ಪಶ್ಚಿಮ ಬಂಗಾಳ: ಸಿಡಿಲಿಗೆ 26ಕ್ಕೂ ಹೆಚ್ಚು ಮಂದಿ ಬಲಿ

JANANUDI.COM NET WORK

ಕೊಲ್ಕತ್ತಾ,ಜೂ.8:ಪಶ್ಚಿಮ ಬಂಗಾಳದಲ್ಲಿ ಸಿಡಿಲು ಹೊಡೆದು ಸುಮಾರು 26ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ,  ಹೂಗ್ಲಿ ಜಿಲ್ಲೆಯಲ್ಲಿ. 11 ಮಂದಿ ಮುರ್ಶಿದಾಬಾದ್​ನಲ್ಲಿ 9, ಬಂಕುರಾದಲ್ಲಿ ಇಬ್ಬರು, ಮಿಡ್ನಾಪುರದಲ್ಲಿ ಇಬ್ಬರು ಹಾಗೂ ಪಶ್ಚಿಮ ಮಿಡ್ನಾಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

      ಈ ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಪ್ರಾಣಕಳೆದುಕೊಂಡ ಕುಟುಂಬ ಸದಸ್ಯರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ ಆರ್ ಎಫ್) ಯಿಂದ ತಲಾ ಎರಡು ಲಕ್ಷ ರೂಪಾಯಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ಇನ್ನೂ ಸಿಡಿಲು ಹೊಡೆದು ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಕೊಡುವುದಾಗಿ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.