ಕುಂದಾಪುರ ಹೆಮ್ಮಾಡಿ: ಮಹಿಳೆ ನಿಗೂಢ ಸಾವು – ಚಿನ್ನದ ಸರ ಕಣ್ಮರೆ – ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು- ಪೊಲೀಸರು ಸಾವಿನ ಬಗ್ಗೆ ತನಿಖೆ

ಕುಂದಾಪುರ ಹೆಮ್ಮಾಡಿ: ಮಹಿಳೆ ನಿಗೂಢ ಸಾವು – ಚಿನ್ನದ ಸರ ಕಣ್ಮರೆ – ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು- ಪೊಲೀಸರು ಸಾವಿನ ಬಗ್ಗೆ ತನಿಖೆ

 

ಕುಂದಾಪುರ,ಮಾ.1: ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಮನೆಯೊಂದರಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಫೆ.28 ರ ಗುರುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇವರು ಕಟ್‌ಬೆಲ್ತೂರು ನಿವಾಸಿ ದಿವಂಗತ ನಾಗೇಶ್ ಎಂಬುವರ ಪತ್ನಿ ಗುಲಾಬಿ 55 ಇವರ ಸಾವು ಅನುಮಾಸ್ಪದವಾಗು ಕಂಡು ಬಂದಿದೆ.  

        ದಿವಗಂತ ನಾಗೇಶ್ ಹೋಟೆಲ್ ಉದ್ಯಮ ನಡೆಸಿಕೊಂಡಿದ್ದು ಐದು ವರ್ಷಗಳ ಹಿಂದೆ ಸಾವನ್ನಪ್ಪಿದ ಬಳಿಕ ಗುಲಾಬಿಯವರು  ಮನೆ ಸಮೀಪ ಮೀನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಯವನಾದ ನಾಗರಾಜ ಮದುವೆಯಾಗಿ ಮುಂಬಯಲ್ಲಿ ನೆಲೆಸಿದ್ದಾನೆ. ಎರಡನೆ ಮಗ ನಟರಾಜ್ ಬೆಂಗಳೂರಿನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಗುಲಾಬಿ ಒಬ್ಬರೇ ಇದ್ದು, ಸ್ಥಳೀಯರಿಗೆ ಮೀನು ಮಾರುತ್ತಿದ್ದರು ಎಂದು ತಿಳಿದು ಬಂದಿದೆ.

ಸಮೀಪದ ನಿವಾಸಿಯಾಗಿರುವ ಶಿವರಾಮ ಎಂಬುವರು ಇವರಿಂದ ದಿನಾಲೂ ಮೀನು ಖರೀದಿಸುತಿದ್ದರು.  ಶುಕ್ರವಾರ ಬೆಳಿಗ್ಗೆಯಾದರೂ ಗುಲಾಬಿ ಬಾಗಿಲು ತೆರೆಯದೇ ಇದ್ದುದರಿಂದ ಅನುಮಾನಗೊಂಡ ಶಿವರಾಮ ಸುಮಾರು 10.30ರ ಸಮಯಕ್ಕೆ ಗುಲಾಬಿಯವರ ಮನೆಯ ಬಾಗಿಲು ತಟ್ಟಿದ್ದು, ಎನೊಂದು ಪ್ರತಿಕ್ರಿಯೆ ಬಾರದಿದ್ದಾಗ  ಒಳಗಿಂದ ಚಿಲಕ ಹಾಕದೇ ಇದ್ದದು, ಕಂಡು  ಒಳಗೆ ನೋಡಿದಾಗ ಬೆಡ್‌ರೂಮಿನಲ್ಲಿ ಗುಲಾಬಿ ಮಲಗಿದ ಸ್ಥಿತಿಯಲ್ಲಿಯೇ ಇದ್ದರು. ಕರೆದರೂ ಏಳದ ಕಾರಣ ಅನುಮಾನಗೊಂಡ ಶಿವರಾಮ ಅವರು ಮನೆ ಸಮೀಪದಲ್ಲಿರುವ ಗುಲಾಬಿಯ ತಂಗಿಗೆ ಸುದ್ಧಿ ಮುಟ್ಟಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.

ಅನುಮಾನಾಸ್ಪದ ಸಾವು :  ಸ್ಥಳೀಯರ ಪ್ರಕಾರ ಆಕೆ ಪ್ರತಿ ದಿನ ನಾಲ್ಕೂವರೆ ಪವನ್ ತೂಕದ ಸರ ಧರಿಸುತ್ತಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಬೆಳಿಗ್ಗೆ ಆಕೆಯ ಕುತ್ತಿಗೆಯಲ್ಲಿ ಸರ ಇಲ್ಲದೇ ಇರುವುದು ಸಾವಿನ ಬಗ್ಗೆ ಅನುಮಾನ ಕಾಡತೊಡಗಿದೆ.  ಮನೆಯೊಳಗಡೆ ಸಿಗರೇಟಿನ ಧೂಳು ಬಿದ್ದಿತ್ತು, ರಾತ್ರೆ ಯಾರೋ ಅಗತುಂಗರು  ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೇ ಇದರ ಬಗ್ಗೆ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಅನುಮಾನಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡು  ತನಿಖೆ ಆರಂಭಿಸಿದ್ದಾರೆ.

  ಘಟನಾ ಸ್ಥಳಕ್ಕೆ ಸಹಾಯಕ ಎಸ್ಪಿ, ಡಿವೈಎಸ್ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಕುಂದಾಪುರ ಠಾಣೆಯ ಎಸೈ ಹರೀಶ್ ಆಗಮಿಸಿ ಪರಿಶೀಲನೆ ನಡೆಸಿದ್ದು. ಪೊರೆನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತೊರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಿಲಾಗಿದೆ ಎಂದು ತಿಳಿದು ಬಂದಿದೆ..