ಕೆಯುಡಿದ ಅಧ್ಯಕ್ಷ ಓಂಶಕ್ತಿ ಚಲಪತಿ ಬಜೆಟ್‌ಗೆ ಸ್ವಾಗತ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ

ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ , ಜನಸ್ನೇಹಿ ಬಜೆಟ್ , ಮಧ್ಯಮ ವರ್ಗದವರು ಉಸಿರಾಡುವಂತಾಗಿದೆ . ತೆರಿಗೆ ಪಾವತಿಗೆ ೨ ವರ್ಷ ಅವಧಿ ವಿಸ್ತರಣೆ ಶುಭ ಸುದ್ದಿ , ಜನ ತಮ್ಮ ಸಂಪಾದನೆಯನ್ನು ಪಾರದರ್ಶಕವಾಗಿಟ್ಟುಕೊಳ್ಳಲು ಸಹಕಾರಿಯಾಗಲಿದೆ . ಇದೊಂದು ಜನಪರವಾದ ಬಜೆಟ್ ಆಗಿದೆ ಎಂದು ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ .