ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ

JANANUDI.COM NETWORK

 

ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘದಿಂದ  ಸ್ಥಾಪಕ ಸದಸ್ಯ ಉಮೇಶ್ ಗೆ ಆರೋಗ್ಯ ಪರಿಹಾರದ ಮೊತ್ತ   

 

 

ಕುಂದಾಪುರ, ಜೂ.22: ಕುಂದಾಪುರ ತಾಲೂಕು ಆಟೊ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (CITU) ಇದರ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮತ್ತು ಸಂಘದ ಚಟುವಟಿಕೆಗಳಲ್ಲಿ ಇಂದಿಗು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಮೇಶ್ ಎನ್. ಅವರು ಇತ್ತೀಚೆಗೆ ಕಸ್ತುರ್ಬ ಆಸ್ಪತ್ರೆ ಮಣಿಪಾಲ ಇಲ್ಲಿ ಹ್ರದಯ ಚಿಕಿತ್ಸೆಗೆ ಒಳಗಾಗಿದ್ದು.ಅವರಿಗೆ ನಮ್ಮ ಸಂಘದವತಿಯಿಂದ ನೀಡುವ ಆರೋಗ್ಯ ಪರಿಹಾರದ ಮೊತ್ತ ರೂಪಾಯಿ 20,000/- ದ ಚೆಕ್ ನ್ನು ಇಂದು ಶಾಸ್ತ್ರಿ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ ಸಂಘದ ಹಿರಿಯ ಸದಸ್ಯರಾದ ಕ್ರಷ್ಣರವರು ನೀಡಿದರು.

   ಸಂಘದ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ,ಸಂಘಟನ ಕಾರ್ಯದರ್ಶಿ ರಮೇಶ್ ವಿ.,ರಮೇಶ ಬೆಟ್ಟಾಗರ ಹಾಗೂ ಮುಂತಾದ ಸದಸ್ಯರು ಪಾಲ್ಗೊಂಡಿದ್ದರು.