ಪ್ರೀತಿಸಿದಕ್ಕೆ ಯುವಕನ ಕಣ್ಣು ಕೀಳಿದರು: ರಾಜ್ಯದಲ್ಲಿ ಅಮಾನವೀಯ ಘಟನೆ

JANANUDI.COM NETWORK

ಬೆಂಗಳೂರು, ಫೆ. 23: ಓರ್ವ ಯುವತಿಯನ್ನು ಪ್ರೀತಿಸಿದ ಆರೋಪಕ್ಕೆ ಯುವತಿಯ ಪೋಷಕರು ಯುವಕನೋರ್ವನ ಕಣ್ಣು ಕೀಳಿಸಿ ಅಮಾನವೀಯತೆ ಘಟನೆ ನಡೆದಿದೆ. ಇದು ಬೆಂಗಳೂರು ಸಮೀಪ ಹುಳಿಮಾವು ಎಂಬಲ್ಲಿ ನಡೆದಿದೆ.
ಹುಳಿಮಾವು ನಿವಾಸಿ ಚರಣ್ ಎಂಬ ಯುವಕನ ಕಣ್ಣಿಗೆ ಚಾಕುವಿನಿಂದ ತಿವಿದು ಹಾನಿ ಮಾಡಿದ ಗಣೇಶ, ಸೋಮು, ಚಿಂಟು ಮತ್ತು ಮನು ಎಂಬವರು ಪರಾರಿಯಾಗಿದ್ದಾರೆ.
ಈ ಘಟನೆ ಬಗ್ಗೆ ಹುಲಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಚರಣ್ ಅಜ್ಜಿ ಸರೋಜಮ್ಮ ಮಾತನಾಡಿ ಪೊಲೀಸರನ್ನು ದೂರುತ್ತಾ ‘ಕಣ್ಣು ಕಿತ್ತು ಜೀವಕ್ಕೆ ಹಾನಿ ಮಾಡಿದವರ ಜೊತೆ ರಕ್ಷಣೆಗೆ ಪೊಲೀಸರು ನಿಂತಿದ್ದಾರೆ’ ಎಂದು ಆರೋಪಿಸಿದ್ದಾರೆ. ಹಾಗೆ ಈ ಘಟನೆ ಬಗ್ಗೆ ನ್ಯಾಯಕ್ಕಾಗಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. .