

ಶ್ರೀನಿವಾಸಪುರ: ಶ್ರೀನಿವಾಸಪುರ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ವೈ.ಆರ್.ನಾಗೇಂದ್ರಬಾಬು ರವರನ್ನ ಭಾನುವಾರ ದಾವಣಗರೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಾಸವಿಕನ್ಯಕಾಪರಮೇಶ್ವರಿ ದೇವಾಲಯಗಳ ಒಕ್ಕೂಟ ಪ್ರಥಮ ಸಮಾವೇಶದಲ್ಲಿ ಮೆಡಲ್ ನೀಡುವುದರ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಾಸವಿಕನ್ಯಕಾಪರಮೇಶ್ವರಿ ದೇವಾಲಯದ ಒಕ್ಕೂಟದ ಅಧ್ಯಕ್ಷ ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಸ್.ಆರ್. ಅಮರನಾಥ್, ಶ್ರೀನಿವಾಸಪುರ ಆರ್ಯವೈಶ್ಯ ಸಂಘದ ಸದಸ್ಯ ಎಸ್.ವಿ.ರಾಮನಾಥ್ ಇದ್ದರು