ಕುಂದಾಪುರದ ನಾಗರಿಕರಿಂದ – ಜಮ್ಮು ಕಾಶ್ಮೀರದ ಅವಂತಿ ಪೋರಾದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ

ಕುಂದಾಪುರದ ನಾಗರಿಕರಿಂದ – ಜಮ್ಮು ಕಾಶ್ಮೀರದ ಅವಂತಿ ಪೋರಾದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ

 

ಕುಂದಾಪುರ, ಫೆ.16: ಜಮ್ಮು ಕಾಶ್ಮೀರದ ಅಂತಿ ಪೋರಾದಲ್ಲಿ 40ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ನೆಡೆಸಿದ ದಾಳಿಯಲ್ಲಿ ಹುತ್ಮಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಕುಂದಾಪುರದ ಶಾಸ್ತ್ರಿ ವ್ತತ್ತದಲ್ಲಿ ನೆಡೆಯಿತು

ಸಂಜೆ ವಿವಿಧ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ಕುಂದಾಪುರದ ನಾಗರಿಕರು ಜಾತಿ ಮತ ಬೇದವಿಲ್ಲದೆ, ಶಾಸ್ತ್ರಿ ಸರ್ಕಲ್ ಹಾಗೂ ತಾಲೂಕು ಪಂಚಾಯತ್  ಎದುರು ಜಮಾಯಿಸಿದರು. ನಂತರ ಅಲ್ಲಿಂದ ನಾಗರಿಕರು ಉರಿಯುವ ಮೇಣದ ಜ್ಯೋತಿಯೊಂದಿಗೆ,  ಶಾಸ್ತ್ರಿ ಸರ್ಕಲ್ ನಿಂದ , ಹೂವಿನ ಮಾರ್ಕೆಟ್ ತನಕ ಸಾಗಿ ಅಲ್ಲಿಂದ ತಿರುಗಿ ಪುನ ಶಾಸ್ತ್ರಿ ಪಾರ್ಕ್ ಗೆ ಮೆರವಣಿಗೆ ಮೂಲಕ ಸಾಗಿ, ಶಾಸ್ತ್ರಿ ವ್ರತ್ತದಲ್ಲಿ  ಸೇರಿತು.

    ಅಲ್ಲಿ ಜನನಾಯಕರು ಯೋಧರಿಗೆ ಶ್ರದ್ದಾಂಜಲಿಯ ಮಾತುಗಳನ್ನಾಡಿದರು. ಮತ್ತು ವೀರ ಮರಣವನ್ನಪ್ಪಿದ ಯೋಧರಿಗಾಗಿ ಒಂದು ನಿಮಿಷ ಮೌನವನ್ನು ಪ್ರಾರ್ಥನೆ ಮಾಡಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರಲಾಯಿತು. ಈ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಎಲ್ಲಾ ರಾಜಕೀಯ ನಾಯಕರು ಸದಸ್ಯರು, ಹಾಗೂ ಹಲವಾರು ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಕುಂದಾಪುರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.