ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒ.ಸೊಸೈಟಿ ಇವರಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಗೌರವ

JANANUDI NETWORK

ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒ.ಸೊಸೈಟಿ ಇವರಿಂದ ಸಹಕಾರಿ ಕ್ಷೇತ್ರದ ಸಾಧಕರಿಗೆ ಗೌರವ


ಕುಂದಾಪುರ, ಜೂ.29: ಸಹಾಕಾರಿ ಕ್ಷೇತ್ರದಲ್ಲಿ ಅಭಿವ್ರದ್ದಿಯ ಪಥದಲ್ಲಿ ಸಾಗುತ್ತಿರುವ ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒಪರೇಟಿವ್ ಸೊಸೈಟಿ ಲಿ. ಇವರಿಂದ ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ನೀಡಿ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಇತ್ತೀಚೆಗೆ ಸಹಕಾರಿ ಕ್ಷೇತ್ರದಲ್ಲಿ ತಮ್ಮದೆ ಛಾಪನ್ನು ಹೊಂದಿರುವ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಗೆದ್ದು ನಿರ್ದೇಶಕರಾಗಿ ಆರಿಸಿ ಬಂದ ಸಾಧಕರಾದ ಎಸ್.ರಾಜು ಪೂಜಾರಿ ಮತ್ತು ಕೆ. ಜಯರಾಜ್ ಬಿ.ರೈ, ಹಾಗೂ ಮಹೇಶ್ ಹೆಗ್ಡೆ ಇವರನ್ನು ಕುಂದಾಪುರ ರೋಜರಿ ಕ್ರೆಡಿಟ್ ಕೋ.ಒ.ಸೊಸೈಟಿಯ ಸಭಾ ಭವನದಲ್ಲಿ ರೋಜರಿ ಕ್ರೆಡಿಟ್ ಕೋ.ಒ.ಸೊಸಾೈಟಿಯ ಅಧ್ಯಾತ್ಮಿಕ ನಿರ್ದೇಶಕರಾದ ಕುಂದಾಪುರ ವಲಯದ ಪ್ರಧಾನರಾದ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ, ತಾವ್ರೊ ರೋಜರಿ ಸೊಸೈಟಿಯ ಅಧ್ಯಕ್ಷರಾದ ಜೊನ್ಸನ್ ಡಿಆಲ್ಮೇಡಾ ಮತ್ತು ನಿರ್ದೇಶಕರು ಫಲ ಪುಷ್ಪ ನೀಡಿ ಗೌರವಿಸಿ ಸನ್ಮಾನಿಸಿದರು.
ಸಾಧಕರಾದ ಎಸ್.ರಾಮ ಪೂಜಾರಿ ಪ್ರಸ್ತೂತ ಇವರು ಮರವಂತೆ ಬಡಾಕೆರೆ ವ್ಯ.ಸೇ. ಸ. ಸಂಘ ನಿಯಮಿತ ಇದರ ಅಧ್ಯಕ್ಷರು, 1995 ರಿಂದ ಸತತ 14 ವರ್ಷ ಸೇವೆ ಸಲ್ಲಿಸಿದ್ದಾರೆ. ಮತ್ತು ಕೆ. ಜಯರಾಜ್ ಬಿ.ರೈ ವಿಜಯ ಬ್ಯಾಂಕನಲ್ಲಿ 1971 ರಿಂದ ಸೇವೆ ಸಲ್ಲಿಸುತ್ತಾ ನಂತರ ಹಲವಾರು ಸಹಾಕಾರಿ ಕೋ.ಒ.ಸೊಸೈಟಿಗಳಲ್ಲಿ ನಿರ್ದೇಶಕ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಸನ್ಮಾನ ಮಾಡಿದ ಅತೀ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೊ ಸಹಕರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ನೀವು ಒಬ್ಬರಿಂದ ಒಬ್ಬರಿಗೆ ಸಹಕಾರ ನೀಡುತ್ತಾ, ಸಮಾಜದ ಒಳಿತಿಗಾಗಿ ಶ್ರಮಿಸಿರಿ’ ಎಂದು ಶುಭ ಹಾರೈಸಿದರು. ರೋಜರಿ ಸೊಸೈಟಿಯ ಅಧ್ಯಕ್ಷರಾದ ಜೊನ್ಸನ್ ಡಿಆಲ್ಮೇಡಾ ‘ಸಾಧಕರೆ ನೀವು ಸಮಾಜಕ್ಕೆ ಸಹಕಾರಿ ಕ್ಶೇತ್ರದಿಂದ ಸಮಾಜಕ್ಕೆ ಒಳಿತನ್ನು ಮಾಡುತ್ತಾ ಬಂದಿದ್ದಿರಿ, ನಮ್ಮೆಲ್ಲರ ಸಹಕಾರ ಮನೋಭಾವದಿಂದ ಸಹಕಾರದಿಂದ ಸಮಾಜಕ್ಕೆ ಒಳಿತನ್ನು ಮಾಡಲು ಶ್ರಮಿಸುವ’ ಎಂದು ಸಂದೇಶ ನೀಡಿದರು. ಎಸ್.ರಾಮ ಪೂಜಾರಿ ಮತ್ತು ಕೆ. ಜಯರಾಜ್ ಬಿ.ರೈ, ತಮ್ಮ ಅನ್ನಿಸಿಕೆಯನ್ನು ವ್ಯಕ್ತ ಪಡಿಸಿ ಕ್ರತ್ಞತೆಯನ್ನು ಸಲ್ಲಿಸಿದರು.
ರೋಜರಿ ಕ್ರೆಡಿಟ್ ಕೋ.ಒ.ಸೊಸೈಟಿಯ ನಿರ್ದೇಶಕರಾದ ಜೆರಾಲ್ಡ್ ಕ್ರಾಸ್ತಾ ಮತ್ತು ಕಿರಣ್ ಲೋಬೊ ಸಾಧಕರ ಪರಿಚಯವನ್ನು ನೀಡಿದರು. ಉಪಾಧ್ಯಕ್ಷರಾದ ಜೋನ್ ಮಿನೇಜೆಸ್, ನಿರ್ದೇಶಕರಾರ ಸ್ಟ್ಯಾನಿ ಡಿಸೋಜಾ, ವಿನೋದ್ ಕ್ರಾಸ್ಟೊ, ಶಾಂತಿ ಕರ್ವಾಲ್ಲೊ, ಕುಂದಾಪುರ ಶಾಖೆ ವ್ಯವಸ್ಥಾಪಕಿ ಮೇಬಲ್ ಡಿಆಲ್ಮೇಡಾ ಮತ್ತು ಇತರರು ಉಪಸ್ಥಿತರಿದ್ದರು, ನಿರ್ದೇಶಕ ಜೇಕಬ್ ಡಿಸೋಜಾ ಸ್ವಾಗತಿಸಿದರು. ನಿರ್ದೇಶಕಿ ಡಯಾನಾ ಡಿಆಲ್ಮೇಡಾ ವಂದಿಸಿದರು, ರೋಜರಿ ಕ್ರೆಡಿಟ್ ಕೋ.ಒ. ಸೊಸೈಟಿಯ ನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.