ಕಿನ್ನಗೋಳಿಯಲ್ಲಿ  ಕೇವಲ ಒಂದು ಮರಕ್ಕಾಗಿ ಹಾಡುಹಗಲೇ ದಂಪತಿಯನ್ನು  ಕೊಚ್ಚಿ ಬರ್ಬರವಾಗಿ ಕೊಂದನು ನೆರೆಮನೆಯ ವ್ಯಕ್ತಿ

JANANUDI.COM NETWORK 

 

 

 

ಕಿನ್ನಗೋಳಿಯಲ್ಲಿ  ಕೇವಲ ಒಂದು ಮರಕ್ಕಾಗಿ ಹಾಡುಹಗಲೇ ದಂಪತಿಯನ್ನು  ಕೊಚ್ಚಿ ಬರ್ಬರವಾಗಿ ಕೊಂದನು ನೆರೆಮನೆಯ ವ್ಯಕ್ತಿ

 

 

 

 

 

ಕಿನ್ನಗೋಳಿಯ ಕಿನ್ನಗೋಳಿ ಏಳಿಂಜೆಯಲ್ಲಿ  ಕೇವಲ ಒಂದು ಮರಕ್ಕಾಗಿ ವೈಮನಸಿನಿಂದ ಹಾಡುಹಗಲಲ್ಲೇ ದಂಪತಿಯನ್ನು  ಕೊಚ್ಚಿ ನೆರೆಮನೆಯ ವ್ಯಕ್ತಿ ಬರ್ಬರವಾಗಿ ಹತ್ಯೆ ಮಾಡಿದಘಟನೆ ಬುಧವಾರ ನಡೆದಿದೆ.  ನೆರೆಮನೆಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.. ಮೃತ ಪಟ್ಟವರನ್ನು ವಿನ್ಸೆಂಟ್‌ ಡಿಸೋಜ (50) ಹಾಗೂ ಅವರು ಪತ್ನಿ ಹೆಲಿನ್‌ ಡಿಸೋಜ (45) ಎಂದು ಗುರುತಿಸಲಾಗಿದೆ. ವಿನ್ಸೆಂಟ್‌ ಡಿಸೋಜರವರು ನಿವೃತ್ತ ಸೈನಿಕರು ಎಂದು ತಿಳಿದು ಬಂದಿದೆ.

ಕೊಲೆ ಮಾಡಿದ ಆರೋಪಿ ಅಲ್ಪೊನ್ಸ್ ಸಲ್ಡಾನ ನೆರೆಮನೆಯ ವ್ಯಕ್ತಿ ಎಂದು ತಿಳಿದು ಬಂದಿದ್ದು ಘಟನಾ ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ| ಪಿ.ಎಸ್.ಹರ್ಷ,ಎಸಿಪಿ ಬೆಳ್ಳಿಯಪ್ಪ ಹಾಗೂ ಮೂಲ್ಕಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ಕೈಗೊಂಡು ಆರೋಪಿಯನ್ನು ಬಂದಿಸಿದ್ದಾರೆ. ಈ ಕೊಲೆಯ ಕಾರಣ ಕ್ಷುಲಕ್ಕವಾಗಿದ್ದು, ನೆರೆ ಮನೆಯವರ ಗಡಿಗಾಗಿ, ಗಡಿಗೆ ತಾಗಿ ಮನೆಗೆ ಪಕ್ಕದಲ್ಲಿರುವ ಮರಕ್ಕಾಗಿ ಯಾವಾಗಲೂ ಇವರೊಳಗೆ ಜಗಳವಾಗುತ್ತ ಇದ್ದು ಇಂದು ವಿಕೋಪಕ್ಕೆ ತಿರುಗಿ ಕೇವಲ ಒಂದು ಮರಕ್ಕಾಗಿ ಎರಡು ಅಮೂಲ್ಯ ಜೀವಗಳು ಬಲಿಯಾಗಿರುವುದು ದುರಾದ್ರಷ್ಟವೆ ಸರಿ.

 ಗಂಭೀರ ಗಾಯಗಳಿಂದಾಗಿ  ವಿನ್ಸೆಂಟ್‌ ಡಿಸೋಜರವರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಅವರ ಪತ್ನಿ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಹಳೆಯ ದ್ವೇಷದಿಂದ ಆರೋಪಿ ಅಲ್ಪೊನ್ಸ್ ಸಲ್ಡಾನ ಪಿಕ್ಕಾಸು ಹಾಗೂ ಹಾರೆಯಿಂದ ದಂಪತಿಗೆ ಹಲ್ಲೆ ಮಾಡಿ ಮನೆಯ ಮುಂಭಾಗದಲ್ಲೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.