ಕುಂದಾಪುರ: ಲಾಕ್ ಡೌನ್  ಫ್ರಿ ಸಮಯದಲ್ಲಿ ಒಷಧಿ  ತರಕಾರಿ , ಗ್ರೋಸರಿ, ಬೇಕರಿ ಅಂಗಡಿಗಳಲ್ಲಿ ಅಂಚೆ ಕಚೇರಿಯಲ್ಲಿ ಜನರ ಸಾಲೇ ಸಾಲು

JANANUDI.COM NETWORK

 

ಕುಂದಾಪುರ: ಲಾಕ್ ಡೌನ್  ಫ್ರಿ ಸಮಯದಲ್ಲಿ ಒಷಧಿ  ತರಕಾರಿ , ಗ್ರೋಸರಿ, ಬೇಕರಿ ಅಂಗಡಿಗಳಲ್ಲಿ ಅಂಚೆ ಕಚೇರಿಯಲ್ಲಿ ಜನರ ಸಾಲೇ ಸಾಲು

 

 

ಕುಂದಾಪುರ, ಎ.8: ಇವತ್ತು ಲಾಕ್ ಡೌನ್ ಫ್ರಿ ಸಮಯದ ವೇಳೆ ಕುಂದಾಪುರ ನಗರದಲ್ಲಿ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಅವಶ್ಯಕತೆಯ ಸಾಮಾಗ್ರಿಗಳನ್ನು ಖರೀದಿಸುವರನ್ನು  ಕಾಣಾಲಾಯಿತು.

   ಅದರಲ್ಲಿಯೂ ಎಲ್ಲಾ ಓಷಧಿ ಅಂಗಡಿಗಳಲ್ಲಿ ಜನರ ಸಾಲಾಗಿ ನಿಂತಿದ್ದರು. ಜನಓಷಧಿ ಶಾಪ್ ನಲ್ಲಿ ವಿಪರೀತ ಜನ ಜಮಾಯಿಸಿದ್ದರು. ಹಾಗೆಯೇ ತರಕಾರಿ ಅಂಗಡಿಗಳಲ್ಲಿ ಕೂಡ ಜನರು ಸಾಲು ಸಾಲಾಗಿ ಕಾಯುತಿದ್ದರು. ಇವತ್ತಿನಿಂದ ಕುಂದಾಪುರದಲ್ಲಿ ಬೇಕರಿಗಳು ತೆರಿದ್ದು ಸರಕಾರವು ನಿನ್ನೆಯಿಂದಲೇ ಬೇಕರಿಗಳನ್ನು ತೆರೆದಿಡಲು ಅನುಮತಿ ನೀಡಿರುತ್ತದೆ

  ಅಂಚೆ ಕಚೇರಿಯಲ್ಲಿ   ಕೂಡ ಆರ್.ಡಿ. ಕಟ್ಟುವ ಬಗ್ಗೆ ಮತ್ತು ಇನ್ನಿತರ ಕೆಲಸಕ್ಕಾಗಿ  ಜನರ ತುಂಬ ದೊಡ್ಡ  ರೀತಿಯಲ್ಲಿ ಸಾಲು ಕಟ್ಟಿ ನಿಂತಿದ್ದರು.