ಕುಂದಾಪುರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ವಿಶ್ವ ಆರೋಗ್ಯ ದಿನಾಚರಣೆ

JANANUDI.COM NETWORK


ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕ ತಾರೀಕು 10-4-2021 ರಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷದಿ ಕೇಂದ್ರದ ಎದುರು Free medical camp ( BP, Sugar and E. C. G) ಆಯೋಜಿಸಿದರು. ಇದರ ಅಧ್ಯಕ್ಷತೆಯನ್ನು ನಮ್ಮ ಸಭಾಪತಿಯವರಾದ ಶ್ರೀ ಎಸ್ ಜಯಕರ ಶೆಟ್ಟಿ ವಹಿಸಿದರು. ಉದ್ಗಾಟಕರಾಗಿ ವಿನಯ ಆಸ್ಪತ್ರೆಯ MD, ಮತ್ತು ನುರಿತ ಸರ್ಜನ್ ಡಾ. ವಿಶ್ವನಾಥ ಶೆಟ್ಟಿ ನಿರ್ವಹಿಸಿದರು. ಮುಖ್ಯ ಅತಿಥಿ ಲಯನ್ಸ್ ಅದ್ಯಕ್ಷರಾದ ಚಂದ್ರಶೇಖರ ಕೆ. ಭಾಗವಹಿಸಿದರು. ಸಭಾಪತಿ ಜಯಕರ ಶೆಟ್ಟಿ ಯವರು ಸ್ವಾಗತಿಸಿದರು. ಡಾ. ವಿಶ್ವನಾಥ ಶೆಟ್ಟಿ ಯವರು ದೀಪ ಬೆಳಗಿ ಉದ್ಘಾಟಿಸಿದರು. ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ಯವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಗೈದರು. ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಸೀತಾರಾಮ ನಕ್ಕತ್ತಾಯ, ಡಾ. ಸೋನಿ, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಡಿಗ, ಅಬ್ದುಲ್ ಬಶೀರ್, ಶಶಿಧರ ಶೆಟ್ಟಿ ಮತ್ತು ಲಯನ್ಸಿನ ಸದಸ್ಯರುಗಳು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು.