ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ‌ಪೂರ್ವ ಕಾಲೇಜಿನಲ್ಲಿ‌ ವೃತ್ತಿ‌ ಮಾರ್ಗದರ್ಶನ- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಉಪನ್ಯಾಸ

JANANUDI.COM NETWORK 

 

 

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ‌ಪೂರ್ವ ಕಾಲೇಜಿನಲ್ಲಿ‌ ವೃತ್ತಿ‌ ಮಾರ್ಗದರ್ಶನ- ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಉಪನ್ಯಾಸ

 

                      

ಕುಂದಾಪುರ, ಡಿ.4: ಮಂಗಳೂರಿನ ಹೆಸರಾಂತ ಗಣಿತ ಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಬೊಸ್ಕೋ ಸಮೂಹ ಸಂಸ್ಥೆಗಳ ಸ್ಥಾಪಕರೂ ಆದ ಪ್ರೊ. ಎಸ್. ಎಸ್. ಬೊಸ್ಕೋ ರವರು  ದಿನಾಂಕ-02-01-2020 ರಂದು ಕುಂದಾಪುರದ‌ ಆರ್. ಎನ್.‌ ಶೆಟ್ಟಿ‌ ಪದವಿ‌ ಕಾಲೇಜಿನ ವಿದ್ಯಾರ್ಥಿಗಳಿಗೆ  ತಮ್ಮ ನೈಪುಣ್ಯತೆಯನ್ನು ಕಾಯ್ದುಕೊಳ್ಳಲು ಬೇಕಾದ ಜೆ.ಇ.ಇ ಮತ್ತು ಸಿ.ಇ.ಟಿ ಯಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ಕ್ರಷ್ಟ ದರ್ಜೆಯನ್ನು ಪಡೆಯಲು  ಸುಲಭ ವಿಧಾನಗಳನ್ನು ತಿಳಿಸಿ ಉದ್ಯೋಗಾಧಾರಿತ ಉನ್ನತ ವ್ಯಾಸಂಗದ ಬಗ್ಗೆ ಮಾರ್ಗದರ್ಶನ ನೀಡಿದರು.
ಬೆಂಗಳೂರಿನ‌ ಗುಂಬಿ‌ ಸಾಫ್ಟ್ ವೇರ್ ಇದರ ಅಕಾಡೆಮಿಕ್ ಆಪರೇಶನ್ಸ್ ಮ್ಯಾನೇಜರ್ ಡಾ. ಎಸ್ ತಿಪ್ಪೇಸ್ವಾಮಿ, ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಜಗದೀಶ್ ಶೆಟ್ಟಿ, ಮಂಗಳೂರಿನ ಗುಂಬಿ‌ ಸಾಫ್ಟ್ ವೇರ್ ನ ಸ್ಟುಡಿಯೋ ಇಂಜಿನೀಯರ್ ಶ್ರೀ ಸಂದೇಶ್ ಶಾನುಭೋಗ್- ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಸ್ವಾಗತಿಸಿದರು. ದ್ವಿತೀಯ ಪಿ.ಯು.ಸಿ‌ಯ ಅಭಿಲಾಷ್ ಹತ್ವಾರ್ ಧನ್ಯವಾದ ಸಲ್ಲಿಸಿದರು.