ಕುಂದಾಪುರ ಕಥೊಲಿಕ್ ಸಭೆಯಿಂದ ಮಾಜಿ ಶಾಸಕಿ ವಿನ್ನಿಫ್ರೆಡ್ ಪೆರ್ನಾಂಡಿಸ್ ರವರಿಗೆ ಶ್ರದ್ದಾಂಜಲಿ

JANANUDI.COM NETWORK 

 

 

 

ಕುಂದಾಪುರ ಕಥೊಲಿಕ್ ಸಭೆಯಿಂದ ಮಾಜಿ ಶಾಸಕಿ ವಿನ್ನಿಫ್ರೆಡ್ ಪೆರ್ನಾಂಡಿಸ್ ರವರಿಗೆ ಶ್ರದ್ದಾಂಜಲಿ 

 

 

 

 

ಕುಂದಾಪುರ, ಎ.29: ನಿಧನ ಹೊಂದಿದ ಮಾಜಿ ಶಾಸಕಿ ವಿನ್ನಿಫ್ರೆಡ್ ಪೆರ್ನಾಂಡಿಸ್ ರವರಿಗೆ ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅವರ ಸ್ವಗ್ರಹದಲ್ಲಿ ಶ್ರದ್ದಾಂಜಲಿ ಅರ್ಪಿಸಿತು.
ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷ ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ ಶ್ರದ್ದಾಂಜಲಿ ಅರ್ಪಿಸುತ್ತಾ ‘ಶ್ರೀಮತಿ ವಿನ್ನಿಫ್ರೆಡ್ ಪೆರ್ನಾಂಡಿಸ್ ಒರ್ವ ಧೀಮಂತ ದಿಟ್ಟ ನಿಲುವಿನ ನೇರ ನುಡಿಯ ಪ್ರಭಾವಿಶಾಲಿ ರಾಜಕಾರಣಿ, ಉಡುಪಿ ಕುಂದಾಪುರ ಭಾಗದಲ್ಲಿ ಒರ್ವ ರಾಜಕಾರಣಿಯಾಗಿ ಅಭೂತಪೂರ್ವ ಯಶಸ್ಸನ್ನು ಗಳಿಸಿಕೊಂಡಿರುವ ಮಹಾನ್ ಪ್ರತಿಭೆ. ಅಂದಿನ ಕಾಲದಲ್ಲಿ ಕೆಲವೇ ಕೆಲವು ನಾರಿ ರಾಜಕಾರಣಿಗಳಲ್ಲಿ ಬಹಳ ಜನಪ್ರಿಯರಾಗಿದ್ದರು. ಎರಡು ಅವಧಿ ಶಾಸಕಿಯಾಗಿ ಮತ್ತು ಒಂದು ಅವಧಿ ಎಮ್ ಎಲ್ ಸಿ ಯಾಗಿ ಆರಿಸಿ ಬಂದ ಅವರು ಹಲವಾರು ಜನಪರ ಕೆಲಸಗಳನ್ನು ಮಾಡಿದ್ದರು, ಗುಡ್ ಪ್ರೈಡೆಗೆ ರಜೆ ಸಿಗಬೇಕೆಂದು ಅವರು ವಿಧಾನ ಸಭೆಯಲ್ಲಿ ಮನವಿ ಮಾಡಿದಾಗ ಅದಕ್ಕೆ ಸಭೆಯಲ್ಲಿ ಮನ್ನಣೆ ಸಿಗದಿದ್ದಾಗ, ಅವರು ಸಭೆಯನ್ನು ತ್ಯಾಗ ಮಾಡಿ ಹೊರನಡೆದಿದ್ದರು. ನಂತರದ ವರ್ಷಗಳಲ್ಲಿ, ಗುಡ್ ಪ್ರೈಡೆ ರಜಾ ದಿವಸವಾಗಿ ಮಾರ್ಪಟಿತು, ಅವರು ಕ್ರೈಸ್ತ ಸಮುದಾಯದ ಒರ್ವ ಶ್ರೇಷ್ಠ ರಾಜಕಾರಣಿಯಾಗಿದ್ದರೂ, ಕೂಡ ಅವರು ಜಾತಿ ಮತ ಭೇದ ಭಾವವಿಲ್ಲದೆ, ಸ್ಪಂದಿಸುತ್ತಾ, ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಕ್ಷೇತ್ರದ ಏಳಿಗಾಗಿ ಶ್ರಮಿಸಿದವರು. ಎಲ್ಲಾ ರಾಜಕಾರಣಿಗಳು ಇವರನ್ನು ಗೌರವಯುತವಾಗಿ ಕಾಣುತಿದ್ದರು, ಇಂತಹ ರಾಜಾಕಾರಣಿಯನ್ನು ಕಳೆದುಕೊಂಡದ್ದು ಸಮಾಜಕ್ಕೆ ಬಹು ದೊಡ್ಡ ನಷ್ಟವಾಗಿದೆ’ ಎನ್ನುತ್ತಾ ದುಖಿತ ಕುಟುಂಬಕ್ಕೆ ದುಖವನ್ನು ಸಹಿಸಿಕೊಳ್ಳಲು ದೇವರು ಶಕ್ತಿ ನೀಡಲಿ’ ಎಂದು ಕಥೊಲಿಕ್ ಸಭಾ ಸಮಿತಿಯ ಪರವಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಕುಂದಾಪುರ ಘಟಕದ ಪದಾಧಿಕಾರಿಗಳಾದ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ, ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜಾ, ಸಹ ಕಾರ್ಯದರ್ಶಿ ವಿನಯಾ ಡಿಕೋಸ್ತಾ, ಖಜಾಂಚಿ ಶೈಲಾ ಡಿಆಲ್ಮೇಡಾ, ಸಹ ಖಜಾಂಚಿ ಲೋನಾ ಲುವಿಸ್, ರಾಜಕೀಯ ಸಂಚಾಲಕ ಜಾನ್ಸನ್ ಡಿಆಲ್ಮೇಡಾ, ಕಥೊಲಿಕ್ ಸಭಾ ಸಮಿತಿಯ ಸದಸ್ಯೆ ವಿನ್ನಿಫ್ರೆಡ್ ಪೆರ್ನಾಂಡಿಸ್ ಮಗಳಾದ ಶಾಲೆಟ್ ರೆಬೆಲ್ಲೊ ಉಪಸ್ಥಿತರಿದ್ದರು.