಫಾ|ಜೊವೆಲ್ ಒಲಿವೇರಾ ಮತ್ತು ಇತರರು ಸಹ ಬಲಿದಾನವನ್ನು ಅರ್ಪಿಸಿದರು.
ಭಗಿನಿ ರೋಸ್ಲಿಂಡಾರವರಿಗೆ ಅಭಿನಂದಿಸುವ ಕಾರ್ಯಕ್ರಮ ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಸಹೋದರ ವಂ|ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಭಗಿನಿ ರೋಸ್ಲಿಂಡಾರವರವರಿಗೆ ಶುಭ ಕೋರಿದರು. ಸಹೋದರ ಕ್ಲಿಫರ್ಡ್ ಗೊನ್ಸಾಲ್ವಿಸ್ ಅಭಿನಂದನಾ ಪತ್ರವನ್ನು ವಾಚಿಸಿದರು. ಜೊಯ್ಲಿನ್ ಗೊನ್ಸಾಲ್ವಿಸ್ ಮತ್ತು ಪಂಗಡ ಅಭಿನಂದನ ಗೀತೆಯನ್ನು ಹಾಡಿದರು. ಭಗಿನಿ ರೋಸ್ಲಿಂಡಾ ತಮ್ಮ ಅನ್ನಿಸಿಕೆಗಳನ್ನು ವ್ಯಕ್ತ ಮಾಡಿ ಅಭಿನಂದನ ಕಾರ್ಯಕ್ಕಾಗಿ ಕ್ರತಜ್ಞತೆಯನ್ನು ಸಲ್ಲಿಸಿದರು. ಕಿರಣ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಅ|ವಂ|ಸ್ಟ್ಯಾನಿ ತಾವ್ರೊ, ಗ್ಲ್ಯಾಡಿಸ್ ಗೊನ್ಸಾಲ್ವಿಸ್ ಮತ್ತು ಕುಟುಂಬದವರು ಉಪಸ್ಥಿತರಿದ್ದರು ಮರ್ಲಿನ್ ಗೊನ್ಸಾಲ್ವಿಸ್ ಧನ್ಯವಾದಗಳನ್ನು ಅರ್ಪಿಸಿದರು. ವಂ|ಫಾ|ಲುವಿಸ್ ಡೆಸಾ ಕಾರ್ಯಕ್ರಮವನ್ನು ನಿರೂಪಿಸಿದರು.