


ಉಡುಪಿ ಜಿಲ್ಲಾಡಳಿತ ಹಾಗೂ SVEEP ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ -2024 ರ ಪ್ರಜಾಪ್ರಭುತ್ವ ಸಂಭ್ರಮದಲ್ಲಿ ನೈತಿಕ ಮತದಾರರಾಗಿ , ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ನಡೆಯುವ ಏಪ್ರಿಲ್ 26 ಹಾಗೂ
ಮೇ 07ರಂದು ತಮ್ಮ ಮತದಾನದ ಹಕ್ಕು ಚಲಾಯಿಸುವಂತೆ ಮರಳು ಶಿಲ್ಪದ ಮೂಲಕ ಜನ ಜಾಗೃತಿಯನ್ನು ಸಾರುವ ” *ಚುನಾವಣಾ ಪರ್ವ – ದೇಶದ ಗರ್ವ * ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾಕೃತಿಯನ್ನು ಮಲ್ಪೆ ಕಡಲ ತೀರದಲ್ಲಿ ಮೂಡಿಸಿದರು .
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹನಾಧಿಕಾರಿ ಪ್ರತೀಕ್ ಬಾಯಲ್, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಶ್ರೀಮತಿ ಮೀನಾ ನಾಗರಾಜು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಚಿಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಕರಾವಳಿ ಕಾವಲು SP ಮಿಥುನ್, ಡಿ. ಸಿ. ಎಫ್ ಉಡುಪಿ ಗಣಪತಿ, ವೈಲ್ಡ್ ಲೈಫ್ ಶಿವರಾಮ್ ಬಾಬು ಸ್ಯಾಂಡ್ ಥೀಮ್, ಉಡುಪಿ ತಂಡದ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್, ಹಾಲಾಡಿ, ಉಜ್ವಲ್ ನಿಟ್ಟೆ ಉಪಸ್ಥಿತರಿದ್ದರು.


