ಕುಂದಾಪುರ: ಪೆಬ್ರುವರಿ 12ರಂದು ಮಧ್ಯಾಹ್ನ 2ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

JANANUDI.COM NETWORK

 

ಕುಂದಾಪುರ: ಪೆಬ್ರುವರಿ 12ರಂದು ಮಧ್ಯಾಹ್ನ 2ಗಂಟೆಗೆ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ವರ್ಷದ ಗಮಕ ವಾಚನ ಪ್ರಶಸ್ತಿಯು ಸುರತ್ಕಲ್ ಇಡ್ಯಾ ವಿದ್ಯಾದಾಯಿನಿ ಹಿರಿಯ ಶಾಲೆಯ ಮುಖ್ಯೋಧ್ಯಾಪಕರಾಗಿ ನಿವೃತ್ತರಾದ ಶ್ರೀ ಹೆಚ್.ಯಜ್ಞೇಶ ಆಚಾರ್ ಇವರಿಗೆ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿಯು ಮೈಸೂರಿನ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಉಪನ್ಯಾಸಕರಾಗಿರುವ ಡಾ.ಜ್ಯೋತಿ ಶಂಕರ್ ಇವರಿಗೆ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹೆಚ್.ಶಾಂತಾರಾಮ್, ಆಡಳಿತಾಧಿಕಾರಿಗಳು, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ ಇವರು ವಹಿಸಲಿದ್ದಾರೆ.
ಗಮಕ ವಾಚನ ಪ್ರಶಸ್ತಿ ವಿಜೇತ ಶ್ರೀ ಹೆಚ್.ಯಜ್ಞೇಶ ಆಚಾರ್ ಮತ್ತು ಗಮಕ ವ್ಯಾಖ್ಯಾನ ಪ್ರಶಸ್ತಿ ವಿಜೇತ ಡಾ.ಜ್ಯೋತಿ ಶಂಕರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂದು ಬೆಳಿಗ್ಗೆ 11ಗಂಟೆಗೆ ಶಿವಮೊಗ್ಗದ ಡಿ.ವಿ.ಎಸ್ ಕಾಲೇಜಿನ ಅಚ್ಯುತ ಅವಧಾನಿ ಅವರು ಗಮಕ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಗೆ ಡಾ. ಹೆಚ್.ಶಾಂತಾರಾಮ್ ಗಮಕ ವಾಚನ –ವ್ಯಾಖ್ಯಾನ ಪ್ರಶಸ್ತಿ ಪುರಸ್ಕøತರಿಂದ ಗಮಕ ವಾಚನ –ವ್ಯಾಖ್ಯಾನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.