ಕುಂದಾಪುರ ಕಥೊಲಿಕ್ ಸಭಾದಿಂದ ಸರಕಾರಿ ಅಧಿಕಾರಿ ಥಿಮೋತಿಯವರಿಗೆ ನುಡಿನಮನ

JANANUDI.COM NETWORK

ಕುಂದಾಪುರ, ಅ.11: ಮಹಾರಾಷ್ಟ್ರ ಸಾರಿಗೆ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ, ಕಥೊಲಿಕ್ ಸಭಾದ ಮುಂದಾಳುಗಳಾದ ಜೋನ್ಸನ್ ಡಿಆಲ್ಮೇಡಾ ಮತ್ತು ಜೂಲಿಯೆಟ್ ಪಾಯ್ಸ್ ತಂದೆಯವರಾದ ದಿವಗಂತ ಥಿಮೋತಿ ಡಿಆಲ್ಮೇಡಾ ಇವರಿಗೆ ಕುಂದಾಪುರ ಕಥೊಲಿಕ್ ಸಭಾದಿಂದ ನುಡಿನಮನ ಸಲ್ಲಿಸಲಾಯಿತು. ಕುಂದಾಪುರ ಕಥೊಲಿಕ್ ಸಭಾದಾಧ್ಯಕ್ಷ ಬರ್ನಾಡ್ ಡಿಕೋಸ್ತಾ ನುಡಿನಮನಸಲ್ಲಿಸಿದರು.
ಈ ಸಂದರ್ಭದಲ್ಲಿ ಕಥೊಲಿಕ್ ಸಭೆಯ ಮುಂದಾಳುಗಳಾದ ಪ್ರೇಮಾ ಡಿಕುನ್ಹಾ, ವಿನೋದ್ ಕ್ರಾಸ್ಟೊ, ಶೈಲಾ ಡಿಆಲ್ಮೇಡಾ, ಶಾಲೆಟ್ ರೆಬೆಲ್ಲೊ, ಮಾರ್ಕ್ ಡಿಸೋಜಾ, ಉಲ್ಲಾಸ್ ಕ್ರಾಸ್ತಾ, ನಿರ್ಮಲ ಡಿಸೋಜಾ ಹಾಜರಿದ್ದರು. ಮಂಗಳೂರಿನ ಮಾಜಿ ಶಾಸಕ ಜೆ.ಆರ್ ಲೋಬೊ,ಮತ್ತು ಇತರ ಹಲವಾರು ಗಣ್ಯರು ಕೂಡ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು.
ಥಿಮೋತಿ ಡಿಆಲ್ಮೇಡಾ ದಿವಂಗತ ಖ್ಯಾತ ಗ್ರೇಸಿ ಟಿಚರ್ ಪತಿಯಾಗಿದ್ದು, ಅವರು ಜೂಲಿಯೆಟ್/ದಿ.ಎಡ್ವರ್ಡ್ ಪಾಯ್ಸ್, ಜೋನ್ಸನ್/ ಲವೀನಾ ಡಿಆಲ್ಮೇಡಾ, ಶರ್ಮಿಳಾ/ಟೈರನ್ ಸುವಾರಿಸ್, ಸಂಧ್ಯಾ/ ಜೀವನ್ ಡಿಸೋಜಾ ಹೀಗೆ ಮಕ್ಕಳು,ಸೊಸೆ ಮತ್ತು ಅಳಿಯಂದಿರನ್ನು ಅಗಲಿದ್ದಾರೆ.