

ಮಣಿಪಾಲದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ & ಗ್ಯಾಲರಿಯಲ್ಲಿ ಏಪ್ರಿಲ್ 15ರಂದು ಹಮ್ಮಿಕೊಳ್ಳಲಾದ ವಿಶ್ವಕಲಾ ದಿನಾಚರಣೆಯ ಪ್ರಯುಕ್ತ ಬೃಹತ್ 'ಮೊನಾಲಿಸಾ' ರಂಗೋಲಿ ಕಲಾಕೃತಿಯ ಮೂಲಕ ಕಲಾ ವಿದ್ಯಾರ್ಥಿ ಹಾಗೂ ಪೋಷಕ ಸಮೂಹ ಸಂಭ್ರಮಿಸಿದರು. ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಸಿಹಿ ಹಂಚುವುದರ ಮೂಲಕ ಉದ್ಘಾಟಿಸಿ, ವಿಶ್ವಾದ್ಯಂತ ಸೃಜನಶೀಲ ಚಟುವಟಿಕೆಯ ಬಗ್ಗೆ ಜಾಗೃತಿಮೂಡಿಸಲು ವಿಶ್ವಕಲಾ ದಿನಾಚರಣೆಯ ಮೂಲಕ ಸಮಾಜದ ನಡುವಿನ ಸಂಪಕರ್ವನ್ನು ಇನ್ನಷ್ಟು ಬಲಪಡಿಸಲು ಸಾಧ್ಯ ಎಂದು ಉಡುಪಿ ವಲಯದ ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಶಿಯೇಷನ್ ಮಾಜಿ ಆಧ್ಯಕ್ಷರಾದ ಶ್ರೀ ಜನಾರ್ಧನ ಕೊಡವೂರುರವರು ತಿಳಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ, ಸಮಾಜ ಸೇವಕಿ ಶ್ರೀಮತಿ ಶ್ಯಾಮಲ ಎಸ್. ಕುಂದರ್, ವಿದ್ಯಾರ್ಥಿ ಪೋಷಕರಾದ ಶ್ರೀಮತಿ ವಾಣಿ ರಾವ್ ಅತಿಥಿ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಮೊನಾಲಿಸ ಬ್ರಹತ್ ರಂಗೋಲಿ:-
ಇಲ್ಲಿನ ಕಲಾ ವಿದ್ಯಾರ್ಥಿಯರಾದ ಅನೂಷ ಆಚಾರ್ಯ, ಉಜ್ವಲ್ ನಿಟ್ಟೆ, ಅಶ್ವಿನಿ ಶೆಟ್ಟಿ, ಮೀತಾ ಪೈಯವರ ಕೈಯಲ್ಲಿ ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ಮೂಡಿ ಬಂದ 150 ಚ.ಅಡಿ ವಿಸ್ತೀರ್ಣದ ಮೊನಾಲಿಸ ಕಲಾಕೃತಿಯು ಎಲ್ಲರನ್ನು ಆಕರ್ಷಿಸಿದವು.
ವಿವಿಧ ಪ್ರಶಸ್ತಿಗಳು:-
ಭಾವನಾತ್ಮಕವಾಗಿ ಕಲೆಯಲ್ಲಿ ಸ್ಪಂದಿಸಿದಾಗ ಮಾತ್ರ ಇಂತಹ ಕಲಾಚಟುವಟಿಕೆಗಳು ಮೂಡಿ ಬರಲು ಸಾಧ್ಯ ಎಂದು ಬಣ್ಣಿಸಿದ ಶ್ರೀಮತಿ ಶ್ಯಾಮಲ ಎಸ್. ಕುಂದರ್ ರವರು ಇತ್ತೀಚಿಗೆ ನಡೆದ ಮಣಿಪಾಲ ಮತ್ತು ಕುಂದಾಪುರದ ತ್ರಿವರ್ಣ ಆರ್ಟ್ ಕ್ಲಾಸ್ಸಸ್ನ 19 ರಿಂದ 75 ವಯೋಮಿತಿಯ 23 ವಿದ್ಯಾರ್ಥಿಯರ ‘ಪರಂಪರಾ’ ಚಿತ್ರಕಲಾ ಪ್ರದಶನದ ಅಭಿನಂದನಾ ಪತ್ರ ಮತ್ತು ವಿವಿಧ ಪ್ರಶಸ್ತಿಗಳನ್ನು ವಿತರಿಸಿದರು. ‘ದಿ ಬೆಸ್ಟ್ ಆರ್ಟ್ ವರ್ಕ್’ ಪ್ರಶಸ್ತಿಯನ್ನು ಶರಣ್ ಎಸ್. ಕುಮಾರ್, ‘ದಿ ಬೆಸ್ಟ್ ಪಬ್ಲಿಕ್ ವೀವ್ಹ್ ಆರ್ಟ್’ ಪ್ರಶಸ್ತಿಯನ್ನು ಉಜ್ವಲ್ ನಿಟ್ಟೆ, ಹಾಗೂ ‘ಲಕ್ಕಿ ವಿನ್ನರ್’ ಪ್ರಶಸ್ತಿಯನ್ನು ಲತಾ ಭಾಸ್ಕರ್, ರೇವತಿ ಡಿ., ಯಶಾ ಜಿ, ಸುಷ್ಮಾ ಪೂಜಾರಿ, ಸಂಜನಾ ಶ್ರೀನಿವಾಸ್ ಕಲಾಪ್ರಶಸ್ತಿಯೊಂದಿಗೆ ಒಟ್ಟು 18,500 ಸಾವಿರ ರೂ. ಗಳ ನಗದನ್ನು & ಭಾಗವಹಿಸಿದ ವಿದ್ಯಾರ್ಥಿಯರು ಅಭಿನಂದನಾ ಪತ್ರವನ್ನು ಸ್ವೀಕರಿಸಿದರು.
ಕಲಾ ಕೇಂದ್ರದ ಮಾಗದರ್ಶಕ, ಕಲಾವಿದ ಹರೀಶ್ ಸಾಗಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಕಲಾ ದಿನಾಚರಣೆಯ ಬಗ್ಗೆ ಮಾತುಗಳನ್ನಾಡಿದರು. ಕಲಾವಿದ್ಯಾರ್ಥಿಯರಾದ ವಿಧು ಶಂಕರ್ ಬಾಬು ಪ್ರಾರ್ಥಿಸಿ, ಅರುಣಾ ನಾಯರ್ ಕಾರ್ಯಕ್ರಮ ನಿರೂಪಿಸಿ, ಉಜ್ವಲ್ ನಿಟ್ಟೆ ವಂದಿಸಿದರು.

