ಕಲ್ಯಾಣಪುರದಲ್ಲಿ ತರಕಾರಿ ಟೆಂಪೋ ಅಪಘಾತ ಕುಂದಾಪುರದ ಇಬ್ಬರ ಧುರ್ಮರಣ

JANANUDI.COM NETWORK

 

 

 

ಕಲ್ಯಾಣಪುರದಲ್ಲಿ ತರಕಾರಿ ಟೆಂಪೋ ಅಪಘಾತ ಕುಂದಾಪುರದ ಇಬ್ಬರ ಧುರ್ಮರಣ

 

 

 

ಕುಂದಾಪುರ, ಜೂ.19: ಕುಂದಾಪುರದಿಂದ ಉಡುಪಿಗೆ ಸಾಗುತಿದ್ದ ತರಕಾರಿ ಟೆಂಪೋ ಕಲ್ಯಾಣಪುರದ ಆಶಿರ್ವಾದ್ ಚಿತ್ರಮಂದಿರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಗತ ಕಮಾನಿಗೆ ಡಿಕ್ಕಿ ಹೊಡೆದು ಚಾಲಕ ಸಮೇತ ಸಹಪ್ರಯಾಣಿಕ ಸಹಿತ ಇಬ್ಬರು ಸಾವನ್ನಪ್ಪಿದ ಧುರ್ಘಟನೆ ಸಂಭವಿಸಿದೆ.
ಉಡುಪಿ ಸಂಚಾರ ಠಾಣೆಯ ಪೊಲೀಸರು   ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು
ಈ ಧುರ್ಘಟನೆಯಲ್ಲಿ ಚಾಲಕ ಕುಂದಾಪುರ ತಾಲೂಕು ಬಳ್ಕೂರಿನ ದಿನೇಶ (35) ಮತ್ತು ಸಹಪ್ರಯಾಣಿಕ ನೀರಜ್ ಯಾನೆ ಮಂಜು (21) ಮ್ರತ ಪಟ್ಟವರಾಗಿದ್ದಾರೆ.

ನೀರಜ್ ಕಾಲೇಜು ವಿದ್ಯಾರ್ಥಿಯಾಗಿದ್ದ

 

 

ನೀರಜ್ ಕುಂದಾಪುರ ತಾಲೂಕು ಕಂದಾವರ ಗ್ರಾಮದ ಹೇರಿಕೆರೆ ನಿವಾಸಿ ನರಸಿಂಹ ಹಾಗೂ ಲಕ್ಷ್ಮಿ ದಂಪತಿಯ ಪುತ್ರನಾಗಿದ್ದು ಆತ ಬಸ್ರೂರು ಶಾರದ ಕಾಲೇಜಿನ ದ್ವೀತಿಯ ಪದವಿಯ ವಿದ್ಯಾರ್ಥಿಯಾಗಿದ್ದು, ಉತ್ತಮ ವಾಲಿಬಾಲ್ ಪಟುವಾಗಿದ್ದರು. ಲಾಖ್ ಡೌನ್ ನಿಂದಾಗಿ ಕಾಲೇಜಿಗೆ ರಜೆ ಇದ್ದುದರಿಂದ ದಿನೇಶ್ ಅವರೊಂದಿಗೆ ತರಕಾರಿ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನು. ಈತ ಒರ್ವ ತಂಗಿಯನ್ನು ಅಗಲಿದ್ದಾನೆ.

ದಿನೇಶ್ ತರಕಾರಿ ವ್ಯಾಪರಿಯಾಗಿದ್ದ

 

 

ಕಂದಾವರ ಗ್ರಾಮದ ದಿನೇಶ್ ನಚ್ಚೂರಿನ ಬಸವ ಹಾಗೂ ಪದ್ದು ದಂಪತಿಯ ಪುತ್ರನಾಗಿದ್ದು ಈತ ಹಲವಾರು ವರ್ಷಗಳಿಂದ ನಿಗದಿತ ದಿನಗಳಲ್ಲಿ ವಿವಿಧೆಡೆ ತರಕಾರಿ ಮಾರಾಟ ಮಾಡುತಿದ್ದರು. ದಿನೇಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ