ಜನರ ಆರೋಗ್ಯ ರಕ್ಷಣೆಗೆ ಯೋಗ ಪೂರಕವಾಗಿದೆ. ಎಲ್ಲ ಅರ್ಹ ವ್ಯಕ್ತಿಗಳೂ ಯೋಗಾಭ್ಯಾಸ ಮಾಡಬೇಕು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಜನರ ಆರೋಗ್ಯ ರಕ್ಷಣೆಗೆ ಯೋಗ ಪೂರಕವಾಗಿದೆ. ಎಲ್ಲ ಅರ್ಹ ವ್ಯಕ್ತಿಗಳೂ ಯೋಗಾಭ್ಯಾಸ ಮಾಡಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಚಿಂತಕಿ ಮಂಗಲಾ ಸತ್ಯಮೂರ್ತಿ ಹೇಳಿದರು.
ಪಟ್ಟಣದ ವೈಆರ್‍ಎಸ್ ಸಭಾಂಗಣದಲ್ಲಿ ಮಂಗಳವಾರ ಪತಂಜಲಿ ಮುದ್ರಾಯೋಗ ಶಿಕ್ಷಣ ಸಮಿತಿ ವತಿಯಿಂದ ಏರ್ಪಡಿಸಿದ್ದ ರಥಸಪ್ತಮಿ ಸಮಾರಂಭದಲ್ಲಿ ಮಾತನಾಡಿ, ರಥಸಪ್ತಮಿ ಯೋಗ ಪ್ರಚಾರಕ್ಕೆ ಸೂಕ್ತ ಸಂದರ್ಭವಾಗಿದ್ದು, ಎಲ್ಲರೂ ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಯೋಗ ಗುರುಗಳಾದ ರಾಮಚಂದ್ರಪ್ಪ, ವೆಂಕಟೇಶ್ ಯೋಗದ ಮಹತ್ವ ಕುರಿತು ಮಾತನಾಡಿದರು. ಪ್ರದೀಪ್ ತಂಡದ ವತಿಯಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೂರ್ಯ ನಮಸ್ಕಾರ ಹಾಗೂ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು.
ಯೋಗಪಟುಗಳಾದ ಶಂಕರೇಗೌಡ, ಸಿದ್ದಾರೆಡ್ಡಿ, ಪದ್ಮ, ಜಿ.ವಿ.ಚಂದ್ರಪ್ಪ ಇದ್ದರು.